ಬ್ರೇಕಿಂಗ್ ನ್ಯೂಸ್
03-04-24 11:06 pm HK News Desk ಕರ್ನಾಟಕ
ಮೈಸೂರು, ಎ.3: ಮೈಸೂರಿನಲ್ಲಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಎಂ.ಲಕ್ಷ್ಮಣ್ ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿಯನ್ನೂ ಘೋಷಣೆ ಮಾಡಿದ್ದಾರೆ. ಲಕ್ಷ್ಮಣ್ ಅವರು ಎದುರಾಳಿ ಅಭ್ಯರ್ಥಿ ಮಹಾರಾಜ ಯದುವೀರ್ ಗಿಂತಲೂ ಶ್ರೀಮಂತ ವ್ಯಕ್ತಿ ಎಂಬುದು ಅಫಿಡವಿಟ್ ನಲ್ಲಿ ಕಾಣಿಸಿಕೊಂಡಿದೆ.
ಮಹಾರಾಜ ಯದುವೀರ್ ಅವರ ಆಸ್ತಿ ಮೌಲ್ಯ 4 ಕೋಟಿ 99 ಲಕ್ಷ ಆಗಿತ್ತು. ಲಕ್ಷ್ಮಣ್ ಚರಾಸ್ತಿ ಮತ್ತು ಸ್ಥಿರಾಸ್ತಿ ಒಟ್ಟಾರೆ ಮೌಲ್ಯ 20 ಕೋಟಿಗೂ ಅಧಿಕ ಇದೆ. ಲಕ್ಷ್ಮಣ್ ಪತ್ನಿಯೂ ಕೋಟ್ಯಾಧೀಶೆಯಾಗಿದ್ದು ಪತ್ನಿಯ ಚರಾಸ್ತಿ ಮತ್ತು ಸ್ಥಿರಾಸ್ತಿಯ ಒಟ್ಟಾರೆ ಆಸ್ತಿ ಮೌಲ್ಯ ನಾಲ್ಕು ಕೋಟಿ ಇದೆ. ಎಂ.ಲಕ್ಷ್ಮಣ್ ಕೈಯಲಿರುವ ನಗದು 6,45,000, ಲಕ್ಷ್ಮಣ್ ಪತ್ನಿ ಹೆಸರಿನಲ್ಲಿ 5,32,000 ರೂ. ನಗದು ಇದೆ.
ಲಕ್ಷ್ಮಣ್ ವಿವಿಧ ಬ್ಯಾಂಕ್ ಗಳ ಉಳಿತಾಯ ಖಾತೆಯಲ್ಲಿ 22 ಲಕ್ಷ ಹಣ ಇದೆ. ಪತ್ನಿ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ 29 ಲಕ್ಷ ಹಣ ಇದೆ. ಲಕ್ಷ್ಮಣ್ ಯಾವುದೇ ಬ್ಯಾಂಕ್ ಗಳಲ್ಲಿ ಸಾಲ ಪಡೆದಿಲ್ಲ. ಒಂದು ಸ್ವಂತ ಕಾರು ಹೊಂದಿದ್ದಾರೆ.
ಪತ್ನಿ ಬಳಿ 100 ಗ್ರಾಂ ಬಂಗಾರ ಇದೆ. ಲಕ್ಷ್ಮಣ್ ಉಳಿತಾಯ ಖಾತೆ ಹಾಗೂ ಕೈಯಲ್ಲಿರುವ ನಗದು ಸೇರಿ ಒಟ್ಟಾರೆ 4 ಕೋಟಿ 66 ಲಕ್ಷ 5 ಸಾವಿರ ಹಣ ಇದೆ. ಪತ್ನಿ ಹೆಸರಿನಲ್ಲಿ ಒಟ್ಟಾರೆ 3 ಕೋಟಿ 95 ಲಕ್ಷ ಹಣ ಇದೆ. ಲಕ್ಷ್ಮಣ್ ಮೈಸೂರಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಎಂ.ಲಕ್ಷ್ಮಣ ಮನೆ, ಕಟ್ಟಡ ಹಾಗೂ ನಿವೇಶನದ ಆಸ್ತಿ ಮೌಲ್ಯ 15 ಕೋಟಿ ಇದೆ. ಲಕ್ಷ್ಮಣ್ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
Congress Lok Sabha candidate M. Lakshman has filed his nomination papers and declared his assets. According to the affidavit, Laxman is richer than rival candidate Maharaja Yaduveer.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm