ಬ್ರೇಕಿಂಗ್ ನ್ಯೂಸ್
12-11-24 10:31 pm HK News Desk ಕರ್ನಾಟಕ
ಕಾರವಾರ, ನ.12: ಕಾರವಾರ ನಗರದಲ್ಲಿ ಪತ್ತೆಯಾದ ದೊಡ್ಡ ಜಾತಿಯ ರಣಹದ್ದು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿತ್ತು. ಹದ್ದಿನ ಕಾಲಿನಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಹೊಂದಿದ್ದನ್ನು ನೋಡಿದ ಸ್ಥಳೀಯರು ಗಾಬರಿಗೀಡಾಗಿದ್ದರು. ಭದ್ರತಾ ಸಿಬಂದಿಗೂ ಆತಂಕ ಎದುರಾಗಿತ್ತು.
ಕಳೆದ ಮೂರು ದಿನಗಳಿಂದ ಕಾರವಾರದ ಕೋಡಿಭಾಗ ಬಳಿಯ ನದಿ ಆಸುಪಾಸಿನಲ್ಲಿ ಹದ್ದಿನ ಹಾರಾಟ ಗಮನಿಸಿದ ಜನ, ಗೂಢಚಾರಿಕೆ ನಡೆಸಲು ಶತ್ರುಗಳು ಹದ್ದಿನಲ್ಲಿ ಕ್ಯಾಮರಾ ಅಳವಡಿಸಿ ಹಾರಲು ಬಿಟ್ಟಿದ್ದಾರೆ ಎಂಬ ಅನುಮಾನ ಪಟ್ಟಿದ್ದರು. ಹದ್ದಿನ ಕಾಲಿಗೆ ಇಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗಿತ್ತು. ಎರಡೂ ಕಾಲುಗಳಿಗೆ ಬಿಳಿ ಬಣ್ಣದ ಸ್ಟಿಕ್ಕರ್ ಹಾಕಲಾಗಿತ್ತು. ಪಕ್ಷಿಯ ಬೆನ್ನಿನಲ್ಲಿ ಸೋಲಾರ್ ಪ್ಲೇಟ್ ರೀತಿ ಕಾಣುವ ಚಿಪ್ ಕಂಡುಬಂದಿತ್ತು. ಇದೆಲ್ಲ ನೋಡಿದ ಜನರಿಗೆ ಅನುಮಾನ ಬಂದಿತ್ತು. ಕೈಗಾ ಅಣು ವಿದ್ಯುತ್ ಸ್ಥಾವರ, ಕದಂಬ ನೌಕಾನೆಲೆ ಇರುವುದರಿಂದ ರಹಸ್ಯ ಕಾರ್ಯಾಚರಣೆ ಬಗ್ಗೆ ಅನುಮಾನ ಮೂಡಿತ್ತು. ವಿಚಾರ ತಿಳಿಯುತ್ತಿದ್ದಂತೆ ಪಕ್ಷಿಯ ಮೇಲೆ ಅಧಿಕಾರಿಗಳು ತನಿಖೆ ನಡೆಸಿ ಅಸಲಿ ಸತ್ಯವನ್ನು ಹೊರ ತೆಗೆದಿದ್ದಾರೆ.

ಅರಣ್ಯ ಇಲಾಖೆಯವರೊಂದಿಗೆ ಸ್ಥಳಕ್ಕೆ ಹೋಗಿ ಬೈನಾಕ್ಯುಲರ್ ಮತ್ತು ಫೋಟೋಗ್ರಫಿ ಮೂಲಕ ಹದ್ದನ್ನು ಪರಿಶೀಲಿಸಲಾಗಿದೆ. ಹದ್ದಿಗೆ ಒಂದು ಲೇಬಲ್ ಅಂಟಿಸಲಾಗಿದ್ದು ಅದರಲ್ಲಿ ಇಂಗ್ಲಿಷನಲ್ಲಿ ‘If Found please contact ccffdtadobaz@mahaforest.gov.in OT10-4G s/n:245671 5033 2 ಎಂದು ಬರೆದಿರುತ್ತದೆ. ಇದು Himalayan Griffon Vulture ಜಾತಿಯ ದೊಡ್ಡ ರಣಹದ್ದಾಗಿದೆ. ಅಳಿವಿನ ಅಂಚಿನಲ್ಲಿರುವ ವಲಸೆ ಹಕ್ಕಿ. ಮಹಾರಾಷ್ಟ್ರ ಅರಣ್ಯ ಇಲಾಖೆಯವರು ರಕ್ಷಿಸಿ ಪೋಷಿಸುತ್ತಿದ್ದು ಹಾಗೂ ಮೇಲ್ವಿಚಾರಣೆ ಮಾಡುತ್ತಿದ್ದು ಪ್ರತಿ ವರ್ಷ ಇದು ಎಲ್ಲೆಲ್ಲಿ ವಲಸೆ ಹೋಗುತ್ತದೆ ಎಂದು ಅಧ್ಯಯನ ಮಾಡಲು ಜಿಪಿಎಸ್ ಅಳವಡಿಸಿರುತ್ತಾರೆ.
ರಣಹದ್ದು ಯಾವುದೇ ರೀತಿಯ ಗೂಢಚರ್ಯಕ್ಕೆ ಅಥವಾ ಇನ್ಯಾವುದೇ ಕುಕೃತ್ಯ ಕೆಲಸಕ್ಕೆ ಬಳಸಿದ್ದು ಅಲ್ಲ. ರಣಹದ್ದಿನ ಮೇಲೆ ಅರಣ್ಯ ಇಲಾಖೆಯವರು ನಿಗಾ ವಹಿಸಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಕಾರವಾರ ಪೊಲೀಸ್ ಇಲಾಖೆ ವಿನಂತಿಸಿದೆ.
Karwar, Uttara Kannada dist: An electronic device, attached to the back of a White-rumped vulture, created curiosity and concerns alike among the people at Nadivada near Kodibagh here.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm