ಬ್ರೇಕಿಂಗ್ ನ್ಯೂಸ್
09-04-26 07:43 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 9: ಮಧ್ಯಪ್ರಾಚ್ಯದಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಇರಾನ್ -ಅಮೆರಿಕ ಸಮ್ಮತಿಸಿದರೂ ಹರ್ಮುಜ್ ಜಲಸಂಧಿಯ ಬಿಕ್ಕಟ್ಟು ಏಷ್ಯನ್ ದೇಶಗಳಿಗೆ ದೊಡ್ಡದಾಗಿ ತಟ್ಟುವ ಭೀತಿ ಉಂಟಾಗಿದೆ. ಜಲಸಂಧಿಯಲ್ಲಿ ಹಾದು ಹೋಗುವ ಪ್ರತಿ ನೌಕೆಗೆ 2 ದಶಲಕ್ಷ ಡಾಲರ್ (ಸುಮಾರು 18 ಕೋಟಿ ರೂ.) ಟೋಲ್ ವಿಧಿಸುವುದಾಗಿ ಇರಾನ್ ಘೋಷಿಸಿದೆ. ಇದೇ ವೇಳೆ, ಅಮೆರಿಕವೂ ಸುಂಕದಲ್ಲಿ ಪಾಲು ಕೇಳಿದ್ದು ಯುದ್ಧ ನಷ್ಟ ಭರಿಸಿಕೊಳ್ಳಲು ಮುಂದಾಗಿದೆ.
ಯುದ್ಧದ ಸಮಯದಲ್ಲಿ ಭಾರತ ಸೇರಿದಂತೆ ಕೆಲವೇ ಮಿತ್ರ ದೇಶಗಳನ್ನು ಹೊರತುಪಡಿಸಿ ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿತ್ತು. ಆದರೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ಇದೇ ದೊಡ್ಡ ತಲೆನೋವಾಗಿತ್ತು. ಆನಂತರ, ಅಮೆರಿಕ ಮುಂದಿಟ್ಟ ಒಪ್ಪಂದದ ಷರತ್ತಿನಂತೆ ಹರ್ಮುಜ್ ಜಲಸಂಧಿಯನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲು ಇರಾನ್ ಒಪ್ಪಿದೆ. ಆದರೆ, ಟೋಲ್ ವಿಧಿಸುವ ಮೂಲಕ ಹಣ ಸಂಗ್ರಹಿಸಲಿದ್ದು, ಯುದ್ಧದಿಂದ ಉಂಟಾದ ನಷ್ಟ ಭರ್ತಿಗೆ ಇದು ಅನಿವಾರ್ಯ ಎಂದು ಹೇಳಿಕೊಂಡಿದೆ.
ಇರಾನ್ ಟೋಲ್ ಪ್ರಸ್ತಾಪಕ್ಕೆ ಭಾರತ, ಒಮಾನ್ ಸೇರಿದಂತೆ ಹೆಚ್ಚಿನ ದೇಶಗಳಿಂದ ವಿರೋಧವೂ ವ್ಯಕ್ತವಾಗಿದೆ. ಎಲ್ಲ ದೇಶಗಳಿಗೆ ಟೋಲ್ ವಿಧಿಸಿದರೆ ಭಾರತಕ್ಕೆ ಮಾತ್ರ ದುಬಾರಿಯಾಗಿ ಪರಿಣಮಿಸಲಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಟೋಲ್ ಪ್ರಸ್ತಾಪಕ್ಕೆ ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ್ದು ಜೊತೆಗೆ ತನಗೂ ಪಾಲು ನೀಡುವಂತೆ ಕೇಳಿದ್ದಾರೆ.
ದಿನಕ್ಕೆ 200 ಕೋಟಿ ಹೊರೆ
ಹರ್ಮುಜ್ ವಿಷಯದಲ್ಲಿ ಇರಾನ್ ತನ್ನ ನಿಯಮವನ್ನು ಎಲ್ಲಾ ದೇಶಗಳಿಗೂ ಅನ್ವಯಿಸಿದರೆ, ಭಾರತಕ್ಕೆ ತೈಲ ಆಮದು ದುಬಾರಿಯಾಗಲಿದೆ. ಹರ್ಮುಜ್ ಮೂಲಕ ಇತರೆ ಸರಕುಗಳ ಸಾಗಣೆ ವೆಚ್ಚವೂ ದುಪ್ಪಟ್ಟಾಗಲಿದೆ. ಅಂದಾಜು ಭಾರತಕ್ಕೆ 200 ಕೋಟಿ ರೂ. ಹೊರೆಯಾಗಲಿದೆ. ಭಾರತದ ಶೇ. 50ರಷ್ಟು ಕಚ್ಚಾತೈಲ, 80% ಎಲ್ಪಿಜಿ ಹರ್ಮುಜ್ ಮೂಲಕವೇ ಬರುತ್ತಿದೆ. ನಿತ್ಯ 10-12 ಟ್ಯಾಂಕರ್ಗಳು ಜಲಸಂಧಿಯಿಂದ ಸಾಗುವುದರಿಂದ ದಿನಕ್ಕೆ ಪ್ರತಿ ನೌಕೆಗೆ 18 ಕೋಟಿ ರೂ.ನಂತೆ 180-200 ಕೋಟಿ ರೂ.ಟೋಲ್ ಭಾರ ಬೀಳಲಿದೆ. ಸಾಗಣೆ ವೆಚ್ಚದಲ್ಲಿ ಏರಿಕೆಯಿಂದಾಗಿ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಬೆಲೆಯ ಹೊರೆಯನ್ನು ಜನರ ಮೇಲೆ ಹೊರಿಸುವ ಸಾಧ್ಯತೆಯಿದೆ.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm