ಬ್ರೇಕಿಂಗ್ ನ್ಯೂಸ್
04-01-24 11:28 am Mysuru Correspondent ಕರ್ನಾಟಕ
ಮೈಸೂರು, ಜ.4: ಮೈಸೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮತ್ತು ಟೇಕಾಫ್ ಆಗುವ ಸಂದರ್ಭದಲ್ಲಿ ಪೈಲಟ್ ಕಣ್ಣಿಗೆ ಬೀಳುವಂತೆ ಲೇಸರ್ ಕಿರಣಗಳನ್ನು ಹಾಯಿಸಿ ಕಣ್ಣು ಮಂಜಾಗಿಸುವ ಕಿಡಿಗೇಡಿ ಕೃತ್ಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ. ಮೈಸೂರು ವಿಮಾನ ನಿಲ್ದಾಣದ ಡೈರೆಕ್ಟರ್ ಜೆ.ಆರ್ ಅನೂಪ್ ಹೇಳುವ ಪ್ರಕಾರ, ಈ ರೀತಿಯ ಘಟನೆ ಹಲವು ತಿಂಗಳಿಂದ ಆಗುತ್ತಿದೆಯಂತೆ. ಲೇಸರ್ ಬೀಮ್ ಕಿರಣಗಳನ್ನು ವಿಮಾನದಲ್ಲಿ ಪೈಲಟ್ ಕುಳಿತುಕೊಳ್ಳುವ ಕಾಕ್ ಪಿಟ್ ಗೆ ಹಾಯಿಸುತ್ತಿದ್ದಾರೆ. ಅಪರಿಚಿತ ವ್ಯಕ್ತಿಗಳು ಉದ್ದೇಶಪೂರ್ವಕ ಈ ಕೃತ್ಯ ಎಸಗುತ್ತಿದ್ದಾರೆ. ಲೇಸರ್ ಟಾಯ್ಸ್ ಮಾರುಕಟ್ಟೆಯಲ್ಲಿ ಸುಲಭವಾಗಿ ಕೈಗೆ ಸಿಗುತ್ತಿದ್ದು, ಯಾರೋ ದುಷ್ಕರ್ಮಿಗಳು ಇದರಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಈ ರೀತಿಯ ಲೇಸರ್ ಕಿರಣಗಳು ಪವರ್ ಫುಲ್ ಆಗಿದ್ದು ಪೈಲಟ್ ಕಣ್ಣು ತಪ್ಪಿಸುತ್ತವೆ. ಕಾಕ್ ಪಿಟ್ ಎದುರಿನ ಗ್ಲಾಸಿಗೆ ಬಿದ್ದು ಬೆಳಕು ರಿಫ್ಲೆಕ್ಟ್ ಆಗುತ್ತಿದ್ದು, ವಿಮಾನ ಟೇಕಾಫ್ ಅಥವಾ ಲ್ಯಾಂಡ್ ಆಗುವ ನಿರ್ಣಾಯಕ ಕ್ಷಣದಲ್ಲಿ ಪೈಲಟನ್ನು ಗಲಿಬಿಲಿಗೊಳಿಸುತ್ತವೆ. ಇದರಿಂದ ಏರ್ಪೋರ್ಟ್ ಭದ್ರತೆ ಮತ್ತು ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ. ಹಸಿರು ಬಣ್ಣದ ಕಿರಣಗಳನ್ನು ಬೀರುವ ಲೇಸರ್ ಲೈಟ್ ಗಳನ್ನು ಹಾಕುತ್ತಿದ್ದು, ಫ್ಲಾಶ್ ಲೈಟ್ ಬಿದ್ದ ಕೂಡಲೇ ಕಣ್ಣು ಮಂಜಾಗುತ್ತದೆ. ಕೆಲವು ಸೆಕೆಂಡಿನಿಂದ ನಿಮಿಷಗಳ ವರೆಗೂ ಈ ಕಿರಣಗಳು ಪೈಲಟ್ ಕಣ್ಣಿಗೆ ಬೀಳುತ್ತವೆ. ಏರ್ಪೋರ್ಟ್ ಸುತ್ತ 25 ಕಿಮೀ ಆವರಣದಲ್ಲಿ ಲೇಸರ್ ಕಿರಣ ಹಾಯಿಸುವುದಕ್ಕೆ ನಿಷೇಧ ವಲಯ ಎಂದಿದ್ದರೂ, ಪದೇ ಪದೇ ಈ ರೀತಿಯ ಘಟನೆಗಳು ಆಗುತ್ತಿರುವುದು ಗಂಭೀರ ಅಪರಾಧವಾಗಿದೆ ಎಂದು ಅನೂಪ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪರಿಸರದಲ್ಲಿ ಅಂತಹ ಕಾರ್ಯಕ್ರಮಗಳೇನಾದರೂ ಆಯೋಜನೆ ಆಗಿದ್ದಲ್ಲಿ ತಿಂಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಬೇಕು ಎಂದಿದೆ. ಆದರೆ, ಇದು ಹಲವು ತಿಂಗಳಿನಿಂದ ಈ ರೀತಿಯ ಘಟನೆಗಳು ಆಗುತ್ತಿರುವುದರಿಂದ ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕ ಕೃತ್ಯ ಎಸಗುತ್ತಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಏರ್ಪೋರ್ಟ್ ಅಧಿಕಾರಿಗಳ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Pilots landing at Mysuru airport have complained of laser beamed at the cockpit causing disturbance and jeopardizing flight safety. The authorities at the airport have lodged a police complaint regarding this and though the incidents are being investigated, nobody has been identified or held so far.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm