ಬ್ರೇಕಿಂಗ್ ನ್ಯೂಸ್
08-09-22 10:22 pm HK News Desk ಕರ್ನಾಟಕ
ಮಂಡ್ಯ, ಸೆ.8: ಇತ್ತೀಚೆಗೆ ತನ್ನನ್ನು ಹನಿಟ್ರಾಪ್ ಮಾಡಲಾಗಿದೆ ಎಂದು ದೂರು ನೀಡಿ ಸುದ್ದಿಯಾಗಿದ್ದ ಮಂಗಳೂರು ಮೂಲದ ಜುವೆಲ್ಲರಿ ಉದ್ಯಮಿ ಜಗನ್ನಾಥ ಶೆಟ್ಟಿ ಅವರದ್ದು ಎನ್ನಲಾದ ವಿಡಿಯೋ ಲೀಕ್ ಆಗಿದೆ. ಲಾಡ್ಜ್ ನಲ್ಲಿ ಯುವತಿಯ ಜೊತೆಗಿರುವ ವಿಡಿಯೋ ಲೀಕ್ ಆಗಿದ್ದು, ಭಾರೀ ವೈರಲ್ ಆಗಿದೆ.
ಯುವತಿ ಜೊತೆಗಿದ್ದಾಗಲೇ ಇಬ್ಬರು ಯುವಕರು ಲಾಡ್ಜ್ ಎಂಟ್ರಿಯಾಗಿದ್ದು, ಯುವತಿ ಮತ್ತು ಜಗನ್ನಾಥ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿಯನ್ನು ಪ್ರಶ್ನೆ ಮಾಡಿದ್ದು, ನೀನು ಮನೆಯಲ್ಲಿ ಏನು ಹೇಳಿ ಬಂದೀಯಮ್ಮಾ ಎಂದು ಕೇಳಿದ್ದಾರೆ. ಇವರು ಕಾಲೇಜಿನಲ್ಲಿ ಲೆಕ್ಚರ್, ಅವರಿಗೆ ಹೊಡೀಬೇಡಿ. ಇವರೇ ನನ್ನನ್ನು ಕರೆದಿದ್ದು ಎಂದು ಹೇಳುವುದು ವಿಡಿಯೋದಲ್ಲಿದೆ.



ಜಗನ್ನಾಥ ಶೆಟ್ಟಿ ಮತ್ತು ಯುವತಿ ಮಾತನಾಡುವ ಫೋನ್ ಸಂಭಾಷಣೆಯ ಆಡಿಯೋ ಕೂಡ ಇದೇ ವೇಳೆ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯ ಜೊತೆಗೆ ಸಲುಗೆಯಿಂದ ಮಾತನಾಡಿ, ಲಾಡ್ಜ್ ಗೆ ಕರೆಯುವುದು ಆಡಿಯೋದಲ್ಲಿದೆ. ಈ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿರುವ ಬಗ್ಗೆ ಮಾಹಿತಿಯಿಲ್ಲ. ಆದರೆ, ಇತ್ತೀಚೆಗೆ ತನ್ನನ್ನು ಹನಿ ಟ್ರಾಪ್ ಮಾಡಿದ್ದಾರೆಂದು ನೀಡಿದ್ದ ದೂರಿನಂತೆ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದರು. ಆ ಪ್ರಕರಣದಲ್ಲಿ ಬೇರೊಬ್ಬ ಮಹಿಳೆ ಸೇರಿ ಇನ್ನಿಬ್ಬರು ಯುವಕರನ್ನು ಬಂಧಿಸಿದ್ದರು. ಆ ಮಹಿಳೆ ಸಮಾಜ ಸೇವೆ ಹೆಸರಲ್ಲಿ ಗುರುತಿಸಿಕೊಂಡವರಾಗಿದ್ದರು.


ತಾನು ಮಂಡ್ಯದಲ್ಲಿ ಬಸ್ಸಿಗೆ ನಿಂತಿದ್ದಾಗ ಕಾರಿನಲ್ಲಿ ಬಂದಿದ್ದ ನಾಲ್ವರು ಚಿನ್ನದ ಬಿಸ್ಕೆಟ್ ತಪಾಸಣೆ ಮಾಡಬೇಕೆಂದು ಲಾಡ್ಜ್ ಒಯ್ದಿದ್ದರು ಎಂದು ಜಗನ್ನಾಥ ಶೆಟ್ಟಿ ದೂರಿನಲ್ಲಿ ತಿಳಿಸಿದ್ದರು. ಇದೀಗ ಬೇರೆಯದ್ದೇ ವಿಡಿಯೋ ವೈರಲ್ ಆಗಿದ್ದು, ಹಳೆಯದಕ್ಕೂ ಇದಕ್ಕೂ ಸಂಬಂಧ ಇದೆಯೇ, ಯಾರಾದ್ರೂ ಉದ್ದೇಶಪೂರ್ವಕ ಈ ವಿಡಿಯೋ ಲೀಕ್ ಮಾಡಿದ್ದಾರೆಯೇ ಎನ್ನೋದು ಗೊತ್ತಾಗಿಲ್ಲ. ಜಗನ್ನಾಥ ಶೆಟ್ಟಿ ಮಂಡ್ಯದಲ್ಲಿ ಉದ್ಯಮಿಯಾಗಿದ್ದು, ಜೊತೆಗೆ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದಾರೆ.
Big twist in Mandya Honey trap case, Mangalore based Jagannath shetty new video released. The video shows that Jagannath was inside a private lodge with compromising position with a girl where he was caught red handed later he was blackmailed about the video.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm