ಬ್ರೇಕಿಂಗ್ ನ್ಯೂಸ್
28-12-20 05:02 pm Headline Karnataka News Network ದೇಶ - ವಿದೇಶ
ಜೈಪುರ, ಡಿ.28: ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಏನು ಶಿಕ್ಷೆ ಅಂತೀರಾ.. ಪೊಲೀಸ್ ದೂರು ಕೊಟ್ಟರೆ ಒಂದೇ ರೀತಿಯ ಶಿಕ್ಷೆ. ಆದರೆ, ಕೆಲವು ಹಳ್ಳಿಗಳಲ್ಲಿ ಅಲ್ಲಿನ ಗ್ರಾಮಸ್ಥರೇ ಸೇರಿಕೊಂಡು ಶಿಕ್ಷೆ ಕೊಡುತ್ತಾರೆ. ರಾಜಸ್ಥಾನದ ಒಂದು ಹಳ್ಳಿಯಲ್ಲಿ ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಯನ್ನು ಹಿಡಿದು ಚಪ್ಪಲಿ ಹಾರ ಹಾಕಿ, ಬತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ.
ರಾಜಸ್ಥಾನದ ಜಾಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನನ್ನು ಬತ್ತಲೆ ಮೆರವಣಿಗೆ ಮಾಡಿದ ಬಗ್ಗೆ ರಾಕೇಶ್ ರಾಥೋರ್ ಪೊಲೀಸ್ ದೂರು ನೀಡಿದ್ದು, ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಜೊತೆಗೆ ರಾಕೇಶ್ ರಾಥೋರ್ ನನ್ನೂ ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ವಿಚಾರದಲ್ಲಿ ಆತನ ವಿರುದ್ಧ ಯುವತಿ ದೂರು ನೀಡಿದ್ದಳು.
ಆಗಿದ್ದಿಷ್ಟು. ಕಿರುಕುಳಕ್ಕೊಳಗಾದ ಯುವತಿ ನರೇಗಾ ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕ ಮಹಿಳೆ. ರಾಕೇಶ್ ರಾಥೋರ್, ನರೇಗಾದ ಸುಪರ್ವೈಸರ್ ಆಗಿದ್ದ. ಮೊದಲೇ ಯುವತಿಯ ಜೊತೆಗೆ ಸಲುಗೆಯಿಂದಿದ್ದ ರಾಕೇಶ್, ಮೊನ್ನೆ ಆಕೆಯ ಮನೆಗೇ ತೆರಳಿದ್ದಾನೆ. ಈ ವೇಳೆ ಆಕೆಯ ಪತಿ ಬಂದಿದ್ದು, ನೋಡುತ್ತಲೇ ಕಿರುಚಾಡಿದ್ದಾನೆ. ಆಬಳಿಕ ಮರುದಿನ ಗೆಳೆಯರ ಜೊತೆ ಸೇರಿ ಆರೋಪಿ ರಾಕೇಶ್ ನನ್ನು ಹಿಡಿದು ಶರ್ಟ್, ಪ್ಯಾಂಟ್ ಬಿಚ್ಚಿಸಿ, ಚಪ್ಪಲಿ ಹಾರ ಹಾಕಿ ವಠಾರದಲ್ಲಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ, ಮೊಬೈಲಿನಲ್ಲಿ ವಿಡಿಯೋ ಮಾಡಿ, ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಪ್ರಕರಣ ಸಂಬಂಧಿಸಿ, ಪ್ರಮುಖ ಆರೋಪಿ ಮಹಿಳೆಯ ಪತಿ ಪರಾರಿಯಾಗಿದ್ದಾನೆ.
A 28-year-old man was thrashed, garlanded with shoes and paraded naked in a village in Rajasthan's Jhalawar district for allegedly sexually harassing a woman, police said on Monday.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
13-08-25 10:41 am
HK News Desk
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
13-08-25 10:37 am
Mangalore Correspondent
ನಿಯಂತ್ರಣ ತಪ್ಪಿದ ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿ ;...
13-08-25 10:17 am
ಧರ್ಮಸ್ಥಳ ಕೇಸ್ ; ಜಿಪಿಆರ್ ಬಳಸಿದರೂ ಸಿಗಲಿಲ್ಲ ಎಲುಬ...
12-08-25 11:06 pm
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm