ಬ್ರೇಕಿಂಗ್ ನ್ಯೂಸ್
26-11-20 03:46 pm Headline Karnataka News Network ದೇಶ - ವಿದೇಶ
ಚೆನ್ನೈ, ನವೆಂಬರ್ 26: ತಮಿಳ್ನಾಡು ಕರಾವಳಿಗೆ ಅಪ್ಪಳಿಸಿದ್ದ ನೀವಾರ್ ಚಂಡಮಾರುತ ಕ್ಷೀಣವಾಗ ತೊಡಗಿದೆ. ಎರಡು ದಿನಗಳಿಂದ ಭಾರೀ ಮಳೆ ಮತ್ತು ಬಿರುಗಾಳಿಗೆ ತತ್ತರಿಸಿದ್ದ ಚೆನ್ನೈ ಮತ್ತು ಪುದುಚೇರಿ ಮಹಾ ವಿಪತ್ತಿನಿಂದ ಪಾರಾಗಿದೆ. ನೀವಾರ್ ಚಂಡಮಾರುತಕ್ಕೆ ತುತ್ತಾಗಿ ತಮಿಳುನಾಡಿನಲ್ಲಿ ಐದು ಮಂದಿ ಬಲಿಯಾಗಿದ್ದಾರೆ.
ಕರಾವಳಿಯಲ್ಲಿ ವಾಸವಿದ್ದ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಪುದುಚೇರಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿರುವುದನ್ನು ಮುಂದುವರಿಸಲಾಗಿದ್ದು ಜನರು ಮನೆಯಿಂದ ಹೊರಬಾರದೆಂದು ಸೂಚನೆ ನೀಡಲಾಗಿದೆ. ಉಳಿದಂತೆ, ಮಳೆಯ ತೀವ್ರತೆ ಕಡಿಮೆಯಾದ ಪ್ರದೇಶಗಳಲ್ಲಿ ಬಸ್ ಸಂಚಾರವನ್ನು ಪುನರ್ ಆರಂಭಿಸಲು ಅನುಮತಿ ನೀಡಲಾಗಿದೆ.
ವಿಲ್ಲುಪುರಂ, ತಿರುವಾರೂರು, ತಂಜಾವೂರು, ಕುದ್ದಲೂರು, ನಾಗಪಟ್ಟಿಣಂ, ಪುದುಕೋಟೈ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ರಾಜ್ಯ ಸಾರಿಗೆಯನ್ನು ಬಂದ್ ಮಾಡಲಾಗಿತ್ತು. ಇಂದು ಮಧ್ಯಾಹ್ನದಿಂದ ಕೆಲವು ಬಸ್ ಗಳು ಸಂಚಾರ ಆರಂಭಿಸಿವೆ.
ಮುಂದಿನ ಆರು ಗಂಟೆಗಳ ಅವಧಿಯಲ್ಲಿ ಉತ್ತರ ತಮಿಳುನಾಡು ಕರಾವಳಿ ಮೂಲಕ ನೀವಾರ್ ಚಂಡಮಾರುತ ಕ್ಷೀಣವಾಗುತ್ತಾ ಚಲಿಸಲಿದ್ದು, ರಾತ್ರಿ ವೇಳೆಗೆ ಮಳೆ, ಗಾಳಿ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ, ರಾಜ್ಯ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿ, ಚಂಡಮಾರುತ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. 101 ಮನೆಗಳು ಮಳೆಗೆ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾರೆ.
ಚೆನ್ನೈ ಮತ್ತು ಕೆಲವು ಜಿಲ್ಲೆಗಳು ಹಾಗೂ ಪುದುಚೇರಿಯಲ್ಲಿ ಎರಡು ದಿನಗಳಿಂದ ವಿಮಾನ ಮತ್ತು ರೈಲು ಸೇವೆಯನ್ನೂ ರದ್ದುಪಡಿಸಲಾಗಿತ್ತು.
ಇದೇ ವೇಳೆ, ತಮಿಳುನಾಡು ಮತ್ತು ಪುದುಚೇರಿ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಗೃಹಸಚಿವ ಅಮಿತ್ ಷಾ ಫೋನ್ ಮೂಲಕ ಮಾತನಾಡಿದ್ದು, ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ.
#WATCH Chennai witnessing spell of strong winds after #Cyclone Nivar made landfall near Puducherry late last night#TamilNadu pic.twitter.com/jZZB3FCJUX
— ANI (@ANI) November 26, 2020
Omg!!! Fishermen returning to the shore in #Kasimedu #CycloneNivar #NivarCycloneUpdate pic.twitter.com/40UecA7cz2
— Bharathi S. P. (@aadhirabharathi) November 25, 2020
Parry's Corner#Chennaiweather#ChennaiRain#ChembarambakkamLake#NivarCycloneUpdate#CycloneNivar#CycloneAlert #நிவர் #Chennai #Nivarpuyal #நிவர்புயல் #NivarCyclone pic.twitter.com/EIaiAZeanD pic.twitter.com/xhOdiRzepf
— மதியின் பார்வையில் (@Madhi_Editz) November 25, 2020
The 'very severe' cyclonic storm Nivar, which has weakened into a 'severe' cyclonic storm, has crossed the coast near Puducherry at midnight and five persons have been dead.
09-08-25 10:12 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ; 80 ಸಾವಿ...
09-08-25 08:00 pm
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
09-08-25 10:53 pm
Mangalore Correspondent
Drug’s Mangalore, Police, Arrest: ಡ್ರಗ್ಸ್ ಮುಕ...
09-08-25 09:42 pm
ಧರ್ಮಸ್ಥಳ ಕ್ಷೇತ್ರದ ಘನತೆ ಕುಗ್ಗಿಸಲೆತ್ನಿಸುತ್ತಿರುವ...
09-08-25 08:10 pm
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm