ಬ್ರೇಕಿಂಗ್ ನ್ಯೂಸ್
17-04-26 11:27 am HK News Staffer ದೇಶ - ವಿದೇಶ
ಬೀಜಿಂಗ್ ಏ.17: ಚೀನಾದಲ್ಲಿ ಬಾಲ್ಯದಲ್ಲಿ ನಡೆದ ಒಂದು ಸಣ್ಣ ಘಟನೆ, ಎರಡು ದಶಕಗಳ ಬಳಿಕ ಜೀವಕ್ಕೆ ಅಪಾಯ ತಂದುಕೊಟ್ಟ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ವೆನ್ಝ್ ನಗರದ 32 ವರ್ಷದ ವಾಂಗ್ ಎಂಬುವರ ಹೊಟ್ಟೆಯಲ್ಲಿ 20 ವರ್ಷಗಳ ಹಿಂದೆ ನುಂಗಿದ ಪಾದರಸದ ಥರ್ಮಾಮೀಟರ್ ಪತ್ತೆಯಾಗಿದ್ದು, ವೈದ್ಯರು ಬೆಚ್ಚಿಬಿದ್ದಿದ್ದಾರೆ.
ಇತ್ತೀಚೆಗೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ವಾಂಗ್ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದರು. ಪ್ರಾಥಮಿಕ ಪರೀಕ್ಷೆಗಳ ಬಳಿಕ ವೈದ್ಯರು ಸ್ಕ್ಯಾನಿಂಗ್ ನಡೆಸಿದಾಗ, ಸಣ್ಣ ಕರುಳಿನ ಆರಂಭಿಕ ಭಾಗವಾದ ಡ್ಯುವೋಡೆನಮ್ನಲ್ಲಿ ಲೋಹದ ವಸ್ತು ಸಿಲುಕಿಕೊಂಡಿರುವುದು ಪತ್ತೆಯಾಯಿತು. ಹೆಚ್ಚಿನ ಪರಿಶೀಲನೆಯಲ್ಲಿ ಅದು ಜ್ವರ ಅಳೆಯುವ ಥರ್ಮಾಮೀಟರ್ ಎಂಬುದು ಸ್ಪಷ್ಟವಾಯಿತು.
ವೈದ್ಯರ ಪ್ರಶ್ನೆಗೆ ಉತ್ತರಿಸಿದ ವಾಂಗ್, 12ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಥರ್ಮಾಮೀಟರ್ ನುಂಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಂದು ಭಯದಿಂದ ಪೋಷಕರಿಗೆ ಈ ವಿಷಯ ತಿಳಿಸದೇ ಮೌನವಾಗಿದ್ದರು. ಯಾವುದೇ ತಕ್ಷಣದ ತೊಂದರೆ ಕಾಣಿಸದ ಕಾರಣ, ಈ ಘಟನೆ ಕಾಲಕ್ರಮೇಣ ಮರೆತು ಹೋಗಿತ್ತು.
ಆದರೆ ಇತ್ತೀಚೆಗೆ ಥರ್ಮಾಮೀಟರ್ನ ತುದಿ ಕರುಳಿಗೆ ಚುಚ್ಚಲು ಆರಂಭಿಸಿದ್ದರಿಂದ ತೀವ್ರ ನೋವು ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ ಕರುಳಿನಲ್ಲಿ ತೂತು ಉಂಟಾಗುವ ಹಾಗೂ ಥರ್ಮಾಮೀಟರ್ ಒಡೆದು ಅದರಲ್ಲಿರುವ ವಿಷಕಾರಿ ಪಾದರಸ ದೇಹಕ್ಕೆ ಹರಡುವ ಅಪಾಯ ಉಂಟಾಗಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆಗೆ ಮುಂದಾಗಿ, ಸುಮಾರು 20 ನಿಮಿಷಗಳ ಯಶಸ್ವಿ ಕಾರ್ಯಾಚರಣೆಯಲ್ಲಿ ಥರ್ಮಾಮೀಟರ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅಚ್ಚರಿಯ ಸಂಗತಿ ಎಂದರೆ, ಎರಡು ದಶಕಗಳ ಬಳಿಕವೂ ಥರ್ಮಾಮೀಟರ್ ಒಡೆಯದೆ ಅಚ್ಚುಕಟ್ಟಾಗಿ ಉಳಿದಿದ್ದು, ಕೇವಲ ಅದರ ಮೇಲಿನ ಅಂಕಿಗಳು ಮಾತ್ರ ಅಳಿಸಿ ಹೋಗಿದ್ದವು.
ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ವಾಂಗ್, “ಇಷ್ಟು ವರ್ಷಗಳ ಕಾಲ ನನ್ನ ದೇಹದೊಳಗೆ ಬಾಂಬ್ ಹೊತ್ತುಕೊಂಡಿದ್ದೆ” ಎಂದು ಹೇಳಿ ನಿಟ್ಟುಸಿರು ಬಿಟ್ಟಿದ್ದಾರೆ.
ಬಾಲ್ಯದಲ್ಲಿ ನಡೆದ ಒಂದು ಸಣ್ಣ ತಪ್ಪು, ಕಾಲ ಕಳೆದಂತೆ ಜೀವಕ್ಕೆ ಯಾವ ರೀತಿ ಕಂಟಕವಾಗುತ್ತದೆ ಎಂಬುದಕ್ಕೆ ಈ ಘಟನೆ ನಿಖರ ಉದಾಹರಣೆ. ಅಂದಿನ ಅಜಾಗರೂಕತೆ ವರ್ಷಗಳ ಬಳಿಕ ದೊಡ್ಡ ಅಪಾಯವಾಗಿ ಎದುರಾಗಿದ್ದು, ಸಣ್ಣ ವಿಷಯಗಳನ್ನೂ ನಿರ್ಲಕ್ಷಿಸಿದರೆ ಅದರ ಪರಿಣಾಮ ಎಷ್ಟು ಭೀಕರವಾಗಬಹುದು ಎಂಬುದಕ್ಕೆ ಇದು ನೈಜ ಉದಾಹರಣೆಯಾಗಿದೆ.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm