ಬ್ರೇಕಿಂಗ್ ನ್ಯೂಸ್
20-08-20 09:46 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 20: ಕೊರೊನಾ ಲಾಕ್ ಡೌನ್ ಎಲ್ಲ ಕೈಗಾರಿಕಾ ಕ್ಷೇತ್ರಗಳನ್ನೂ ಅಡ್ಡಡ್ಡ ಮಲಗಿಸಿಬಿಟ್ಟಿದೆ. ಇದರಲ್ಲಿ ಹೆಚ್ಚಿನ ಬಿಸಿ ಅನುಭವಿಸಿರುವುದು ಆಟೋಮೊಬೈಲ್ ಕ್ಷೇತ್ರ. ಇದರ ಪರಿಣಾಮ ಎಂಬಂತೆ, ಜಗತ್ತಿನ ಅತಿ ದುಬಾರಿ ಮತ್ತು ಹೈಎಂಡ್ ಬೈಕ್ ಎಂದು ಹೆಸರು ಗಳಿಸಿರುವ ಅಮೆರಿಕನ್ ಮೂಲದ ಹರ್ಲೇ ಡೇವಿಡ್ಸನ್ ಭಾರತದಲ್ಲಿ ತನ್ನ ಉತ್ಪಾದನೆಯನ್ನೇ ನಿಲ್ಲಿಸಲು ಮುಂದಾಗಿದೆ.
ಜಗತ್ತಿನ ಅತಿ ದೊಡ್ಡ ಬೈಕ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಹರ್ಲೇ ಡೇವಿಡ್ಸನ್ ಬೈಕ್ ಗಳು 2019 -2020ರ ಸಾಲಿನಲ್ಲಿ ಕೇವಲ 2500 ಯೂನಿಟ್ ಗಳಷ್ಟೇ ಮಾರಾಟವಾಗಿವೆ. ಅದರಲ್ಲೂ ಕಳೆದ ಎಪ್ರಿಲ್ – ಜೂನ್ ಅವಧಿಯಲ್ಲಿ ನೂರು ಬೈಕ್ ಗಳಷ್ಟೇ ಸೇಲ್ ಆಗಿದ್ದವು. ದಿಢೀರ್ ಆಗಿ ಮಾರಾಟ ಕುಸಿತ ಕಂಡಿದ್ದರಿಂದ ಕಂಪನಿಯ ಮಾರ್ಕೆಟಿಂಗ್ ವಿಭಾಗ, ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಹರ್ಲೇ ಡೇವಿಡ್ಸನ್ ಕಂಪೆನಿ, ಹರ್ಯಾಣದ ಬವಾಲ್ ನಲ್ಲಿ 2009ರಿಂದ ಉತ್ಪಾದನಾ ಘಟಕ ಹೊಂದಿದ್ದು ಈ ಬಾರಿ ಅತಿ ಕಡಿಮೆ ಮಾರಾಟ ದಾಖಲಿಸಿದೆ. ಇದೇ ವೇಳೆ, ಹತ್ತಿರದ ಪ್ರತಿಸ್ಪರ್ಧಿ ರಾಯಲ್ ಎನ್ ಫೀಲ್ಡ್ 2019- 2020ರ ಸಾಲಿನಲ್ಲಿ ಭಾರತದಲ್ಲಿ 42 ಸಾವಿರ ಬೈಕ್ ಗಳನ್ನು ಮಾರಾಟ ಮಾಡಿದೆ.
ಆಮದು ತೆರಿಗೆ ಏರಿಳಿತವೂ ಕಾರಣ ?
ಅಮೆರಿಕದಲ್ಲಿ ದಿಢೀರ್ ಆಗಿ ಆಮದು ತೆರಿಗೆಯನ್ನು ಹೆಚ್ಚಿಸಿದ್ದೂ ಹರ್ಲೇ ಡೇವಿಡ್ಸನ್ ಭಾರತದಿಂದ ಕಾಲು ಹಿಂತೆಗೆಯಲು ಕಾರಣ ಎನ್ನಲಾಗ್ತಿದೆ. ಇದೇ ವೇಳೆ, ಭಾರತದಲ್ಲಿ 1600 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಇಂಜಿನ್ ಸಹಿತ ಬೈಕ್ ಗಳ ಮೇಲಿನ ಆಮದು ತೆರಿಗೆಯನ್ನು ಇಳಿಸಲಾಗಿದೆ. ಈ ಎರಡು ಕಾರಣಗಳಿಂದ ಹರ್ಲೇ ಡೇವಿಡ್ಸನ್ ಕಂಪೆನಿಗೆ ಭಾರತಕ್ಕೆ ವಿದೇಶದಿಂದಲೇ ಬೈಕ್ ಗಳನ್ನು ತರಿಸುವುದು ಕಡಿಮೆ ಖರ್ಚಿನಲ್ಲಿ ಸಾಧ್ಯವಾಗಲಿದೆ. ಕೊರೊನಾ ಲಾಕ್ ಡೌನ್ ಆಗಿ ಸೇಲ್ಸ್ ಕಡಿಮೆಯಾಗಿರುವ ಕಾರಣಕ್ಕಿಂತಲೂ ತೆರಿಗೆ ಇಳಿಕೆಯೇ ಪ್ರಮುಖ ಕಾರಣ ಎನ್ನುವ ವಿಶ್ಲೇಷಣೆ ನಡೆಸಲಾಗುತ್ತಿದೆ.
ಹರ್ಲೇ ಡೇವಿಡ್ಸನ್ ಬೈಕ್ ಮಾದರಿಗಳಲ್ಲಿ ಅತಿ ಕಡಿಮೆಯದ್ದಂದ್ರೆ 4.69 ಲಕ್ಷ ರೂಪಾಯಿನದ್ದು. ಉಳಿದಂತೆ 11 ಲಕ್ಷ, 18 ಲಕ್ಷ, 50 ಲಕ್ಷದ ಬೈಕ್ ಗಳನ್ನು ತಯಾರಿಸುತ್ತಿದ್ದು, ಇಂಥ ದುಬಾರಿ ಬೈಕ್ ಗಳನ್ನು ಕೊಳ್ಳುವ ಮಂದಿ ಯುರೋಪ್, ಅಮೇರಿಕಾಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ. ಈ ಕಾರಣದಿಂದ 2020-21ರಲ್ಲಿ ಭಾರತದಲ್ಲಿ 2.5 ಲಕ್ಷ ರೂಪಾಯಿಗೆ, ಅತಿ ಕಡಿಮೆ ಬೆಲೆಯ ಬೈಕ್ ತಯಾರಿಸಲು ಕಂಪನಿ ಮುಂದಾಗಿತ್ತು. ಆದರೆ, ಇವೆಲ್ಲವನ್ನೂ ಬದಿಗಿಟ್ಟು ಈಗ ಸೇಲ್ಸ್ ಕಾರಣ ಮುಂದಿಟ್ಟು ದೇಶದ ಏಕೈಕ ಉತ್ಪಾದನಾ ಘಟಕವನ್ನು ಮುಚ್ಚಲು ಹರ್ಲೇ ಡೇವಿಡ್ಸನ್ ಕಂಪನಿ ಚಿಂತನೆ ನಡೆಸಿದೆ.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm