ಬ್ರೇಕಿಂಗ್ ನ್ಯೂಸ್
14-09-22 02:22 pm HK News Desk ಸಿನಿಮಾ
ಈಗ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಒಟಿಟಿ ಕನ್ನಡ ಹೌಸ್ ದೊಡ್ಡ ಸಂಭ್ರಮಾಚರಣೆಗಳು, ಗದ್ದಲ-ಜಗಳಗಳು, ಪ್ರೀತಿಯ ಹೊಸ ಸ್ನೇಹಗಳು, ಮೊಳಕೆಯೊಡೆಯುವ ಹೊಸ ಪ್ರೇಮಕಥೆಗಳು, ಅಸೂಯೆ ಮತ್ತು ಇನ್ನೂ ಹೆಚ್ಚಿನ ಭಾವನೆಗಳ ವರ್ಣಪಟಲಕ್ಕೆ ಸಾಕ್ಷಿಯಾಗಿದೆ. ಬಿಗ್ ಬಾಸ್ ಒಟಿಟಿ ಕನ್ನಡದ ಈ ಮೊದಲ ಸೀಸನ್ ನ ಜನಪ್ರಿಯ ಸ್ಪರ್ಧಿಗಳು ಪ್ರತಿ ಹೊಸ ದಿನ ಮತ್ತು ಟಾಸ್ಕ್ ನೊಂದಿಗೆ ಮನರಂಜನೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಪವರ್ –ಪ್ಯಾಕ್ಡ್ ಸೀಸನ್ ಕೊನೆಗೊಳ್ಳುತ್ತಿದ್ದಂತೆಯೇ ಈ ಋತುವಿನ ಕೆಲವು ದೊಡ್ಡ ಕ್ಷಣಗಳ ಸ್ಟಾಕ್ ಅನ್ನು ನೋಡೋಣ!
1. ಉದಯ ಸೂರ್ಯರ ಎಲಿಮಿನೇಷನ್
ಮೂರನೇ ವಾರದಲ್ಲಿ ಎಲಿಮಿನೇಷನ್ ಪ್ರತಿ ದಿನವೂ ಹೊಸ ಹೊಸ ಟ್ವಿಸ್ಟ್ ಕಾಣಿಸಿಕೊಳ್ಳುವುದರೊಂದಿಗೆ ವೀಕ್ಷಕರನ್ನು ಸ್ಕ್ರೀನ್ ಮೇಲೆ ಮೂಡಿಬರುವಂತೆ ಮಾಡಿದೆ. ಇಡೀ ವಾರ, ಎಲ್ಲಾ ಸ್ಪರ್ಧಿಗಳು ಜಯಶ್ರೀ ಮನೆಯಿಂದ ಹೊರ ಬರುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ, ಸಾನ್ಯಾ ಬಗ್ಗೆ ಚೈತ್ರ ಅವರೊಂದಿಗೆ ಉದಯ್ ಸಂಭಾಷಣೆಯ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ. ಮೂರನೇ ವಾರದ ಕ್ಯಾಪ್ಟನ್ಸಿ ಟಾಸ್ಕ್ ಗೆ ಸಂಬಂಧಿಸಿದಂತೆ ಜಯಶ್ರೀ ಅವರ ಅನುಚಿತ ವರ್ತನೆ ಮತ್ತು ಸ್ಪರ್ಧಿಯ ಕಣ್ಣಿಗೆ ಸುಗಂಧ ದ್ರವ್ಯವನ್ನು ಸಿಂಪಡಿಸದಂತೆ ಬಿಗ್ ಬಾಸ್ ತಡೆದ ಕ್ಷಣದ ಮೇಲೆ ಕೇಂದ್ರೀಕರಿಸಿದೆ. ಇದರ ಪರಿಣಾಮ, ಪ್ರತಿಯೊಬ್ಬರೂ ಆಕೆಯನ್ನು `ವಾರದ ಕೆಟ್ಟ ಸ್ಪರ್ಧಿ’ ಎಂದು ನಿರ್ಧರಿಸಿದರು ಮತ್ತು ಆಕೆ ಕಂಬಿಯ ಹಿಂದೆ ಸೇರಬೇಕಾಯಿತು. ಎಪಿಸೋಡ್ ನ ನಂತರದ ಭಾಗದಲ್ಲಿ ನಂದಿನಿ, ಜಶ್ವಂತ್ ಮತ್ತು ಸಾನ್ಯ ಬಗ್ಗೆ ಉದಯ್ ಪ್ರತಿಕ್ರಿಯಿಸಿದ ರೀತಿಯನ್ನು ಚೈತ್ರಾ ವಿರೋಧಿಸಲು ಮುಂದಾಗುತ್ತಾರೆ. ಈ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದ ಚೈತ್ರಾ ಅವರನ್ನು ಸುದೀಪ್ ಶ್ಲಾಘಿಸುತ್ತಾರೆ. ಅವರು ಮಾತನಾಡುವ ಸಂದರ್ಭದಲ್ಲಿ ಉದಯ್ ಅವರನ್ನು ತರಾಟೆಗೆ ತೆಗೆದುಕೊಂಡರು. ಉದಯ್ ಅವರು ಇತರ ಸ್ಪರ್ಧಿಗಳನ್ನು ಕೆಟ್ಟದಾಗಿ ಮಾತನಾಡುವ ಅಭ್ಯಾಸದಿಂದ ಸುದ್ದಿಯಲ್ಲಿದ್ದಾರೆ.
2. ಜಶ್ವಂತ್ ಮತ್ತು ನಂದುನ ಜಗಳ
ಜಶ್ವಂತ್ ಅವರೊಂದಿಗೆ ನಂದು ಅವರ ಜಗಳ ಮನೆಯಲ್ಲಿ ಸ್ವಲ್ಪ ಕಸಿವಿಸಿಯನ್ನು ಉಂಟುಮಾಡಿತು. ಗಾಢವಾದ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಪರಸ್ಪರ ಕಿತ್ತಾಡಿಕೊಂಡಿದ್ದನ್ನು ಈ ಎಪಿಸೋಡ್ ನಲ್ಲಿ ನೋಡಲಾಯಿತು ಮತ್ತು ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಇದನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ತಮ್ಮಿಬ್ಬರ ಸಂಬಂಧದ ಗಂಭೀರವಾಗಿರುವ ಬಗ್ಗೆ ನಂದಿನಿ ಜಶ್ವಂತ್ ಅವರನ್ನು ಪ್ರಶ್ನೆ ಮಾಡುವುದರೊಂದಿಗೆ ಇಬ್ಬರ ನಡುವೆ ಜಗಳ ಶುರವಾಯಿತು. ಈ ಪ್ರಶ್ನೆ ಇಬ್ಬರ ಮಧ್ಯೆ ಬಿಸಿಬಿಸಿಯಾದ ವಾದ- ವಿವಾದಕ್ಕೆ ತಿರುಗಿತು. ನಂದಿನಿ ತನಗೆ ಅಭದ್ರತೆ ಕಾಡುತ್ತಿದೆ ಎಂಬುದರ ಬಗ್ಗೆ ಹೇಳಿಕೊಂಡಳು ಮತ್ತು ತನ್ನ ಜೊತೆಗೆ ಪ್ರೀತಿ ಗಂಭೀರವಾಗಿಲ್ಲದಿದ್ದರೆ ಬೇರೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳುವಂತೆ ಜಶ್ವಂತ್ ನಲ್ಲಿ ಹೇಳುತ್ತಾಳೆ. ಈ ಮಾತು ಇಬ್ಬರ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗುತ್ತದೆ. ಆದರೆ, ನಂದಿನಿಯ ಅಭದ್ರತೆ ಮಾತುಗಳು ಜಶ್ವಂತ್- ಸಾನ್ಯಾ ನಡುವೆ ಸ್ನೇಹ ಗಾಢವಾಗಿ ಕೇಂದ್ರೀಕೃತವಾಗುತ್ತಿದ್ದುದರ ಮೇಲೆ ಕೇಳಿಬಂದವು.
3. ಚೈತ್ರ ಹಳ್ಳಿಕೆರೆ ಮತ್ತು ಜಯಶ್ರೀ ಸ್ನೇಹದ ಗುರಿಗಳು
ಬಿಗ್ ಬಾಸ್ ಒಟಿಟಿ ಕನ್ನಡದ ಸೆಟ್ ನಲ್ಲಿ ಚೈತ್ರಾ ಹಳ್ಳಿಕೆರೆ ಮತ್ತು ಜಯಶ್ರೀ ಪರಸ್ಪರ ಮಾತನಾಡಲು ಆರಂಭಿಸಿದಾಗ ಅವರಿಬ್ಬರ ನಡುವೆ ವಿಶೇಷ ಬೆಳೆದಂತೆ ನಡೆಯಿತು. ಈ ಸ್ನೇಹವು ಬೇಗ ಅರಳಿತು ಮತ್ತು ಚೈತ್ರಾ ಮನೆಯಲ್ಲಿ ಜಯಶ್ರೀಯ ರಕ್ಷಕ ದೇವತೆಯಂತೆ ಹೊರಹೊಮ್ಮಿದರು. ಜಯಶ್ರೀ ಕೂಡ ಚೈತ್ರಾರನ್ನು ತಾಯಿಯ ರೂಪದಲ್ಲಿ ನೋಡಿದರು. ಆದರೆ, ತನ್ನ ಸ್ನೇಹಿತೆ ಮನೆಯಿಂದ ಹೊರಬಿದ್ದ ಸಂದರ್ಭದಲ್ಲಿ ಜಯಶ್ರೀ ಗದ್ಗತಿಳಾಗಿ ಅತ್ತರು. ಸ್ಪರ್ಧೆಗಳನ್ನು ಬುದ್ಧಿವಂತಿಕೆಯಿಂದ ಎದುರಿಸಬೇಕು. ಮನೆಯಲ್ಲಿ ಎಂತಹದ್ದೇ ಕಠಿಣ ಪರಿಸ್ಥಿತಿಗಳು ಎದುರಾದರೂ ಅವುಗಳನ್ನು ಹೇಗೆ ಬುದ್ಧಿವಂತಿಕೆಯಿಂದ ಎದುರಿಸಬೇಕೆಂಬುದನ್ನು ಚೈತ್ರಾ ತಮಗೆ ಕಲಿಸಿಕೊಟ್ಟರು ಎಂದು ಜಯಶ್ರೀ ಹೇಳಿಕೊಂಡರು.
4. ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ ಗೌಡ ನಡುವೆ ರೊಮ್ಯಾನ್ಸ್
ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸಗೌಡ ನಡುವಿನ ರೊಮ್ಯಾನ್ಸ್ ಈ ವಾರದ ಆರಂಭದಲ್ಲಿನ ಪ್ರಮುಖ ಆಕರ್ಷಣೆಯಾಗಿತ್ತು. ವಾರಾಂತ್ಯದ ವೇಳೆಗೆ ಇವರಿಬ್ಬರು ಮತ್ತಷ್ಟು ಹತ್ತಿರವಾದರು. ಈ ಎರಡೂ ಲವ್ ಬರ್ಡ್ಸ್ ಈ ಸೀಸನ್ ನ ಜೋಡಿಯಾಗುತ್ತವೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ರಾಕೇಶ್ ಜಯಶ್ರೀ ನೀಡಿದ ಆ ಮುತ್ತು ಮನೆಯಲ್ಲಿನ ಸ್ಪರ್ಧಿಗಳು ಮತ್ತು ಅಭಿಮಾನಿಗಳಿಗೆ ದೊಡ್ಡ ಶಾಕ್ ಅನ್ನು ನೀಡಿತು.
5. ಹುಬ್ಬೇರಿಸುವಂತೆ ಮಾಡಿದ ಸಾನ್ಯ ಅಯ್ಯರ್ ಮತ್ತು ಜಶ್ವಂತ್
ಸಾನ್ಯ ಅಯ್ಯರ್ ಮತ್ತು ಜಶ್ವಂತ್ ಇಬ್ಬರೂ ಬಿಗ್ ಬಾಸ್ ಒಟಿಟಿ ಕನ್ನಡ ಹೌಸ್ ನಲ್ಲಿ ತುಂಬಾ ಹತ್ತಿರವಾದರು. ಇದನ್ನು ನೋಡಿದ ನಂದಿನಿಗೆ ಸಹಿಸಲಾಗಲಿಲ್ಲ. ಇದು ನಂದಿನಿ ಮತ್ತು ಜಶ್ವಂತ್ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಗೊಂದಲಕ್ಕೆ ಒಳಗಾದ ನಂದು ತಂಡದ ಇತರ ಸದಸ್ಯರು ತನ್ನ ಸ್ನೇಹಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು. ಆರಂಭದಲ್ಲಿ ನಂದಿನಿ, ಜಶ್ವಂತ್ ಮತ್ತು ಸಾನ್ಯ ಅಯ್ಯರ್ ಮೂವರೂ ಮನೆಯಲ್ಲಿ ಸುಮ್ಮನಾಗುತ್ತಿದ್ದಂತೆ ಕಂಡುಬಂದರೂ, ಜಶ್ವಂತ್ ಜೊತೆಗೆ ಅತ್ಯಂತ ನಿಕಟವಾಗುತ್ತಿರುವ ಸಾನ್ಯಾ ವಿರುದ್ಧ ನಂದಿನಿ ಜಗಳಕ್ಕೆ ಇಳಿದರು.
5 Bigg Boss OTT Kannada Big Moments that gripped the audience.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am