ಬ್ರೇಕಿಂಗ್ ನ್ಯೂಸ್
23-05-26 01:59 pm HK News Staffer ದೇಶ - ವಿದೇಶ
ಬೆಂಗಳೂರು, ಮೇ 23: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನಿರುದ್ಯೋಗಿ ಜಿರಳೆಗಳು ಹೇಳಿಕೆಯನ್ನು ವಿರೋಧಿಸಿ, ಆನ್ ಲೈನ್ ನಲ್ಲಿ ಅಭಿಯಾನ ನಡೆಸಿ ಅಪಾರ ಸಂಖ್ಯೆಯ ಫಾಲೋವರ್ಸ್ ಗಳಿಸಿದ "ಕಾಕ್ರೋಚ್ ಜನತಾ ಪಾರ್ಟಿಗೆ" ರಾಜ್ಯದಲ್ಲೂ ಆನ್ಲೈನ್ ಮೂಲಕ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆದರೆ ಅವರು ಮೇ 24 ಭಾನುವಾರದಂದು ಟೌನ್ ಹಾಲ್ ಬಳಿ ಕರೆದ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ.
ಅನುಮತಿಯಿಲ್ಲದೆ ಟೌನ್ ಹಾಲ್ ಮುಂಭಾಗ ಯಾರೂ ಜನ ಸೇರಿಸುವಂತಿಲ್ಲ. ಪ್ರತಿಭಟನೆ, ಅಥವಾ ರ್ಯಾಲಿಗಳಿಗೆ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಉದ್ದೇಶ.ಜನ ಯಾರೂ ಸೇರಬಾರದು, ಸೇರಿದರೂ ಹೈಕೋರ್ಟ್ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ನೋಟಿಸ್ ಹೊರಡಿಸಿದ್ದಾರೆ.
ಬೆಲೆ ಏರಿಕೆ, ನಿರುದ್ಯೋಗ, ನೀಟ್ ಪರೀಕ್ಷೆ ಅಕ್ರಮ, ಪ್ರಧಾನಿ ಮೋದಿ ವಿದೇಶ ಪ್ರವಾಸ ವಿಷಯಗಳನ್ನು ವಿರೋಧಿಸಿ, ಪಕ್ಷದ ಎಲ್ಲಾ ಅಭಿಮಾನಿಗಳು, ಬನ್ನಿ ಶಕ್ತಿ ಪ್ರದರ್ಶಿಸೋಣ, ಆನ್ ನೈನಲ್ಲಿ ಮಾತ್ರವಲ್ಲದೆ ಬೀದಿಯಲ್ಲಿ ಶಕ್ತಿ ತೋರಿಸುವ ಸಮಯ ಇದು. ಆತ್ಮವಂಚಕ ಆಡಳಿತಕ್ಕೆ ಸಂದೇಶ ರವಾನಿಸಬೇಕು. ಹೀಗಾಗಿ ಭಾನುವಾರ ಬೆಳಗ್ಗೆ 11 ಕ್ಕೆ ಟೌನ್ ಹಾಲ್ ಮುಂಭಾಗ ಶಾಂತಿಯುತ ಮಾನವ ಸರಪಳಿ ನಿರ್ಮಾಣಕ್ಕೆ ಎಲ್ಲರೂ ಬನ್ನಿ ಎಂದು ಆನ್ ಲೈನ್ ಮೂಲಕ ಆಹ್ವಾನ ಇಟ್ಟಿತ್ತು. ಅಲ್ಲದೆ ಇಲ್ಲಿ ನಾಯಕರು ಇಲ್ಲ. ನಮಗೆ ನಾವೇ ನಾಯಕರು. ಇಲ್ಲಿ ಸಂಘಟನೆಯೂ ಇಲ್ಲ. ಪ್ರಜೆಗಳು ಕೈಜೋಡಿಸುವುದೇ ಸಂಘಟನೆ ಎಂದು ಹೇಳಿದ್ದರು. ..
ಈ ಕಾರ್ಯಕ್ರಮದ ಬಗ್ಗೆ ಮೇ 22 ರಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವ ಕಾಕ್ರೋಚ್ ಜನತಾ ಪಾರ್ಟಿಯ ಬೃಹತ್ ಮಾನವ ಸರಪಳಿ ನಡೆಸಲು, ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷ ಟೌನ್ ಹಾಲ್ ನಲ್ಲಿ ನಡೆಸಲು ಅನುಮತಿ ಕೇಳ್ಳಿಲ್ಲ. ಜಿಬಿಎ ನಿಂದಲೂ ಅನುಮತಿ ಪಡೆದಿಲ್ಲ. ಹೈಕೋರ್ಟ್ ನಿಯಮವೂ ಪ್ರತಿಭಟನೆ ,ಧರಣಿ, ರ್ಯಾಲಿಗಳಿದ್ದರೆ ಫ್ರೀಡಂ ಪಾರ್ಕ್ ಮಾತ್ರ ಅನುಮತಿ ಇದೆ ಎಂದಿದೆ.
ಹೀಗಾಗಿ ಜನರು, ಗೊತ್ತಿದ್ದೂ ಅಥವಾ ಗೊತ್ತಿಲ್ಲದೆ ಕಾಕ್ರೋಚ್ ಪಾರ್ಟಿಯ ಆಹ್ವಾನವನ್ನು ವಾಟ್ಸಾಪ್,ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಬಾರದು, ಹಾಗೂ ಟೌನ್ ಹಾಲ್ ಬಳಿ ಸೇರಬಾರದು ಎಂದು ನೋಟಿಸ್ ನಲ್ಲಿ ತಿಳಿಸಿದೆ. ಜನರಿಗೆ ಕಾನೂನಿನ ಅರಿವು ಮೂಡಿಸಲು ಈ ನೋಟಿಸ್ ಮಾಡಲಾಗಿದೆ ಎಂದೂ ಪೊಲೀಸ್ ಇಲಾಖೆ ತಿಳಿಸಿದೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
ಕೆಎಫ್ ಸಿ ಬಳಿಕ ಮಂಗಳೂರಿನಲ್ಲಿ ಎಂಎಫ್ ಸಿ ರೆಸ್ಟೋರೆಂ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm