ಬ್ರೇಕಿಂಗ್ ನ್ಯೂಸ್
22-08-20 07:01 pm Headline Karnataka News Network ದೇಶ - ವಿದೇಶ
ಬೆಂಗಳೂರು, ಆಗಸ್ಟ್ 22: ಎರಡು ದಿನಗಳ ಹಿಂದಷ್ಟೇ ತನ್ನ ಹೊಸ ದೇಶದ ಬಗ್ಗೆ ಹೇಳಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಆಫ್ರಿಕಾ ಖಂಡದ ಈಕ್ವೆಡಾರ್ ದೇಶದ ಬಳಿಯ ದ್ವೀಪ ಒಂದರಲ್ಲಿ ಗಣೇಶ ಚತುರ್ಥಿ ದಿನವೇ ಹೊಸ ದೇಶದ ರಿಸರ್ವ್ ಬ್ಯಾಂಕ್ ಲಾಂಚ್ ಮಾಡಿದ್ದಾನೆ.
ಹೊಸ ದೇಶಕ್ಕೆ "ಕೈಲಾಸ" ಎಂದು ಹೆಸರಿಟ್ಟಿದ್ದು ಅಲ್ಲಿನ ಪ್ರಧಾನಿಯಾಗಿ ತನ್ನನ್ನೇ ಘೋಷಣೆ ಮಾಡಿಕೊಂಡಿದ್ದಾನೆ. 2019ರ ನವೆಂಬರ್ ನಲ್ಲಿ ಭಾರತದಿಂದ ನಾಪತ್ತೆಯಾದ ಬಳಿಕ ನಿತ್ಯಾನಂದ ಈ ಹೊಸ ದ್ವೀಪದಲ್ಲಿ ನೆಲೆಯಾಗಿದ್ದಾನೆ ಎನ್ನಲಾಗ್ತಿದೆ. ಈ ದ್ವೀಪ ಖಚಿತವಾಗಿ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಕೆಲವು ಮಾಧ್ಯಮಗಳ ಮಾಹಿತಿಯ ಪ್ರಕಾರ, ಈಕ್ವೆಡಾರ್ ದೇಶದ ಕರಾವಳಿ ತೀರದಲ್ಲಿರುವ ದ್ವೀಪ ಆಗಿದ್ದು ನಿತ್ಯಾನಂದ ಅದನ್ನು ಖರೀದಿಸಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಈಕ್ವೆಡಾರ್ ತನಗೆ ಸೇರಿದ ಯಾವುದೇ ದ್ವೀಪದಲ್ಲಿ ಅಂಥ ವ್ಯಕ್ತಿ ಇಲ್ಲ ಎಂದು ಹೇಳಿದೆ.

ತಮ್ಮ ದೇಶಗಳಲ್ಲಿ ಹಿಂದುತ್ವ ಪಾಲಿಸಲಾಗದೆ ಪರಿತ್ಯಕ್ತರಾದ ಹಿಂದುಗಳು ಸೇರಿ ಈ ಹೊಸ ದೇಶವನ್ನು ಕಟ್ಟಿದ್ದಾರೆ. ಈ ದೇಶಕ್ಕೆ ಯಾವುದೇ ಗಡಿಯ ಮಿತಿ ಇರುವುದಿಲ್ಲ. ನಾನೇನು ಹಿಂದು ಧರ್ಮ ಸುಧಾರಕ ಎಂದು ಹೇಳಿಕೊಳ್ಳಲ್ಲ. ಆದರೆ ಹಿಂದುಗಳನ್ನು ಎಚ್ಚರಿಸುವವನು ಎನ್ನಲು ಬಯಸುತ್ತೇನೆ ಎಂದು ಹೊಸ ವಿಡಿಯೋದಲ್ಲಿ ನಿತ್ಯಾನಂದ ಹೇಳಿದ್ದಾನೆ.
ನಿತ್ಯಾನಂದ ತನ್ನ ಅಧಿಕೃತ ವೆಬ್ ಸೈಟ್ www.kailasa.org ಮೂಲಕ ಹೊರ ಜಗತ್ತಿಗೆ ಮಾಹಿತಿ ತಿಳಿಸುತ್ತಿದ್ದಾನೆ.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am