ಬ್ರೇಕಿಂಗ್ ನ್ಯೂಸ್
12-03-26 09:03 pm HK News Staffer ದೇಶ - ವಿದೇಶ
ವಾಷಿಂಗ್ಟನ್, ಮಾರ್ಚ್ 12: ಇರಾನ್ ಸಾಕಷ್ಟು ಹೊಡೆತ ತಿಂದರೂ, ಅಮೆರಿಕದ ಮೇಲೆ ಆರ್ಥಿಕ ನಷ್ಟ ಬಿಟ್ಟರೆ ಬೇರಾವುದೇ ನೇರ ಹೊಡೆತ ಬಿದ್ದಿಲ್ಲ. ಈ ನಡುವೆ, ಅಮೆರಿಕದ ಗುಪ್ತಚರ ಸಂಸ್ಥೆ ಎಫ್ಬಿಐ ಮಹತ್ವದ ಎಚ್ಚರಿಕೆ ನೀಡಿದೆ. ಅಮೆರಿಕದ ಪಶ್ಚಿಮ ಕರಾವಳಿಯ ನಗರಕ್ಕೆ ಇರಾನ್ ಡ್ರೋಣ್ ದಾಳಿ ನಡೆಸಬಹುದು ಎಂದು ಅದು ಹೇಳಿದೆ. ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇರಾನ್ನಿಂದ ಡ್ರೋನ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಮೊಳಗಿಸಿದೆ.
ಈವರೆಗೂ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳಿಗೆ ಮಾತ್ರ ಇರಾನ್ ದಾಳಿ ನಡೆಸಿತ್ತು. ಅಮೆರಿಕ ಭೌಗೋಳಿಕವಾಗಿ ಬಲು ದೂರ ಇರುವುದರಿಂದ ಅಲ್ಲಿಗೆ ದಾಳಿಯಿಂದ ತೊಂದರೆ ಆಗಿಲ್ಲ. ಇತ್ತ ಇಸ್ರೇಲ್ ಮೇಲೆ ಹೊಡೆತ ಬಿದ್ದರೂ ಅಮೆರಿಕ ಚಿಂತೆ ಮಾಡಿಲ್ಲ. ಹೀಗಾಗಿ ಇರಾನ್ ಕಡೆಯಿಂದ ಕ್ಯಾಲಿಫೋರ್ನಿಯಾ ಅಥವಾ ಇನ್ನಾವುದೇ ನಗರಗಳಿಗೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎಫ್ ಬಿಐ ಎಚ್ಚರಿಸಿದೆ. ಹಿಂದೆ ಇರಾಕ್ ಮೇಲಿನ ದಾಳಿಯ ಬಳಿಕ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಉಗ್ರ ದಾಳಿ ನಡೆದಿತ್ತು.
2026ರ ಫೆಬ್ರವರಿ ತಿಂಗಳ ಆರಂಭದಲ್ಲಿ ಕ್ಯಾಲಿಫೋರ್ನಿಯಾ ಮೇಲೆ ಇರಾನ್ ಡ್ರೋನ್ ಅಟ್ಯಾಕ್ ನಡೆಸುವುದಾಗಿ ಅಮೆರಿಕ ನಂಬಿತ್ತು. ಆದರೆ, ಯಾವುದೇ ದಾಳಿ ನಡೆದಿರಲಿಲ್ಲ. ಇದೀಗ ಗುಪ್ತಚರ ಸಂಸ್ಥೆಗಳು ಮತ್ತೊಂದು ಭದ್ರತಾ ಆತಂಕವನ್ನೂ ವ್ಯಕ್ತಪಡಿಸಿವೆ. ಮೆಕ್ಸಿಕೋದ ಡ್ರಗ್ ಕಾರ್ಟೆಲ್ಗಳು ಡ್ರೋನ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ಅದನ್ನು ಅಮೆರಿಕದ ಗಡಿ ಪ್ರದೇಶಗಳಲ್ಲಿ ದಾಳಿಗೆ ಬಳಸುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಕೆಲವು ಡ್ರಗ್ ಕಾರ್ಟೆಲ್ಗಳು ಸ್ಫೋಟಕ ಹೊತ್ತ ಡ್ರೋನ್ಗಳನ್ನು ಬಳಸಿಕೊಂಡು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ಹಾಗೂ ಸೇನಾ ಸಿಬ್ಬಂದಿ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿಗಳೂ ಈ ಹಿಂದೆ ಬಂದಿದ್ದವು.
ಇದೇ ವೇಳೆ, ಕ್ಯಾಲಿಫೋರ್ನಿಯಾ ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ. ಡ್ರೋನ್ ದಾಳಿಯ ಆತಂಕವನ್ನು ಅಮೆರಿಕದ ಹೋಂಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಮಾಜಿ ಗುಪ್ತಚರ ಮುಖ್ಯಸ್ಥರಾಗಿದ್ದ ಜಾನ್ ಕೋಹೆನ್ ವ್ಯಕ್ತಪಡಿಸಿದ್ದಾರೆ. ಇರಾನ್ಗೆ ಮೆಕ್ಸಿಕೋ ಮತ್ತು ದಕ್ಷಿಣ ಅಮೆರಿಕಾದಲ್ಲಿ ವ್ಯಾಪಕ ಸಂಪರ್ಕಗಳಿದ್ದು, ಸಮುದ್ರ ಮಾರ್ಗ ಅಥವಾ ಮೆಕ್ಸಿಕೋ ಗಡಿಯ ಮೂಲಕ ಡ್ರೋನ್ ದಾಳಿ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm