ಬ್ರೇಕಿಂಗ್ ನ್ಯೂಸ್
05-01-23 03:48 pm HK News Desk ಕರ್ನಾಟಕ
ಹಾಸನ, ಜ.5: ಬೆಂಗಳೂರಿನಿಂದ ಕೊಲ್ಲೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಚಾಲಕ ಪಾನಮತ್ತನಾಗಿ ಅಡ್ಡಾದಿಡ್ಡಿ ಬಸ್ ಚಲಾಯಿಸಿದ್ದನ್ನು ನೋಡಿ ಪ್ರಯಾಣಿಕರೇ ಬಸ್ ನಿಲ್ಲಿಸಿ ತರಾಟೆಗೆತ್ತಿಕೊಂಡ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಬಳಿ ನಡೆದಿದೆ.
ಆನಂದ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್ಸನ್ನು ಚಾಲಕ ಅಡ್ಡಾದಿಡ್ಡಿ ಚಲಾಯಿಸಿದ್ದು ಚನ್ನರಾಯಪಟ್ಟಣ ಹೊರ ವಲಯಕ್ಕೆ ತಲುಪಿದಾಗ ಪ್ರಯಾಣಿಕರೇ ಬಸ್ ನಿಲ್ಲಿಸಿದ್ದಾರೆ. ರಸ್ತೆ ತುಂಬೆಲ್ಲಾ ಅಡ್ಡಾದಿಡ್ಡಿ ಬಸ್ ಚಲಾಯಿಸುತ್ತಿದ್ದ ಚಾಲಕನನ್ನು ಕೆಳಕ್ಕಿಳಿಸಿ ಜೋರು ಮಾಡಿದ್ದಾರೆ. ಬಸ್ ಸರಿ ಇಲ್ಲ, ಹಾಗಾಗಿ ಅಡ್ಡಾದಿಡ್ಡಿ ಹೋಗ್ತಾ ಇದೆಯೆಂದು ಚಾಲಕ ಹೇಳಿದ್ದಕ್ಕೆ, ಬಸ್ಸನ್ನು ಗ್ಯಾರೇಜ್ ಕರ್ಕೊಂಡು ಹೋಗುವ ಬದಲು ಯಾಕೆ ತಗೊಂಡು ಬಂದಿದ್ದು ಎಂದು ಜೋರು ಮಾಡಿದ್ದಾರೆ.
ಚಾಲಕನ ವರ್ತನೆ ಗಮನಿಸಿ, ಪೊಲೀಸ್ ಕಂಟ್ರೋಲ್ 112 ನಂಬರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಪ್ರಯಾಣಿಕರ ದೂರಿನಂತೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಚನ್ನರಾಯಪಟ್ಟಣ ಟ್ರಾಫಿಕ್ ಪೊಲೀಸರು, ಚಾಲಕ ಕುಡಿದಿದ್ದನ್ನು ಖಚಿತಪಡಿಸಿ ಬಸ್ ಸೀಜ್ ಮಾಡಿದ್ದಾರೆ. ಚಾಲಕ ಮಲ್ಲೇಶ್ ಎಂಬಾತನಿಗೆ ದಂಡ ವಿಧಿಸಿದ್ದು ಬಸ್ಸನ್ನು ಚನ್ನರಾಯಪಟ್ಟಣ ಟ್ರಾಫಿಕ್ ಠಾಣೆ ಮುಂದೆ ಇರಿಸಿದ್ದಾರೆ.
ವಿಷಯ ತಿಳಿದು ಪ್ರಯಾಣಿಕರ ಸಂಚಾರಕ್ಕೆ ಮಧ್ಯರಾತ್ರಿಯೇ ಬೇರೆ ಬಸ್ಸನ್ನು ಆನಂದ್ ಟ್ರಾವಲ್ಸ್ ಸಂಸ್ಥೆಯಿಂದ ವ್ಯವಸ್ಥೆ ಮಾಡಲಾಗಿದೆ.
#Mangalore #AnandTravels #Bus Driver found Drunk major accident averted at #Hassan, bus seized pic.twitter.com/u92gOHJwVo
— Headline Karnataka (@hknewsonline) January 5, 2023
Mangalore Anand Travels Bus Driver found Drunk major accident averted at Hassan, bus seized and driver has been arrested after a passenger saw the bus going right and left. A case has been registered by the Hassan Police.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm