ಬ್ರೇಕಿಂಗ್ ನ್ಯೂಸ್
10-02-26 02:15 pm HK News Desk ದೇಶ - ವಿದೇಶ
ಕಾಸರಗೋಡು, ಫೆ.11 : ತುಳು ಭಾಷೆ, ಗ್ರಾಮೀಣ ಆಹಾರ, ಸಂಸ್ಕೃತಿ ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುತ್ತ ಸ್ಟಾರ್ ಆಗಿದ್ದ ಅಡೂರು ಮೂಲದ ಯುವತಿ ರೇಶ್ಮಾ ಕಾಸರಗೋಡು ಬಳಿಯ ಕೂಡ್ಲು ಎಂಬಲ್ಲಿನ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಅಭಿಮಾನಿಗಳಿಗೆ ಶಾಕ್ ಸುದ್ದಿಯಾಗಿದೆ.
ರೇಷ್ಮಾ ಅವರ ಇನ್ ಸ್ಟಾ ಪೇಜ್ ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳಿದ್ದರು. 28 ವರ್ಷದ ರೇಷ್ಮಾ ಚಿನ್ನು ಪಾಪು ಎಂಬ ಹೆಸರಿನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಳು. ಕಾಸರಗೋಡು- ಸುಳ್ಯ ಗಡಿಭಾಗದ ಅಡೂರು ಮೂಲದವಳಾಗಿದ್ದ ರೇಷ್ಮಾ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ನಾಲ್ಕು ತಿಂಗಳ ಹಿಂದೆ ಗಂಡನೊಂದಿಗೆ ಮನಸ್ತಾಪದಿಂದ ಡೈವರ್ಸ್ ಆಗಿ ಪ್ರತ್ಯೇಕ ವಾಸವಿದ್ದಳು. ಸೋಮವಾರ ಮಧ್ಯಾಹ್ನ ನೆರೆಯವರು ರೇಷ್ಮಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದರು.
ಚಿನ್ನು ಪಾಪು ಹೆಸರಿನಲ್ಲಿ ತುಳು ಮತ್ತು ಮಲಯಾಳದಲ್ಲಿ ಮುಗ್ಧ ಮಾತುಗಳನ್ನಾಡುತ್ತಿದ್ದುದರಿಂದ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದಿದ್ದರು. ಗ್ರಾಮೀಣ ಶೈಲಿಯ ಜೀವನ, ಆಹಾರ ಪದ್ಧತಿ, ಪ್ರಚಾರ ಇಲ್ಲದ ಸ್ಥಳಗಳು, ತುಳುವರ ಸಂಸ್ಕೃತಿ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದರು. ಇತ್ತೀಚೆಗೆ ಸೊಪ್ಪು ತರಕಾರಿಯಿಂದ ಮಾಡಿದ್ದ ಸಾರಿನ ಬಗ್ಗೆ ವಿಡಿಯೋ ಮಾಡಿದ್ದು ಸಾವಿರಾರು ಜನರನ್ನು ಆಕರ್ಷಿಸಿತ್ತು. ಇದರ ನಡುವೆ, ಕೆಲವು ತಿಂಗಳ ಹಿಂದೆ ತನ್ನ ಡೈವರ್ಸ್ ವಿಚಾರವನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಳು. ನಾಲ್ಕು ವರ್ಷಗಳಿಂದ ನಾವು ಬೇರೆ ಇದ್ದೇವೆ, ನಾನೀಗ ಸಿಂಗಲ್ ಪೇರೆಂಟ್ ಎನ್ನುತ್ತ ಮಗುವಿನ ಜೊತೆಗಿನ ಫೋಟೋ ಷೇರ್ ಮಾಡಿದ್ದಳು.
ರೇಷ್ಮಾ ನಾಲ್ಕು ವರ್ಷದ ಮಗುವನ್ನು ಹೊಂದಿದ್ದು ಪೊಲೀಸರು ಅಸಹಜ ಸಾವೆಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ಕರೆಗಳು, ಪೋಸ್ಟ್ ಮಾರ್ಟಂ ರಿಪೋರ್ಟ್ ಆಧರಿಸಿ ಮುಂದಿನ ತನಿಖೆ ನಡೆಸಲಿದ್ದಾರೆ. ಘಟನೆ ಸಂದರ್ಭದಲ್ಲಿ ಆಕೆಯ ಮಗು ಅಡೂರಿನ ತಾಯಿ ಮನೆಯಲ್ಲಿತ್ತು ಎನ್ನಲಾಗಿದೆ.
Reshma (28), popularly known as ‘Chinnu Papu’ on Instagram, was found dead at her rented house in Kudlu near Kasaragod in an apparent suicide. The Adur native had over two lakh followers and was known for her engaging videos on Tulu language, rural food, and culture. She had recently divorced and was living separately.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm