ಬ್ರೇಕಿಂಗ್ ನ್ಯೂಸ್
01-04-24 08:02 pm Bangalore Correspondent ಕರ್ನಾಟಕ
ಬೆಂಗಳೂರು, ಏ.1: ಮಂಡ್ಯ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿರಿವಂತ ಉದ್ಯಮಿ ವೆಂಕಟರಮಣೇ ಗೌಡ ಅಲಿಯಾಸ್ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ತನ್ನ ಆಸ್ತಿ ಘೋಷಣೆ ಮಾಡಿದ್ದು 410 ಕೋಟಿ ಆಸ್ತಿ ಹೊಂದಿರೋದಾಗಿ ಅಫಿಡವಿಟ್ ನೀಡಿದ್ದಾರೆ.
ಸ್ಟಾರ್ ಚಂದ್ರು ಹೆಸರಲ್ಲಿ 237 ಕೋಟಿ ಆಸ್ತಿ ಇದ್ದರೆ, ಪತ್ನಿ ಕುಸುಮಾ ಹೆಸರಲ್ಲಿ 146 ಕೋಟಿ ಆಸ್ತಿ ಇರುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಸ್ಟಾರ್ ಚಂದ್ರು ಹುಟ್ಟುವಾಗಲೇ ಕೋಟ್ಯಾಧೀಶ!
ಮೂಲತಃ ರೈತ ಕುಟಂಬದಿಂದ ಬಂದಿರುವ ಸ್ಟಾರ್ ಚಂದ್ರು ಹುಟ್ಟುವಾಗಲೇ ಆಗರ್ಭ ಸಿರಿವಂತ. ಅವರಿಗೆ ಪಿತ್ರಾರ್ಜಿತವಾಗಿ ಅವಿಭಕ್ತ ಕುಟುಂಬದಿಂದ ಬಂದಿರುವ ಆಸ್ತಿಯೇ 26 ಕೋಟಿ ಇದೆಯಂತೆ. ಪಿತ್ರಾರ್ಜಿತ ಆಸ್ತಿ ಮೌಲ್ಯ 26 ಕೋಟಿ ಎಂದು ನಮೂದಿಸಿದ್ದಾರೆ.
ಇನ್ನು ಸ್ಟಾರ್ ಚಂದ್ರು ಅವರ ಚರಾಸ್ತಿ ಮೌಲ್ಯ 99.36 ಕೋಟಿ ಇದೆ. ಪತ್ನಿ ಕುಸುಮಾ ಹೆಸರಲ್ಲಿ 4.20 ಕೋಟಿ ಚರಾಸ್ತಿ ಇದೆ. ಚಂದ್ರು ಕೈಯಲ್ಲಿ ನಗದು 1,36,14,355 ರೂ. ಹೊಂದಿದ್ದಾರೆ. ತನ್ನದೇ ಹೆಸರಲ್ಲಿ ಮೂರು ಟ್ರ್ಟಾಕ್ಟರ್ ಹೊಂದಿರುವ ಸ್ಟಾರ್ ಚಂದ್ರು ಮಾಲೀಕತ್ವದಲ್ಲಿ ಕಾರು ಇಲ್ಲ.
ಸ್ಟಾರ್ ಚಂದ್ರು ಪತ್ನಿ ಕುಸುಮ ಅವರ ಸ್ತಿರಾಸ್ತಿ ಮೌಲ್ಯ 127 ಕೋಟಿ ಇದೆ. ನಗದು 64,94,175 ರೂ. ಇದೆಯಂತೆ. ಪತ್ನಿ ಕುಸುಮಾ ಬಳಿಯೂ ಸ್ವಂತ ಹೆಸರಲ್ಲಿ ವಾಹನ ಇಲ್ಲ. ಚಿನ್ನ 4.2 ಕೆಜಿ (₹ 2.30 ಕೋಟಿ), ವಜ್ರ 71 ಸಿಟಿಎಸ್ (₹ 15 ಲಕ್ಷ), ಬೆಳ್ಳಿ 26 ಕೆಜಿ (₹21.50 ಲಕ್ಷ) ಇದೆ.
ಸ್ಟಾರ್ ಚಂದ್ರು ಮತ್ತು ಪತ್ನಿ ಕುಸುಮಾ ಯಾವುದೇ ಸಾಲ ಹೊಂದಿಲ್ಲ. ಸ್ಟಾರ್ ಚಂದ್ರು ಹೆಸರಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣವೂ ಇಲ್ಲ. ಮಂಡ್ಯ, ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು ಕಾಲ ಕಾಲಕ್ಕೆ ತೆರಿಗೆ ಪಾವತಿಸಿರುವ ಬಗ್ಗೆ ಸ್ಟಾರ್ ಚಂದ್ರು ಹೇಳಿಕೊಂಡಿದ್ದಾರೆ.
Mandya congress candidate Star Chandru richest candidate after DK Suresh, 410 crores wealth, no loan no car, 4 kilo Gold.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 06:55 pm
HK News Staffer
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
27-08-26 05:24 pm
HK News Staffer
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm