ಬ್ರೇಕಿಂಗ್ ನ್ಯೂಸ್
10-11-22 07:37 pm HK News Desk ಕರ್ನಾಟಕ
ಹಾಸನ, ನ.10: ಪೊಲೀಸ್ ಇಲಾಖೆ ಒಳಗೆ ಲಂಚ ಸರ್ವೆ ಸಾಮಾನ್ಯ. ಹಾಸನದೊಳಗೆ ಇಲ್ವಾ, ಯಾವ ಇನ್ಸ್ಪೆಕ್ಟರ್ ಎಕ್ಸಿಕ್ಯುಟಿವ್ಗೆ ಪುಕ್ಕಟೆಯಾಗಿ ಬಂದಿದ್ದಾನೆ, ಡಿಜಿಪಿ ಸಾಹೇಬ್ರು ಆದೇಶದ ಮೇಲೆ ಬಂದಿದ್ದಾನೆಯೇ ಕೇಳಿ ನೋಡಿ.. ಜಿಲ್ಲಾ ಎಸ್ಪಿ ಹೊರತುಪಡಿಸಿದ್ರೆ ಬೇರೆ ಇನ್ಸ್ಪೆಕ್ಟರ್ ಯಾರು ಇಲ್ಲಿಗೆ ಪುಕ್ಸಟ್ಟೆ ಬರ್ತಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾರ್ಮಿಕ ಪ್ರಶ್ನೆ ಇಟ್ಟಿದ್ದಾರೆ.
ಇನ್ಸ್ ಪೆಕ್ಟರ್ ನಂದೀಶ್ ಸಾವಿನ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ದುಡ್ಡು ಕೊಟ್ಟು ಕೆಲಸಕ್ಕೆ ಬಂದ ನಂತರ ಒಂದು ವರ್ಷ ಮೀಟರ್ ಓಡಲು ಶುರುವಾಗುತ್ತೆ. ಜನಸಾಮಾನ್ಯರ ಹತ್ತಿರ ದುಡ್ಡು ಕಿತ್ಕೋಬೇಕು, ಎಫ್ಐಆರ್ ಮಾಡಲು, ಹೆಣ ತೆಗೆಯಲು ದುಡ್ಡು ಕಿತ್ಕೊಬೇಕು, ಪ್ರತಿಯೊಂದಕ್ಕು ದುಡ್ಡು ಕಿತ್ಕೊಬೇಕು. ಅಧಿಕಾರಿಗಳನ್ನು ಬ್ಲೇಮ್ ಮಾಡಲು ಆಗಲ್ಲ. ಅತ್ಯಂತ ದುರ್ಬಲವಾದ ರಾಜ್ಯ ಸರ್ಕಾರ ಇದ್ದಾಗ ಮಾತ್ರ ಇದೆಲ್ಲಾ ಆಗುತ್ತೆ.
)

ಇದೇ ಮೋದಿ, ಯೋಗಿ ಆದಿತ್ಯನಾಥ್, ಅರವಿಂದ ಕೇಜ್ರಿವಾಲ್ ಗಟ್ಟಿ ಮುಖ್ಯಮಂತ್ರಿ ಇದ್ದರು. ಗಟ್ಟಿ ಮುಖ್ಯಮಂತ್ರಿ ಇದ್ದರೆ ಯಾರೂ ಏನು ಕೆಳಗಡೆ ಬಾಲ ಅಲ್ಲಾಡಿಸಲು ಆಗಲ್ಲ. ಮುಖ್ಯಮಂತ್ರಿ ಗಟ್ಟಿ ಇಲ್ಲ ಅಂದರೆ ಯಾರು ಏನು ಬೇಕಾದರೂ ಅಲ್ಲಾಡಿಸಬಹುದು. ಮುಖ್ಯಮಂತ್ರಿಯನ್ನು ಮಂತ್ರಿಗಳು, ಶಾಸಕರು ಅಲ್ಲಾಡಿಸಬಹುದು. ಇವತ್ತು ಜಿ.ಪಂ. ಸದಸ್ಯನು ಕೂಡ ಮುಖ್ಯಮಂತ್ರಿಯನ್ನು ಅಲ್ಲಾಡಿಸುತ್ತಾನೆ.

ಮೋದಿಯವರು ಮಜಬೂತ್ ಮುಖ್ಯಮಂತ್ರಿ ಅಂತ ಹೇಳ್ತಿದ್ದರಲ್ಲಾ, ಈಗ ಯಾವ ಮಜಬೂತ್ ಮುಖ್ಯಮಂತ್ರಿ ಇದ್ದಾರೆ ಇಲ್ಲಿ. ನಂದೀಶ್ ಬಹಳ ಒಳ್ಳೆಯವರು, ನನಗೂ ಬಹಳ ಪರಿಚಿತರು. ದುಡ್ಡು ಕೊಡೋದು ಆಶ್ಚರ್ಯ ಅಂತ ಹೇಳ್ತಿಲ್ಲ. ದುಡ್ಡು ಕೊಟ್ಟ ನಂತರ ಏಕಾಏಕಿ ಡಿಮಾಂಡ್ಗಳು ಜಾಸ್ತಿಯಾಗುತ್ತವೆ. ಮಾಡಿಲ್ಲ ಅಂದರೆ ಅವರನ್ನು ಸಸ್ಪೆಂಡ್ ಮಾಡ್ತಾರೆ. ಎಲ್ಲೆಲ್ಲೂ ಸಾಲ ಮಾಡ್ಕಂಡು, ಜಮೀನು ಮಾರ್ಕಂಡು ಬಂದಿರುತ್ತಾರೆ.
ಎಲ್ಲರೂ ದುಷ್ಟರಲ್ಲ, ಇಲಾಖೆಯಲ್ಲಿ 95% ಮಂದಿ ಒಳ್ಳೆಯವರಿರುತ್ತಾರೆ. ಅಧಿಕಾರದಲ್ಲಿ ಹಣ ಮಾಡೋಣ. ಯೂನಿಫಾರಂ ಹಾಕೊಂಡಿದೀನಿ, ಸ್ಟೇಷನ್ ಇಂಚಾರ್ಜ್ ಇರೋಣ ಅನ್ಕೊಂಡಿರುತ್ತಾರೆ. ಇದೊಂತರ ರಿಸ್ಕಿ ಗೇಮ್, ನಂದೀಶ್ ರಿಸ್ಕಿ ಗೇಮ್ಗೆ ಬಲಿಯಾದ್ರು. ಒಳ್ಳೆಯ ಹುಡುಗ, ನಾನು ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಆಗಿದ್ದಾಗ ಪರಪ್ಪನ ಅಗ್ರಹಾರದಲ್ಲಿ ಇನ್ಸ್ಪೆಕ್ಟರ್ ಆಗಿ ಒಳ್ಳೆಯ ಕೆಲಸ ಮಾಡಿದ್ದರು.
ಕೇವಲ ಚುನಾವಣೆ ವೇಳೆಯಲ್ಲಿ ಮಾತ್ರ ಎಕ್ಸಿಕ್ಯುಟಿವ್ ಅಧಿಕಾರಿಗಳಿಗೆ ಇಲೆಕ್ಷನ್ ಕಮಿಷನ್ ವರ್ಗಾವಣೆ ಮಾಡಿ ಅಂತ ಹೇಳುತ್ತೆ. ಬೇರೆ ಸಮಯದಲ್ಲಿ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಇಲ್ಲದೆ ಯಾವ ಇನ್ಸ್ಪೆಕ್ಟರ್ ವರ್ಗಾವಣೆ ಆಗಲ್ಲ. ಪಾಪ, ಡಿಜಿಪಿಗೆ ಸುಮ್ನೆ ನಡವಳಿಕೆ ಸೈನ್ ಮಾಡಿ ಫೈಲ್ ಕೊಟ್ಟು ಕಳಿಸೋದು ಅಷ್ಟೇ ಅವರ ಕೆಲಸ ಎಂದು ಪೊಲೀಸ್ ಇಲಾಖೆಯೊಳಗಿನ ಹುಳುಕನ್ನು ಎತ್ತಿ ಹೀಯಾಳಿಸಿದರು.
Fomrer IPS officer, AAP Bhaskar Rao says corruption is common in police department, candidates bribe officers to get Inspector post and then loot form general public.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm