ಬ್ರೇಕಿಂಗ್ ನ್ಯೂಸ್
04-08-25 05:11 pm HK News Desk ದೇಶ - ವಿದೇಶ
ನವದೆಹಲಿ, ಆ.4 : ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗಡೆಯಾಗಿದ್ದು, 70ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗಲ್ಫ್ ಆಫ್ ಏಡನ್ ಸಮುದ್ರದಲ್ಲಿ ಘಟನೆ ನಡೆದಿದ್ದು, ದುರಂತ ಸಂದರ್ಭದಲ್ಲಿ ಹಡಗಿನಲ್ಲಿ 157 ಮಂದಿಯಷ್ಟು ಪ್ರಯಾಣಿಕರು ಇದ್ದರೆಂದು ವಿಶ್ವಸಂಸ್ಥೆಯ ಮೈಗ್ರೇಶನ್ ಏಜನ್ಸಿ ಹೇಳಿದೆ.
ಯೆಮೆನಿ ಅಧಿಕಾರಿಗಳು 76 ಶವಗಳನ್ನು ಮೇಲೆತ್ತಿದ್ದಾರೆ, 32 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇತಿಯೋಪಿಯಾದ ವಲಸಿಗರು ಹೆಚ್ಚಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದಕ್ಷಿಣ ಯೆಮೆನ್ ಸಮುದ್ರ ಮಾರ್ಗದಲ್ಲಿ ವಲಸಿಗರನ್ನು ಹೊತ್ತುಕೊಂಡು ಸಾಗುತ್ತಿದ್ದಾಗ ಹಡಗು ಮುಳುಗಡೆಯಾಗಿದೆ. ಆಫ್ರಿಕದ ವಲಸಿಗರನ್ನು ಕೆಂಪು ಸಮುದ್ರ ಮಾರ್ಗದಲ್ಲಿ ಕಳ್ಳದಾರಿಯ ಮೂಲಕ ಗಲ್ಫ್ ದೇಶಗಳಿಗೆ ಒಯ್ಯುವುದಕ್ಕೆ ಬಳಸುತ್ತಿದ್ದರು.
ಯೆಮೆನ್- ಇತಿಯೋಪಿಯಾದಲ್ಲಿ ಜನರನ್ನು ಬೇರೆ ಬೇರೆ ಉದ್ದೇಶಕ್ಕೆ ಅಕ್ರಮವಾಗಿ ಸಾಗಾಟ ನಡೆಸಲಾಗುತ್ತದೆ. ಇತಿಯೋಪಿಯಾದಲ್ಲಿ ಅತಿ ಹೆಚ್ಚು ಬಡತನವಿದ್ದು, ಅಲ್ಲಿನ ಜನರನ್ನು ಆಮಿಷವೊಡ್ಡಿ ಒಯ್ಯಲಾಗುತ್ತದೆ. ಇದೇ ಉದ್ದೇಶಕ್ಕೆ ಪ್ಯಾಸೆಂಜರ್ ಹಡಗಿನ ಮೂಲಕ ಒಯ್ಯುತ್ತಿದ್ದಾಗ ದುರಂತ ಸಂಭವಿಸಿದೆ. ಪ್ರತಿ ವರ್ಷ ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳಿಗೆ ಕಾರ್ಮಿಕರಾಗಿ ದುಡಿಯಲು ಇತಿಯೋಪಿಯಾದಿಂದ ಸಾವಿರಾರು ಜನರನ್ನು ಒಯ್ಯಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಕೆಂಪು ಸಮುದ್ರದಲ್ಲಿ ಇಂತಹದ್ದೇ ದುರಂತಗಳಿಂದ 558 ಮಂದಿ ಮಡಿದಿದ್ದಾರೆ. ಬೋಟ್ ದುರಂತಗಳಲ್ಲಿಯೇ 462 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಎರಡು ಬೋಟ್ ಮುಳುಗಡೆಯಾಗಿ 180 ವಲಸಿಗರು ಸಾವನ್ನಪ್ಪಿದ್ದರು.
In a devastating maritime tragedy, more than 76 people have died after a passenger boat capsized near the coast of Yemen in the Gulf of Aden. According to the United Nations migration agency, the boat was carrying approximately 157 passengers, most of whom were migrants from Ethiopia.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 07:38 pm
Mangalore Correspondent
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
VK Furniture & Electronics Launches 4th Annua...
04-08-25 04:48 pm
Dharmasthala Skeleton Mystery: ಧರ್ಮಸ್ಥಳ ಅಸ್ತಿ...
04-08-25 01:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯ...
04-08-25 01:24 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm