ಬ್ರೇಕಿಂಗ್ ನ್ಯೂಸ್
25-12-20 12:51 pm Headline Karnataka News Network ದೇಶ - ವಿದೇಶ
ಮೀರತ್, ಡಿ.25 : ಜೀನ್ಸ್ ತೊಡಲ್ಲ, ಡ್ಯಾನ್ಸ್ ಮಾಡಲ್ಲವೆಂದ ಪತ್ನಿಗೆ ವ್ಯಕ್ತಿಯೊಬ್ಬ ತ್ರಿಪಲ್ ತಲಾಖ್ ನೀಡಿದ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮೀರತ್ ಬಳಿಯ ಹಾಪುರದ ಪಿಲ್ಖುವಾ ನಿವಾಸಿ ಅನಾಸ್ ತನ್ನ ಪತ್ನಿಗೆ ತಲಾಖ್ ನೀಡಿದ ಭೂಪ. ನಗರದ ಲಿಸಾರಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಇಸ್ಮಾಯಿಲ್ ನಗರದ ನಿವಾಸಿ ಅಮೀರುದ್ದೀನ್ ಅವರು 8 ವರ್ಷಗಳ ಹಿಂದೆ ತನ್ನ ಮಗಳನ್ನು ಅನಾಸ್ ಗೆ ಮದುವೆ ಮಾಡಿಕೊಟ್ಟಿದ್ದರು.
ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅನಾಸ್ ತನ್ನ ಪತ್ನಿಗೆ ಜೀನ್ಸ್ ಹಾಕುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ ಡ್ಯಾನ್ಸ್ ಮಾಡು, ಹಾಡು ಹೇಳು ಎಂದೆಲ್ಲ ಕಿರುಕುಳ ನೀಡುತ್ತಿದ್ದ. ಆದರೆ ಪತಿಯ ಈ ವರ್ತನೆಯನ್ನು ಪತ್ನಿ ನಿರಾಕರಿಸುತ್ತಿದ್ದಳು. ಇದರಿಂದ ಸಿಟ್ಟಿಗೆದ್ದ ಅನಾಸ್, ಡಿಸೆಂಬರ್ 22ರಂದು ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.

ಪತ್ನಿಯನ್ನು ಆಕೆಯ ತಾಯಿ ಮನೆಗೆ ಕಳಿಸಿಕೊಟ್ಟಿದ್ದಾನೆ. ತಲಾಖ್ ನೀಡಿದ ಬಳಿಕ ಅನಾಸ್ ನೇರವಾಗಿ ಆಕೆಯ ತವರು ಮನೆಗೆ ಬಂದಿದ್ದಾನೆ. ನಂತರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಪತ್ನಿ ಕುಟುಂಬಸ್ಥರು ಬೆಂಕಿ ನಂದಿಸುವ ಮೂಲಕ ಅನಾಸ್ ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ, ಜೀನ್ಸ್ ತೊಟ್ಟರೆ, ಹಾಡು ಹಾಡಿರೆ, ಡ್ಯಾನ್ಸ್ ಮಾಡಿದರೆ ಇಸ್ಲಾಂ ವಿರುದ್ಧ ಎಂದು ಫತ್ವಾ ನೀಡುವ ಪರಿಪಾಠ ಇತ್ತು. ಕೆಲವು ಮೂಲಭೂತವಾದಿ ಮೌಲ್ವಿಗಳು ಈಗಲೂ ಇಂಥ ಫತ್ವಾ ಹೇರಿಕೆಯನ್ನು ಮಾಡುತ್ತಾರೆ. ಆದರೆ, ಇಲ್ಲೊಬ್ಬ ಮುಸ್ಲಿಂ ಅದರ ವಿರುದ್ಧವೇ ವರ್ತಿಸಿದ್ದಲ್ಲದೆ, ಅದಕ್ಕಾಗಿ ಪತ್ನಿಯನ್ನೇ ಅಗಲುವ ಹಂತಕ್ಕೆ ಹೋಗಿದ್ದಾನೆ.
In a shocking incident reported from the Meerut district of Uttar Pradesh, a man pronounced triple talaq to his wife after she allegedly refused to dance and wear jeans.
22-08-26 11:10 am
HK News Staffer
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm