ಬ್ರೇಕಿಂಗ್ ನ್ಯೂಸ್
22-08-20 11:02 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 22: ಭಾರತ ಸರಕಾರ ವಿಶ್ವ ಸಂಸ್ಥೆ ಮತ್ತು ವಿಶ್ವ ರಾಷ್ಟ್ರಗಳಿಗೆ ಹಾಕಿದ ಒತ್ತಡಕ್ಕೆ ಕೊನೆಗೂ ಫಲ ಸಿಕ್ಕಿದೆ. ಪಾಕಿಸ್ಥಾನ ಕಡೆಗೂ ತನ್ನಲ್ಲಿರುವ 88 ಉಗ್ರರ ಪಟ್ಟಿಯನ್ನು ವಿಶ್ವ ಸಂಸ್ಥೆಗೆ ನೀಡಿದ್ದು ಉಗ್ರರಿಗೆ ಆರ್ಥಿಕ ನಿರ್ಬಂಧ ವಿಧಿಸುವುದಾಗಿ ಹೇಳಿಕೊಂಡಿದೆ. ಇದೇ ವೇಳೆ, ಈ ಪಟ್ಟಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನನ್ನೂ ಆ ಪಟ್ಟಿಗೆ ಸೇರಿಸಿದ್ದು ದಾವೂದ್ ಪಾಕಿಸ್ಥಾನದಲ್ಲೇ ಇರುವುದನ್ನು ಒಪ್ಪಿಕೊಂಡಿದೆ.
1993ರ ಮುಂಬೈ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿರುವುದಾಗಿ ಭಾರತ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು. ಆದರೆ, ಪಾಕ್ ಸರಕಾರ ಮಾತ್ರ ದಾವೂದ್ ಪಾಕಿಸ್ತಾನದ ನೆಲದಲ್ಲಿ ಇಲ್ಲ ಎಂದೇ ವಾದಿಸಿತ್ತು. ಈಗ 88 ಮಂದಿಯ ವಿಳಾಸ ಸಹಿತ ಹೆಸರನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ದಾವೂದ್ ವಿಳಾಸ ಕರಾಚಿ, ಕ್ಲಿಫ್ಟನ್ ಮಾರ್ಕೆಟ್ ಏರಿಯಾ ಎಂದು ನಮೂದಿಸಿರುವುದು ಆತನ ಬಗ್ಗೆ ಸುಳ್ಳಾಡುತ್ತಾ ಬಂದ ಪಾಕ್ ಬಣ್ಣವನ್ನು ಬಯಲು ಮಾಡಿದೆ.

ಈಗ ಉಗ್ರರ ವಿಚಾರದಲ್ಲಿ ವಿಶ್ವ ರಾಷ್ಟ್ರಗಳ ಒತ್ತಡಕ್ಕೆ ಮಣಿದ ಪಾಕ್ ಸರಕಾರ ಈಗ ಉಗ್ರರು, ಉಗ್ರ ಸಂಘಟನೆಗಳು ಸೇರಿ 88 ಮಂದಿಯನ್ನು ಗ್ರೇ ಲಿಸ್ಟ್ ಗೆ ಸೇರಿಸಿ ಆದೇಶ ಮಾಡಿದೆ. ಈ ಮೂಲಕ ಉಗ್ರರು ಅಥವಾ ಸಂಘಟನೆಗಳು ವಿದೇಶಗಳಿಂದ ಹಣ ಪಡೆಯುವಂತಿಲ್ಲ. ಪಾಕ್ ನೆಲದಲ್ಲಿ ಹಣದ ವಹಿವಾಟು ಮಾಡುವಂತೆಯೂ ಇಲ್ಲ. ಇವರ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದಾಗಿ ಪಾಕ್ ಹೇಳಿಕೊಂಡಿದೆ. ಇದರಲ್ಲಿ ಮುಂಬೈ ದಾಳಿಗೆ ಸಂಚು ನಡೆಸಿದ್ದ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಜೈಶ್ ಇ - ಮಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕೂಡ ಸೇರಿದ್ದಾನೆ. ಅಲ್ಲದೆ, ಉಗ್ರ ಸಂಘಟನೆಗಳಾದ ಜಮಾತ್ ಉದ್ ದಾವಾ, ಜೆಇಎಂ, ತಾಲಿಬಾನ್, ಡಾಯೆಶ್, ಹಕ್ಕಾನಿ ಗ್ರೂಪ್, ಅಲ್ ಕಾಯಿದಾ ಮತ್ತಿತರ ಮುಂಚೂಣಿ ಗುಂಪುಗಳು ಸೇರಿವೆ.
ಭಾರತದ ಪ್ರಧಾನಿ ಮೋದಿ ಅಮೆರಿಕ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಪಾಕಿಸ್ಥಾನವನ್ನು ಉಗ್ರ ಪೋಷಕ ರಾಷ್ಟ್ರವೆಂದು ಪರಿಗಣಿಸುವಂತೆ ಒತ್ತಡ ಹೇರಿದ್ದರು. ಅಲ್ಲದೆ, ವಿಶ್ವಸಂಸ್ಥೆಯಲ್ಲಿ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ರಾಷ್ಟ್ರಗಳು ಆರ್ಥಿಕ ನೆರವು ನೀಡಬಾರದೆಂದು ಒತ್ತಾಯಿಸಿದ್ದರು. ಅಮೆರಿಕ ಆರ್ಥಿಕ ನೆರವು ನಿಲ್ಲಿಸಿದ್ದು ಪಾಕಿಸ್ತಾನ ಸರಕಾರ ಉಗ್ರರ ವಿಚಾರದಲ್ಲಿ ಗಟ್ಟಿ ನಿಲುವು ತಾಳುವಂತೆ ಮಾಡಿದೆ. ಆದರೆ, ಈ ನಿರ್ಬಂಧ ಎಷ್ಟರ ಮಟ್ಟಿಗೆ ಫಲದಾಯಕ ಎನ್ನೋದು ನೋಡಬೇಕಷ್ಟೆ.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am