ಬ್ರೇಕಿಂಗ್ ನ್ಯೂಸ್
07-12-23 05:22 pm HK News Desk ದೇಶ - ವಿದೇಶ
ಕಾಸರಗೋಡು, ಡಿ.7: ಮಹಿಳೆಯರು ಸಾಮಾನ್ಯವಾಗಿ ದಿನವಿಡೀ ಅಡುಗೆ ಕೆಲಸ ಮಾಡಬೇಕು, ಮನೆಯವರಿಗೆಲ್ಲ ನಾವೇ ತಿನ್ನುವುದಕ್ಕೆ ಮಾಡಿ ಹಾಕಬೇಕು ಎಂದು ಮೂಗು ಮುರಿಯುತ್ತಾರೆ. ಆದರೆ, ಇಲ್ಲಿನ ಮೂವರು ಗೃಹಿಣಿಯರು ಪುರುಷರೇ ಪಾರಮ್ಯ ಹೊಂದಿರುವ ಗ್ಯಾರೇಜ್ ಕೆಲಸವನ್ನೂ ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ತಾವೇ ಪ್ರತ್ಯೇಕವಾಗಿ ಮಹಿಳಾ ಟು ವೀಲರ್ ಗ್ಯಾರೇಜ್ ಶಾಪ್ ಒಂದನ್ನು ಆರಂಭಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಕಾಸರಗೋಡಿನ ಮೂವರು ಮಹಿಳೆಯರ ಈ ಸಾಧನೆ ರಾಜ್ಯದ ಗಮನ ಸೆಳೆದಿದೆ. ಯಾಕಂದ್ರೆ, ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರೇ ಸೇರಿಕೊಂಡು ಟು ವೀಲರ್ ಗ್ಯಾರೇಜ್ ಆರಂಭಿಸಿದ್ದಾರೆ. ಬಿನ್ಸಿ, ಮರ್ಸಿ ಮತ್ತು ಬಿಂಟು ಎಂಬ ಕಾಸರಗೋಡು ನಗರದ ಮೂವರು ಮಹಿಳೆಯರು ಸೇರಿಕೊಂಡು ದ್ವಿಚಕ್ರ ವಾಹನಗಳ ಗ್ಯಾರೇಜ್ ತೆರೆದಿದ್ದಾರೆ. ಕೇರಳ ಸರಕಾರದ ಕುಟುಂಬಶ್ರೀ ಯೋಜನೆಯಡಿ ದ್ವಿಚಕ್ರ ವಾಹನಗಳ ರಿಪೇರಿ ತರಬೇತಿ ಪಡೆದ ಈ ಮಹಿಳೆಯರು ಈಗ ಸ್ವಂತ ಗ್ಯಾರೇಜ್ ಆರಂಭಿಸಿದ್ದಾರೆ.
ತಮ್ಮ ಓರಗೆಯ ಮಹಿಳೆಯರು ಮನೆಯಲ್ಲಿ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಇವರು ಮಾತ್ರ ವರ್ಕ್ ಶಾಪ್ ನಲ್ಲಿ ಸ್ಪಾನರ್ ಹಿಡಿದು ನಟ್, ಬೋಲ್ಟ್ ತಿರುಗಿಸಲು ಆರಂಭಿಸಿದ್ದಾರೆ. ಕಾಸರಗೋಡು ನಗರದಲ್ಲಿ ಸಿಗ್ನೋರಾ ಹೆಸರಿನ ವರ್ಕ್ ಶಾಪ್ ತೆರೆದಿರುವುದು ಓರಗೆಯ ಮಹಿಳೆಯರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಸದಾ ಅಡುಗೆ ಕೆಲಸದಲ್ಲೇ ಬಿಝಿಯಾಗಿದ್ದವರು ಈಗ ಈ ಕೆಲಸದಲ್ಲಿ ತೊಡಗಿಸಿದ್ದು ತುಂಬ ಸಂತೋಷ ಕೊಟ್ಟಿದೆ. ವಿಭಿನ್ನ ರೀತಿಯ ಕೆಲಸದ ಬಗ್ಗೆ ಹೆಮ್ಮೆಯಿದೆ. ಬೇರೆಯವರ ಕೈಕೆಳಗೆ ಕೆಲಸ ಮಾಡುವ ಬದಲು ನಾವು ಮೂವರು ಸೇರಿ ನಮ್ಮದೇ ವರ್ಕ್ ಶಾಪ್ ತೆರೆದಿದ್ದೇವೆ ಎಂದು ಮರ್ಸಿ ತಿಳಿಸಿದ್ದಾರೆ.
ಇಂತಹದ್ದೊಂದು ಕನಸಿತ್ತು. ಕನಸನ್ನು ಈಡೇರಿಸಿಕೊಂಡ ಬಗ್ಗೆ ಹೆಮ್ಮೆ ಇದೆ. ನಾವು ಈ ಫೀಲ್ಡ್ ನಲ್ಲಿ ಕೆಲಸ ಮಾಡಿ ತೋರಿಸಬೇಕೆಂಬ ಗುರಿ ಇದೆ. ಆಮೂಲಕ ಪುರುಷನಿಗಿಂತ ನಾವೇನು ಕಮ್ಮಿಯಿಲ್ಲ ಎಂದು ತೋರಿಸುತ್ತೇವೆ ಎಂದಿದ್ದಾರೆ, ಬಿನ್ಸಿ. ಮಹಿಳೆಯರೇ ಸೇರಿಕೊಂಡು ಮಾಡಿರುವ ಈ ಗ್ಯಾರೇಜ್ ಕೇರಳದಲ್ಲಿ ಭಾರೀ ಸುದ್ದಿಯಾಗಿದೆ.
It was a dream come true for three Kasargod women, who pulled themselves out of the kitchen to the street only to become proud partners of Kerala's first all-women two-wheeler workshop.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm