ಬ್ರೇಕಿಂಗ್ ನ್ಯೂಸ್
29-01-25 09:46 pm Bangalore Correspondent ಕರ್ನಾಟಕ
ಬೆಂಗಳೂರು, ಜ.29: ಬಿಜೆಪಿ ಪಕ್ಷದಲ್ಲಿ ಪ್ರಜಾಪ್ರಭುತ್ವ ಹಾಳಾಗಿ ಹೋಗಿದೆ. ವಿಜಯೇಂದ್ರ ಅವರೇ ಎಲ್ಲವನ್ನೂ ನಿರ್ಧರಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಗಿಂತಲೂ ಇವರೇ ದೊಡ್ಡವರಾಗಿದ್ದಾರೆ. ಇಷ್ಟು ದಿನ ಸಹಿಸಿಕೊಂಡೆ, ಇನ್ನು ಮುಂದೆ ಇರಕ್ಕಾಗಲ್ಲ. ವಿಜಯೇಂದ್ರ ವಿರುದ್ಧ ಯುದ್ಧ ಸಾರುತ್ತೇನೆ ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್ ಗುಡುಗಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ತಮ್ಮ ಮಗನನ್ನು ರಕ್ಷಣೆ ಮಾಡುತ್ತಿದ್ದಾರೆ. ಪಕ್ಷದ ಬಗ್ಗೆ ಗಮನ ಹೊಂದಿಲ್ಲ. ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ. ಎಲ್ಲವನ್ನೂ ಹೇಳುತ್ತೇನೆ. ದೆಹಲಿಗೆ ಹೋಗಿ ಅಮಿತ್ ಶಾ, ಜೆ.ಪಿ ನಡ್ಡಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇನೆ. ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ, ನಾಯಕರ ಅಸಮಾಧಾನ, ನಾಯಕತ್ವದ ಸಮಸ್ಯೆಗಳನ್ನು ಹೇಳುತ್ತೇನೆ ಎಂದರು.
ಇಷ್ಟು ದಿನ ಸಹಿಸಿಕೊಂಡೆ, ಆದರೆ ಇನ್ನು ಮುಂದೆ ಯುದ್ಧ ಸಾರಲಿದ್ದೇನೆ. ವಿಜಯೇಂದ್ರ ಅವರ ಧೋರಣೆಗೆ ನನ್ನ ತೀವ್ರ ವಿರೋಧ ಇದೆ. ಈಗಲೇ ಇವರ ಅಹಂಕಾರಕ್ಕೆ ಕಡಿವಾಣ ಹಾಕಬೇಕು, ಇಲ್ಲವಾದರೆ ಅವರನ್ನು ಬದಲಾಯಿಸಬೇಕು ಎಂದರು.
ಪಕ್ಷ ಬಿಡುತ್ತೀರಾ ಎಂಬ ಪ್ರಶ್ನೆಗೆ, ರಾಷ್ಟ್ರೀಯ ನಾಯಕರ ಜೊತೆಗೆ ಮಾತಾಡಬೇಕು, ಪಕ್ಷ ಬಿಡುವ ವಿಚಾರವನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಯಾವಾಗ ಏನಾಗುತ್ತದೋ ಗೊತ್ತಿಲ್ಲ, ಏನಾದರೂ ಸಂಭವಿಸಬಹುದು ಎನ್ನುವ ಮೂಲಕ ಹೊರಗೆ ಕಾಲಿಡುತ್ತಿರುವ ಸೂಚನೆ ನೀಡಿದರು.
"ವಿಜಯೇಂದ್ರ ಅವರು ಸಣ್ಣ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೆ, ಒಂದು ವರ್ಷದಲ್ಲಿ ಅನುಭವ ಪಡೆಯುತ್ತಾರೆ ಎಂದೆನಿಸಿತ್ತು. ಆದರೆ ಬದಲಾವಣೆ ಕಂಡು ಬಂದಿಲ್ಲ. ಪಕ್ಷದಲ್ಲಿ ಪ್ರಜಾಪ್ರಭುತ್ವವಿಲ್ಲ, ನೇಮಕಾತಿಗಳನ್ನು ಏಕಚಕ್ರಾಧಿಪತ್ಯದಂತೆ ಮಾಡಲಾಗುತ್ತಿದೆ. 100% ಶಾಸಕರು ನಮ್ಮ ಬೆಂಬಲದಲ್ಲಿದ್ದಾರೆ, ಆದರೂ ನಾಯಕತ್ವ ತೀರ್ಮಾನಗಳು ಆಂತರಿಕ ಪ್ರಜಾಪ್ರಭುತ್ವದೊಂದಿಗೆ ನಡೆಯುತ್ತಿಲ್ಲ ಎಂದರು. ಈಗಾಗಲೇ ಬಣ ಬಡಿದಾಟದಿಂದ ಕಂಗೆಟ್ಟಿರುವ ಬಿಜೆಪಿಯಲ್ಲಿ ಈಗ ಸುಧಾಕರ್ ಕೂಡ ತೊಡೆ ತಟ್ಟಿರುವುದು ತೀವ್ರ ತಳಮಳ ಸೃಷ್ಟಿಸಿದೆ.
Dr K Sudhakar slams B. Y. Vijayendra says get ready for war. Is Vijayendra greater than Yediyurappa he added.
23-02-26 05:15 pm
HK News Staffer
ಮಕ್ಕಳು ತಮ್ಮನ್ನು ನೋಡಿಕೊಳ್ತಿಲ್ಲ ಎಂಬ ನೋವು ; ಕೊಡಗ...
23-02-26 12:35 pm
ಜೂನ್ ಒಳಗಡೆ ಸ್ಥಳೀಯ ಸಂಸ್ಥೆ ಚುನಾವಣೆ ; ಸಿಎಂ ಸಿದ್ದ...
23-02-26 11:14 am
ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್...
21-02-26 11:27 am
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
23-02-26 06:57 pm
HK News Desk
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ತಮಿಳುನಾಡು,...
22-02-26 06:19 pm
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
23-02-26 08:20 pm
Mangaluru Correspondent
Mangalore, Belthangady: ಆಂಬುಲೆನ್ಸ್ ನಲ್ಲೇ ಮಗುವ...
23-02-26 12:19 pm
Mangalore, Thokottu: ವಿದ್ಯುತ್ ಆಘಾತಕ್ಕೊಳಗಾಗಿ ಯ...
23-02-26 12:00 pm
ನನ್ನ ಅಕ್ಕಿ, ತರಕಾರಿ ನಾನೇ ಬೆಳೆಯುತ್ತೇನೆ, ನೀವೂ ಬೆ...
22-02-26 06:55 pm
ಸುಜಿತ್ ಮಾಡೂರು ಬಿಜೆಪಿಯಿಂದ ಉಚ್ಚಾಟನೆ ಪ್ರಕರಣ ; ಸಾ...
21-02-26 09:30 pm
23-02-26 10:44 pm
HK News Desk
ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ...
23-02-26 09:15 pm
Tumkur Robbery: ತುಮಕೂರಿನಲ್ಲಿ ಖಾರದ ಪುಡಿ ಎರಚಿ ಜ...
23-02-26 07:35 pm
Udupi: ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್...
23-02-26 04:30 pm
ನೆರೆಮನೆಯಿಂದ ಚಿನ್ನ ಕದ್ದ ಆರೋಪ ; ಅಡೂರು ಠಾಣೆಗೆ ಕರ...
23-02-26 11:36 am