ಬ್ರೇಕಿಂಗ್ ನ್ಯೂಸ್
15-09-21 06:02 pm Source ; One India Kannada ಉದ್ಯೋಗ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 14 : ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಖಾಲಿಯಿರುವ ಮೇಲ್ವಿಚಾರಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗೌರವ ಸಂಭಾವನೆ ಆಧಾರಿತವಾಗಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್.ಎಸ್.ಎಲ್.ಸಿ ಪೂರೈಸಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಸಾಮಾನ್ಯ ಅರ್ಹತೆ ಮಾಜಿ ಸೈನಿಕ ಅಭ್ಯರ್ಥಿ, ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ 3ಬಿ ಗ್ರಾಮೀಣ ಅಭ್ಯರ್ಥಿ, ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಸಾಮಾನ್ಯ ಅರ್ಹತೆ ಮಹಿಳಾ ಅಭ್ಯರ್ಥಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಪ್ರವರ್ಗ-1ರ ಮಹಿಳಾ ಅಭ್ಯರ್ಥಿ ಹಾಗೂ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಸಾಮಾನ್ಯ ಅರ್ಹತೆಯ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಗಳಿಗಾಗಿ, ನಿಬಂಧನೆ, ಷರತ್ತುಗಳ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ಸಂಪರ್ಕಿಸುವುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು 2021ರ ಅಕ್ಟೋಬರ್ 12 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಗ್ರಾಮಾಂತರ ಜಿಲ್ಲಾ ಕೇಂದ್ರ ಗ್ರಂಥಾಲಯ, 714, ನೆಲ ಮಹಡಿ, 5ನೇ ಮುಖ್ಯ ರಸ್ತೆ, 10ನೇ ಕ್ರಾಸ್, ಎಂ.ಸಿ ಲೇಔಟ್, ವಿಜಯನಗರ, ಬೆಂಗಳೂರು-560040, ದೂರವಾಣಿ ಸಂಖ್ಯೆ: 080-23352460 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಾರ್ವಜನಿಕ ಗ್ರಂಥಾಲಯ:
ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965 ರ ಅನ್ವಯ ರಾಜ್ಯದ ಸಮಗ್ರವಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಕಾರ್ಯ ರೂಪಕ್ಕೆ ತರಲಾಗಿದೆ. ರಾಜ್ಯ ಮಟ್ಟದಲ್ಲಿ ರಾಜ್ಯ ಕೇಂದ್ರ ಗ್ರಂಥಾಲಯ, ಒಂದು ಲಕ್ಷ ಜನ ಸಂಖ್ಯೆಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ ಪ್ರತಿಯೊಂದು ನಗರದಲ್ಲಿ ನಗರ ಕೇಂದ್ರ ಗ್ರಂಥಾಲಯ ಹಾಗೂ ಶಾಖಾ ಗ್ರಂಥಾಲಯಗಳು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ, ತಾಲ್ಲೂಕು ಕೇಂದ್ರ, ಪುರಸಭೆ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮೀಣ ಗ್ರಂಥಾಲಯಗಳು ಹಾಗೂ ಅಲೆಮಾರಿ ಮತ್ತು ಕೊಳಚೆ ಪ್ರದೇಶ ಸ್ಥಳಗಳಲ್ಲಿ ಅಲೆಮಾರಿ ಹಾಗೂ ಕೊಳಚೆ ಪ್ರದೇಶ ಗ್ರಂಥಾಲಯಗಳು ಹಾಗೂ ಮಕ್ಕಳಿಗಾಗಿ ಸಮುದಾಯ ಮಕ್ಕಳ ಗ್ರಂಥಾಲಯಗಳು ಕಾರ್ಯ ನಿರತವಾಗಿವೆ.
ರಾಜ್ಯ ಕೇಂದ್ರ ಗ್ರಂಥಾಲಯ: ರಾಜ್ಯ ಕೇಂದ್ರ ಗ್ರಂಥಾಲಯವು ಎಲ್ಲಾ ಭಾಷೆ ಹಾಗೂ ವಿಷಯಗಳ ಆಕರ ಗ್ರಂಥಗಳನ್ನು ಹಾಗೂ ಆಧುನಿಕ ಸಲಕರಣೆಗಳನ್ನು ಹೊಂದಿ ಒಂದು ಉತ್ತಮ "ಪರಾಮರ್ಶನ" ಗ್ರಂಥಾಲಯವಾಗಿದೆ. ಗ್ರಂಥಸ್ವಾಮ್ಯ, ಕಂಪ್ಯೂಟರ್, ಅಂತರ್ಜಾಲ ವಿಭಾಗ, ಅಂಧರಿಗಾಗಿ ಬ್ರೈಲ್ ಲಿಪಿಯ ಪುಸ್ತಕಗಳು, ಉದ್ಯೋಗ ಮಾಹಿತಿ ಹಾಗೂ ನಿಯತಕಾಲಿಕೆಗಳ ವಿಭಾಗಗಳು ಈ ಗ್ರಂಥಾಲಯದ ಪ್ರಮುಖ ವಿಭಾಗಗಳಾಗಿವೆ.
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು:
ಗ್ರಾಮೀಣ ಜನತೆ ಸಮಯವನ್ನು ಸಾರ್ಥಕವಾಗಿ ಸದುಪಯೋಗ ಪಡಿಸಿಕೊಳ್ಳಲು ಪುಸ್ತಕಗಳ ಮೂಲಕ ಜ್ಞಾರ್ನಾಜನೆ ಮಾಡಿಕೊಳ್ಳಲು, ನಿರಂತರ ಕಲಿಕೆಯನ್ನು ಹೊಂದಲು ಗ್ರಾಮ ಪಂಚಾಯತಿ ಗ್ರಂಥಾಲಯಗಳು ನೆರವಾಗುತ್ತಿವೆ. ರಾಜ್ಯದಲ್ಲಿ ಒಟ್ಟು 5766 ಗ್ರಾಮ ಪಂಚಾಯತಿ ಗ್ರಂಥಾಲಯಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯ ನಿರತವಾಗಿರುತ್ತದೆ. ಸರ್ಕಾರದ ಆದೇಶ ಸಂ. ಇಡಿ 64 ಎಲ್ಐಬಿ 2015, ಬೆಂಗಳೂರು ದಿಃ 26-2-2019 ರನುಸಾರ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗಿರುತ್ತದೆ. ಮುಂದುವರೆದು, ದಿನಾಂಕ 17-8-2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ನಡವಳಿಯನುಸಾರ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಹಸ್ತಾಂತರ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.
Applications invited for the library supervisor post in Bengaluru Rural District. Candidates can apply till October 12, 2021.
18-05-24 10:25 am
HK News Desk
Devaraje Gowda, Dk Shivakumar, Kumaraswamy: ಪ...
17-05-24 10:47 pm
Ramnagara Drowning, Three killed: ರಾಮನಗರ ; ಹೊ...
17-05-24 04:55 pm
Hubballi Anjali Murder, Vishwa Arrest: ಹುಬ್ಬಳ...
17-05-24 12:30 pm
South Teachers Constituency, Srikantegowda:...
16-05-24 10:37 pm
18-05-24 11:54 am
HK News Desk
ಮೋದಿ ನೇತೃತ್ವದಲ್ಲಿ ಭಾರತ ಹೊಸ ಎತ್ತರಕ್ಕೆ ಹೋಗಿದೆ,...
17-05-24 09:56 pm
PM Modi, Ayodhya Ram Temple, Yogi Adityanath:...
17-05-24 05:59 pm
Cannes 2024, Aishwarya Rai Bachchan: ಕೇನ್ಸ್ ಚ...
17-05-24 02:44 pm
Girl dies inside cae, marrige Rajasthan: ಮದುವ...
16-05-24 04:30 pm
18-05-24 11:48 am
Mangalore Correspondent
Mangalore News, Traffic police video: ಪೊಲೀಸ್...
17-05-24 09:17 pm
MLA Ashok Rai Puttur: ಶಾಸಕನಾಗಿ ಒಂದು ವರ್ಷ ; ಜನ...
17-05-24 04:32 pm
Mangalore Airport, Missing: ಕದ್ರಿಯಿಂದ ಆಟೋದಲ್ಲ...
16-05-24 09:59 pm
Mangalore NIA, Terror, Ammar Abdul Rahiman, I...
16-05-24 05:38 pm
17-05-24 09:52 pm
HK News Desk
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm
Bangalore crime, Fraud, Parameshwara ministe...
17-05-24 02:09 pm