ಬ್ರೇಕಿಂಗ್ ನ್ಯೂಸ್
21-10-22 04:45 pm HK News Desk ಕರ್ನಾಟಕ
ಮೈಸೂರು, ಅ.21: ಮೈಸೂರಿನಲ್ಲಿ ಶತಮಾನೋತ್ಸವ ಆಚರಿಸಿರುವ ಐತಿಹಾಸಿಕ ಮಹತ್ವದ ಮಹಾರಾಣಿ ವಿಜ್ಞಾನ ಕಾಲೇಜಿನ ಹಳೆಯ ಕಟ್ಟಡ ನೋಡ ನೋಡುತ್ತಲೇ ಧರಾಶಾಯಿ ಆಗಿದೆ. ಭಾರಿ ಮಳೆಯ ಕಾರಣ ಇಂದು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಕಾಲೇಜು ಛಾವಣಿ ಕುಸಿದಿದ್ದು ಸ್ಥಳದಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ದುರಂತ ತಪ್ಪಿದೆ.
ಪಾರಂಪರಿಕ ಕಟ್ಟಡದಲ್ಲಿ ವಿಜ್ಞಾನ ವಿಭಾಗದ ಲ್ಯಾಬ್ ಇತ್ತು. ನೂರಾರು ವರ್ಷಗಳ ಹಳೆಯ ಕಾಲದ ಕಟ್ಟಡವಾಗಿದ್ದರಿಂದ ಶಿಥಿಲಗೊಂಡು ಮಳೆಗೆ ಕುಸಿಯುವ ಭೀತಿ ಎದುರಾಗಿತ್ತು. ಹೀಗಾಗಿ ಪ್ರಾಂಶುಪಾಲರು ಬೆಳಗ್ಗೆ ಕಟ್ಟಡದ ವಿದ್ಯುತ್ ಕಡಿತ ಮಾಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲ ರವಿ, ಬೆಳಗ್ಗೆ 10.30ಕ್ಕೆ ಕಟ್ಟಡ ಕುಸಿತಗೊಂಡಿದೆ. ಸ್ವಲ್ಪ ಹೊತ್ತು ಮುನ್ನ 10.15ಕ್ಕೆ ಕಟ್ಟಡದ ವೀಕ್ಷಣೆ ಮಾಡಿದ್ದೆ. ಮಳೆ ನೀರು ಸೋರುತ್ತಿದ್ದ ಕಾರಣಕ್ಕೆ ಲ್ಯಾಬ್ ಎಲೆಕ್ಟ್ರಿಕ್ ಕನೆಕ್ಷನ್ ಕಟ್ ಮಾಡಿಸಲಾಗಿತ್ತು. ಲ್ಯಾಬ್ಗೆ ಯಾರೂ ಬಾರದಂತೆ ಹೇಳಿ ಬೀಗ ಹಾಕಿಸಲಾಗಿತ್ತು. ಅದಾದ 5 ನಿಮಿಷದಲ್ಲೇ ಕಟ್ಟಡ ಕುಸಿದು ಬಿದ್ದಿದೆ ಎಂದಿದ್ದಾರೆ.
ಮೂರು ಕೊಠಡಿ ಒಳಗೊಂಡಂತೆ ಸಂಪೂರ್ಣ ನೆಲಸಮ ಆಗಿದೆ. ಪಾರಂಪರಿಕ ಕಟ್ಟಡದ ಜೀರ್ಣೋದ್ಧಾರ ನಡೆಯಬೇಕಿತ್ತು. 2 ಕೋಟಿ ರೂ. ಹಣ ಕೂಡ ಬಿಡುಗಡೆ ಆಗಿತ್ತು. ಪಾರಂಪರಿಕ ಕಟ್ಟಡ ಆಗಿರುವ ಕಾರಣಕ್ಕೆ ಈಗ ಕಟ್ಟಡ ಮರು ನಿರ್ಮಾಣ ಮಾಡಲು ಜಿಲ್ಲಾಧಿಕಾರಿ ತೀರ್ಮಾನ ಮಾಡಬೇಕಿದೆ. ಸದ್ಯಕ್ಕೆ ಎರಡು ದಿನಗಳು ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಪೋಷಕರು ಆತಂಕ ಪಡಬೇಕಿಲ್ಲ. ಹೊಸ ಕಟ್ಟಡದಲ್ಲಿ ತರಗತಿ ಆರಂಭ ಮಾಡುತ್ತೇವೆ ಎಂದು ಪ್ರಾಂಶುಪಾಲ ರವಿ ಹೇಳಿದ್ದಾರೆ.
A portion of the century-old Maharani’s Science College on Jhansi Lakshmi Bai Road in Mysuru collapsed on October 21 morning following incessant rains over the last few days. Three laboratories – one each of chemistry, biotechnology and botany departments – were reduced to rubble. Though there was no loss of life or injury, the incident has shaken students and staff in the campus.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am