ಬ್ರೇಕಿಂಗ್ ನ್ಯೂಸ್
16-12-23 10:14 pm HK News Desk ದೇಶ - ವಿದೇಶ
ನವದೆಹಲಿ, ಡಿ.16: ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿರುವ ಲಲಿತ್ ಮೋಹನ್ ಝಾ ಪೊಲೀಸರ ವಿಚಾರಣೆಯಲ್ಲಿ ಸ್ಫೋಟಕ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಅಸಲಿಗೆ ಸಂಸತ್ತಿನಲ್ಲಿ ಒಳಗೆ ಮತ್ತು ಹೊರಗೆ ಮೈಗೆ ಬೆಂಕಿ ಹಚ್ಚಿಕೊಳ್ಳಲು ಪ್ಲಾನ್ ಮಾಡಿದ್ದರಂತೆ. ಆದರೆ, ಬೆಂಕಿಯಿಂದ ಗಾಯ ಆಗದಂತೆ ತಡೆಯುವ ಮೈಗೆ ಹಚ್ಚಿಕೊಳ್ಳುವ ಜೆಲ್ ಲಭ್ಯವಾಗದ ಕಾರಣ ಹೊಗೆ ಸಿಡಿಸುವುದಕ್ಕೆ ಮುಂದಾಗಿದ್ದರು ಎನ್ನುವ ಮಾಹಿತಿ ನೀಡಿದ್ದಾನೆ.
ಆರೋಪಿಗಳು ಪ್ಲಾನ್ ಎ ಮತ್ತು ಪ್ಲಾನ್ ಬಿ ಎಂಬ ಎರಡು ಐಡಿಯಾಗಳನ್ನು ಮಾಡಿಕೊಂಡಿದ್ದರು. ಪ್ಲಾನ್ ಎ ಪ್ರಕಾರ, ಮೈಗೆ ಹಚ್ಚಿಕೊಳ್ಳುವುದಕ್ಕೆ ಆದ್ಯತೆ ಇತ್ತು. ಸೂಕ್ತ ಸಂದರ್ಭದಲ್ಲಿ ಜೆಲ್ ಲಭ್ಯವಾಗದ ಕಾರಣ ಪ್ಲಾನ್ ಬಿ ಅನುಸರಿಸಿದ್ದರು. ಪ್ಲಾನ್ ಬಿ ಪ್ರಕಾರ, ಕಲರ್ ಹೊಗೆ ಸಿಡಿಸುವ ಕ್ಯಾನಿಸ್ಟರ್ ಬಳಸುವುದು ಯೋಜನೆ ಇತ್ತು. ಅದನ್ನೇ ಆರೋಪಿಗಳು ಅನುಸರಿಸಿದ್ದಾರೆ ಎಂಬುದು ಲಲಿತ್ ಝಾ ನೀಡಿರುವ ಮಾಹಿತಿ.
ನಾಲ್ವರು ಆರೋಪಿಗಳ ಮೊಬೈಲ್ ಫೋನ್ಗಗಳು ಲಲಿತ್ ಝಾನಲ್ಲಿಯೇ ಇದ್ದವು. ಆದರೆ ಅವನ್ನು ಸುಟ್ಟು ಹಾಕಿದ್ದಾನೆ ಎನ್ನಲಾಗುತ್ತಿದ್ದು, ಹೀಗೆ ಯಾಕೆ ಮಾಡಿದೆ ಎಂದು ಕೇಳಿದ ಪ್ರಶ್ನೆಗೆ, ಅದೇ ಮಾಸ್ಟರ್ ಪ್ಲಾನ್ ಎಂದು ಲಲಿತ್ ಝಾ ತಿಳಿಸಿದ್ದಾನಂತೆ. ಇದಲ್ಲದೆ, ಲಲಿತ್ ಝಾ ತನಿಖೆಗೆ ಸರಿಯಾಗಿ ಸಹಕರಿಸದೆ, ಪ್ರತಿ ಬಾರಿ ತನ್ನ ಹೇಳಿಕೆಯನ್ನು ಬದಲಿಸುತ್ತಿದ್ದಾನಂತೆ. ಆಮೂಲಕ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.13ರಂದು ಸಂಸತ್ ದಾಳಿಯ 22ನೇ ವಾರ್ಷಿಕ ದಿನದಂದೇ ನಾಲ್ವರು ಆರೋಪಿಗಳು ಸಂಸತ್ತಿನ ಒಳಗೆ ಮತ್ತು ಹೊರಗಡೆ ಹೊಗೆ ಬಾಂಬ್ ಸಿಡಿಸಿ ಭದ್ರತಾ ಉಲ್ಲಂಘನೆ ಮಾಡಿದ್ದರು. ಅಧಿವೇಶನ ನಡೆಯುತ್ತಿದ್ದಾಗಲೇ ಈ ರೀತಿ ಮಾಡುವ ಮೂಲಕ ಭಾರೀ ಭದ್ರತಾ ಲೋಪ ಎಸಗಿದ್ದರು. ಲೋಕಸಭೆಯ ಗ್ಯಾಲರಿಯಲ್ಲಿದ್ದ ಮನೋರಂಜನ್ ಮತ್ತು ಸಾಗರ್ ಶರ್ಮಾ ಅಲ್ಲಿಂದ ನೇರವಾಗಿ ಸಂಸದರು ಕುಳಿತಿದ್ದ ಅಂಗಣಕ್ಕೆ ಹಾರಿದ್ದ ಇಬ್ಬರು ಕಲರ್ ಬಾಂಬ್ ಸಿಡಿಸಿದ್ದಾರೆ.
As Delhi Police continues to investigate Parliament security breach conspiracy, key conspirator Lalit Mohan Jha made some shocking revelations during the interrogation and said that he and other members of the group had originally planned to immolate themselves inside and outside Parliament.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 09:24 am
HK News Desk
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm