ಬ್ರೇಕಿಂಗ್ ನ್ಯೂಸ್
19-02-25 04:43 pm Bangalore Correspondent ಕರ್ನಾಟಕ
ಬೆಂಗಳೂರು, ಫೆ 19: ಬೆಂಗಳೂರು: ಅತ್ತೆಯನ್ನು ಸಾಯಿಸೋದಕ್ಕೆ ಮಾತ್ರೆ ಬರೆದುಕೊಡಿ ಡಾಕ್ಟ್ರೇ.. ಹೀಗೊಂದು ಮೆಸೇಜ್ ವಾಟ್ಸಾಪ್ನಲ್ಲಿ ಬಂದಾಕ್ಷಣ ಬೆಂಗಳೂರಿನ ವೈದ್ಯ ಡಾ ಸುನೀಲ್ ಕುಮಾರ್ ಗಲಿಬಿಲಿಗೊಂಡಿದ್ದಾರೆ
ಹೌದು ಅತ್ತೆ ಸೊಸೆ ಜಗಳ ಬಹುತೇಕ ಕಡೆ ಇದೆ. ಆದರೆ ಹಿರಿಯರೆನ್ನುವ ಗೌರವ ಕೊಟ್ಟು, ಹಲವು ಕಡೆ ಹೊಂದಾಣಿಕೆ ಮಾಡಿಕೊಂಡು ಸಂಸಾರದ ದೋಣಿ ಸಾಗುತ್ತಿರುತ್ತದೆ. ಇನ್ನು ಕೆಲವಡೆ ಜಗಳ ಅತಿರೇಕಕ್ಕೆ ಹೊಗಿ, ಹೊಡೆದಾಟ, ಬಡಿದಾಟಗಳ ವಿಡಿಯೋ ಕೂಡಾ ವೈರಲ್ ಆಗಿದ್ದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಅತ್ತೆಯನ್ನು ಸಾಯಿಸುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾಳೆ ಓರ್ವ ಸೊಸೆ.
ಅತ್ತೆ ಕಾಟ ತುಂಬಾ ಜಾಸ್ತಿಯಾಗಿದೆ, ಹೇಗಾದ್ರು ಮಾಡಿ ಸಾಯಿಸಬೇಕಿತ್ತು, ಮಾತ್ರೆ ಹೇಳಿ ಅಂತ ಬೆಂಗಳೂರು ವೈದ್ಯ ಸುನಿಲ್ ಕುಮಾರ್ ಅವರಿಗೆ ಮಾಡಿದ ಮೆಸೇಜ್ ಈಗ ವೈರಲ್ ಆಗಿದೆ. ಆದ್ರೆ ಇದನ್ನು ಅಲ್ಲಿಗೇ ಬಿಡದ ವೈದ್ಯರು, ಇಂತಹ ಪ್ರಕರಣಗಳು ಆಗುತ್ತಲೇ ಇರುತ್ತವೆ, ಇದನ್ನು ನೆಗ್ಲೆಕ್ಟ್ ಮಾಡ್ಬಾರ್ದು ಅಂತ ಸಂಜಯ ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ಯುವತಿಯ ಮೆಸೇಜ್ನಿಂದ ದಿಗ್ಬ್ರಾಂತನಾಗಿದ್ದೇನೆ ಎಂದು ವಿಜಯ ಕರ್ನಾಟಕ ವೆಬ್ ಗೆ ಡಾ ಸುನೀಲ್ ಕುಮಾರ್ ಹೆಬ್ಬಿ ಹೇಳಿದ್ದಾರೆ.
ಮೆಸೇಜ್ನಲ್ಲಿ ಏನಿದೆ?
ಡಾಕ್ಟರ್: ಸಂಪರ್ಕ ಮಾಡಿದ ವಿಷಯ ಹೇಳಿ..
ಸೊಸೆ: ಭಯ ಆಗ್ತಾ ಇದೆ ಹೇಳಕ್ಕೆ
ಡಾಕ್ಟರ್: ಹೇಳಿ
ಸೊಸೆ: ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತ
ಡಾಕ್ಟರ್: ಯಾರನ್ನ
ಸೊಸೆ: ಅತ್ತೆನ
ಡಾಕ್ಟರ್: ಯಾಕೆ
ಸೊಸೆ: ತುಂಬಾ ಹಿಂಸೆ ಕೊಡ್ತಾ ಇದ್ದಾರೆ, ಅದಕ್ಕೆ ನಿಮ್ಮನ್ನ ಕೇಳೋಣ ಅಂತ, ಏನಾದ್ರು ಹೇಳ್ತೀರಾ ಹೇಗೆ ಸಾಯಿಸೋದು ಅಂತ, ಪ್ಲೀಸ್ ಹೇಳಿ, ತುಂಬಾ ಏಜ್ ಆಗಿದೆ,
ಡಾಕ್ಟರ್: ನಾವು ಪ್ರಾಣ ಉಳಿಸೋ ಜನ
ಸೊಸೆ: ಟ್ಯಾಬ್ಲೆಟ್ ಇರುತ್ತಲ್ಲ ಅದು ಹೇಳಿ...ಒಂದು ಎರಡು ತಗೊಂಡ್ರೆ ಸಾಯ್ತಾರಲ್ವ ಆತರ ಇಲ್ವಾ..
ಈ ರೀತಿಯಾಗಿ ಒಂದು ನಂಬರಿಂದ ವೈದ್ಯರಿಗೆ ದಿನಾಂಕ ಫೆ.17 ರಂದು ಮಧ್ಯಾಹ್ನ 2 ಗಂಟೆಗೆ ಮೆಸೇಜ್ ಬಂದಿದೆ. ತಕ್ಷಣವೇ ಸಂಜೆ 4-38ಕ್ಕೆ ವೈದ್ಯರು ಮೆಸೇಜ್ ಸ್ಕ್ರೀನ್ ಶಾಟ್ ನೊಂದಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಇನ್ಸ್ಟಾಗ್ರಾಂ ಮೂಲಕ ನಂಬರ್ ಪಡೆದ ಮಹಿಳೆ, ವೈದ್ಯರಿಗೆ ಮೆಸೇಜ್ ಮಾಡಿ ಈ ರೀತಿ ಸಾಯಿಸುವ ಮಾತ್ರೆ ಕೇಳಿದ್ದಾರೆ. ವೈದ್ಯರು ನಿರಾಕರಿಸಿದ ತಕ್ಷಣ ಮಹಿಳೇ ಮೆಸೇಜ್ ಡಿಲೀಟ್ ಮಾಡಿ, ವೈದ್ಯರ ನಂಬರನ್ನು ಬ್ಲಾಕ್ ಮಾಡಿದ್ದಾಳೆ. ನಂತರ ಕರೆಮಾಡಿ ಕ್ಷಮೆ ಕೂಡಾ ಕೇಳಿದ್ದಾಳೆ. ಇನ್ನು ಈ ಪ್ರಕರಣದ ಬಗ್ಗೆ ಅನುಮಾನ ಇರುವ ವೈದ್ಯರು, ಈ ಘಟನೆ ಬಗ್ಗೆ ಗೊಂದಲ ಇದ್ದು, ನಾನು ಸಾಮಾಜಿಕವಾಗಿ ಸಕ್ರಿಯನಾಗಿದ್ದು, ವಿಜಯಪುರದಲ್ಲಿ ಶಾಸಕ ಚುನಾವಣೆಗೂ ಸ್ಪರ್ಧಿಸಿದ್ದರಿಂದ ಯಾರಾದರೂ ಟ್ರ್ಯಾಪ್ ಮಾಡಲು ಈ ರೀತಿ ಮೆಸೇಜ್ ಮಾಡಿರಬಹುದು, ಹಿಂದೆಯೂ ಒಂದು ಇದೇ ರೀತಿಯ ಕರೆ ಬಂದಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅತ್ತೆಯನ್ನು ಸಾಯಿಸಲು ಮಾತ್ರೆಯ ಕುರಿತು ಸಲಹೆ ನೀಡುವಂತೆ ಮಹಿಳೆಯೊಬ್ಬರು ವೈದ್ಯರೊಬ್ಬರ ಬಳಿ ಕೇಳಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈದ್ಯ ಸುನಿಲ್ ಕುಮಾರ್ ಎಂಬವರಿಗೆ ಮೆಸೇಜ್ ಕಳುಹಿಸಿರುವ ಮಹಿಳೆಯೊಬ್ಬರು, ತಮ್ಮ ಅತ್ತೆಯನ್ನು ಸಾಯಿಸಲು ಮಾತ್ರೆಯ ವಿವರ ಕೊಡುವಂತೆ ಕೇಳಿದ್ದಾರೆ. ಮಹಿಳೆಯ ಮಾತು ಕೇಳಿ ಆತಂಕಗೊಂಡ ವೈದ್ಯ ಸುನಿಲ್ ಕುಮಾರ್ ಅವರು ಸಂಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇನ್ಸ್ಟಾಗ್ರಾಂ ಮೂಲಕ ಸುನಿಲ್ ಕುಮಾರ್ ಅವರ ನಂಬರ್ ಪಡೆದಿದ್ದ ಮಹಿಳೆ, ಸೋಮವಾರ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಮಾಡಿದ್ದಾರೆ. 'ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರನ್ನು ಸಾಯಿಸಲು ಯಾವುದಾದರೂ ಐಡಿಯಾ ಹೇಳಿ, ಟ್ಯಾಬ್ಲೆಟ್ ಕುರಿತು ಮಾಹಿತಿ ಕೊಡಿ' ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್ 'ನಾವು ಪ್ರಾಣ ಉಳಿಸುವವರು' ಎಂದಿದ್ದಾರೆ. ತಕ್ಷಣ ತನ್ನ ಮೆಸೇಜ್ಗಳನ್ನ ಡಿಲೀಟ್ ಮಾಡಿರುವ ಮಹಿಳೆ ಸುನಿಲ್ ಕುಮಾರ್ ಅವರ ನಂಬರ್ ಬ್ಲಾಕ್ ಮಾಡಿದ್ದಾರೆ. ಇದೊಂದು ಪ್ರಾಂಕ್ ಸಂದೇಶವೋ ಅಥವಾ ಅಸಲಿ ಉದ್ದೇಶವೋ ಎಂಬುದು ತಿಳಿಯದೇ, ಗೊಂದಲಕ್ಕೀಡಾಗಿರುವ ಸುನಿಲ್ ಕುಮಾರ್ ಮಹಿಳೆಯ ಕುರಿತು ಸಂಜಯನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.
''ಮೆಸೇಜ್ಗಳನ್ನು ಕಳುಹಿಸಿರುವ ನಂಬರ್ ಸ್ವಿಚ್ಡ್ ಆಫ್ ಆಗಿದೆ. ಪ್ರಾಂಕ್ ಮೆಸೇಜ್ ಆಗಿರಬಹುದು ಎಂದು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸುನಿಲ್ ಕುಮಾರ್ ಅವರು ನೀಡಿರುವ ಮಾಹಿತಿಯ ಅನ್ವಯ ತನಿಖೆ ನಡೆಸುತ್ತಿದ್ದೇವೆ'' ಎಂದು ಪೊಲೀಸರು ತಿಳಿಸಿದ್ದಾರೆ.
Bangalore Women messages doctor asking for pills to kill her mother in law, case filed. Doctor Sunil kumar has filed a complaint against the women whose mobile has been switched off now.
31-12-25 10:57 pm
Bangalore Correspondent
ಕೋಗಿಲು ಬಡಾವಣೆ ವಿವಾದ ನಡುವೆಯೇ ಕೇರಳ ಸಿಎಂ ಪಿಣರಾಯಿ...
31-12-25 02:35 pm
ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಚಕ್ರವರ್ತಿ ಸೂಲಿ...
30-12-25 11:12 pm
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
31-12-25 10:57 pm
Mangalore Correspondent
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
ಹೊಸ ವರ್ಷಾಚರಣೆ ; ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ...
30-12-25 10:43 pm
31-12-25 07:05 pm
Mangalore Correspondent
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm
ಪುತ್ತೂರಿನ ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳ...
31-12-25 05:48 pm
ಸ್ಟಾಕ್ ಮಾರ್ಕೆಟ್ ಹೆಸ್ರಲ್ಲಿ ವಂಚಕರಿಂದ ಪಂಗನಾಮ ; 5...
30-12-25 10:40 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm