ಬ್ರೇಕಿಂಗ್ ನ್ಯೂಸ್
04-04-26 10:53 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 4: ಇರಾನ್- ಅಮೆರಿಕ ನಡುವೆ ಕದನ ವಿರಾಮದ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಇದರ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಷರತ್ತು ಒಪ್ಪಿಕೊಳ್ಳಲು 48 ಗಂಟೆಗಳ ಗಡುವು ವಿಧಿಸಿದ್ದಾರೆ. ಇದರ ಬೆನ್ನಲ್ಲೇ ಇರಾನ್, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಸಿಐಎ ಸ್ಟೇಷನ್ ಗೆ ಡ್ರೋನ್ ಗಳನ್ನು ನುಗ್ಗಿಸಿ ಸ್ಫೋಟಗೊಳಿಸಿದೆ.
ಸೌದಿಯ ರಿಯಾದ್ ನಲ್ಲಿರುವ ಸಿಐಎ ಸ್ಟೇಷನ್ ಮೇಲೆ ಇರಾನ್ ದಾಳಿ ನಡೆಸಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಅಮೆರಿಕನ್ ರಾಜತಾಂತ್ರಿಕ ಪೋಸ್ಟ್ ಗಳಂತೆ ರಿಯಾದ್ನಲ್ಲಿರುವ ಅಮೇರಿಕನ್ ರಾಯಭಾರ ಕಚೇರಿ ತನ್ನದೇ ಆದ ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವುದಿಲ್ಲ. ಹೀಗಾಗಿ ಟ್ರಂಪ್ ಘೋಷಣೆಯ ಒಂದೇ ನಿಮಿಷದ ಅಂತರದಲ್ಲಿ ಎರಡು ಡ್ರೋನ್ ದಾಳಿ ನಡೆಸಲಾಗಿದೆ. ಎರಡನೇ ಡ್ರೋನ್ ಮೊದಲ ದಾಳಿಯಿಂದ ಉಂಟಾದ ರಂಧ್ರದೊಳಗೆ ನೇರವಾಗಿ ನುಗ್ಗಿ ಸ್ಫೋಟಿಸಿದೆ. ದಾಳಿ ಮುಗಿಯುವಷ್ಟರಲ್ಲಿ ರಿಯಾದ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೂರು ಮಹಡಿಗಳು ತೀವ್ರ ಹಾನಿಗೊಳಗಾಗಿದ್ದವು ಮತ್ತು ಅದರೊಳಗಿನ ಸಿಐಎ ಕಚೇರಿಗೂ ಹೊಡೆತ ಬಿದ್ದಿತ್ತು.
ಸೌದಿ ರಕ್ಷಣಾ ಸಚಿವಾಲಯವು ಈ ದಾಳಿಯಿಂದ ಉಂಟಾದ ಹಾನಿ ಸೀಮಿತವಾಗಿದ್ದು, ಸಣ್ಣ ಮಟ್ಟಿನ ಬೆಂಕಿ ಅವಘಡ ಮಾತ್ರ ಎಂದು ಹೇಳಿತು. ಆದರೆ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ನೀಡಿದ ವರದಿ ಬೇರೆ ಚಿತ್ರಣ ನೀಡುತ್ತದೆ. ಅಮೆರಿಕನ್ ಮಾಧ್ಯಮದ ಪ್ರಕಾರ, ಬೆಂಕಿ ಅರ್ಧ ದಿನದ ವರೆಗೆ ಹೊತ್ತಿ ಉರಿದಿದ್ದು, ರಾಯಭಾರ ಕಚೇರಿಯ ಕೆಲವು ಭಾಗಗಳು ಸಂಪೂರ್ಣ ನಾಶವಾಗಿವೆ. ದಾಳಿ ಕಟ್ಟಡದ ಭದ್ರ ವಿಭಾಗವನ್ನು ಭೇದಿಸಿ ಸಿಐಎ ಕಚೇರಿಯನ್ನು ತಲುಪಿದೆ. ಇದು ಕೆಲಸದ ಸಮಯದಲ್ಲಿ ನಡೆದಿದ್ದರೆ ಪರಿಣಾಮಗಳು ಇನ್ನೂ ಭೀಕರವಾಗಿರುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm