ಬ್ರೇಕಿಂಗ್ ನ್ಯೂಸ್
22-03-22 07:53 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಟೆಕ್ ದೈತ್ಯ ಕಂಪೆನಿ ಸ್ಯಾಮ್ಸಂಗ್ ಕಂಪೆನಿಯು ಕೊನೆಯಿರದ ಮನರಂಜನೆಗಾಗಿ ಬಿಡುಗಡೆಮಾಡಿರುವ ನೂತನ ಪೋರ್ಟಬಲ್ ಪ್ರೊಜೆಕ್ಟರ್ 'ದಿ ಫ್ರೀಸ್ಟೈಲ್' ಸಾಧನದ ಪೂರ್ವ ಕಾಯ್ದಿರಿಸುವಿಕೆಯು ಇದೀಗ ಆರಂಭವಾಗಿದೆ. ಈ ವರ್ಷ ಜನವರಿಯಲ್ಲಿ ಸಿಇಎಸ್ 2022ರಲ್ಲಿ ಬಿಡುಗಡೆ ಕಂಡಿರುವ ಫ್ರೀಸ್ಟೈಲ್ ಪ್ರೊಜೆಕ್ಟರ್ ಭಾರತಕ್ಕೆ ಸದ್ಯದಲ್ಲೇ ಬರಲಿದೆ. ಗ್ರಾಹಕರು ಇದೇ ಮಾರ್ಚ್ 18 ರಿಂದ 28, 2022ರವರೆಗೆ ಸ್ಯಾಮ್ಸಂಗ್ ಕಂಪೆನಿಯ ಅಧಿಕೃತ ಆನ್ಲೈನ್ ಮಳಿಗೆಯಲ್ಲಿ ದಿ ಫ್ರೀಸ್ಟೈಲ್ ಪ್ರೊಜೆಕ್ಟರ್ ಸಾಧನವನ್ನು ಕಾಯ್ದಿರಿಸಬಹುದು ಎಂದು ಕಂಪೆನಿ ತಿಳಿಸಿದೆ.
ಸ್ಯಾಮ್ಸಂಗ್ನ ನೂತನ ದಿ ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಸಾಧನವು ತನ್ನ ಆವಿಷ್ಕಾರಕ ವಿಶೇಷತೆಗಳಿಂದ ಗಮನ ಸೆಳೆಯುತ್ತಿದ್ದು, ಈ ಹೊಸ ಸಾಧನವು ಕೇವಲ 0.8 ಕೆಜಿ ತೂಕವಿದೆ. ಅಂದರೆ, ಒಂದೇ ಕೈಯಲ್ಲಿ ಎತ್ತಬಹುದಾದಷ್ಟು ಕಿರಿದಾಗಿರುವ ಈ ಸಾಧನವು 180 ಡಿಗ್ರಿಗಳಷ್ಟು ಪ್ರೊಜೆಕ್ಟ್ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಈ 'ದಿ ಫ್ರೀಸ್ಟೈಲ್' ಸಾಧನವು ಸ್ಯಾಮ್ಸಂಗ್ ಸ್ಮಾರ್ಟ್ ಟಿ.ವಿ.ಗಳಲ್ಲಿ ಲಭ್ಯವಿರುವ ಸ್ಮಾರ್ಟ್ ಫೀಚರ್ಸ್ ಕೂಡಾ ಹೊಂದಿದ್ದು, ಬಿಲ್ಟ್ ಇನ್ ಸರ್ಟಿಫೈಡ್ ಒಟಿಟಿ ಅಪ್ಲಿಕೇಷನ್ಸ್ ಹೊಂದಿದೆ ಎಂದು ಕಂಪೆನಿಯು ತಿಳಿಸಿದೆ.

ಪ್ರೊಜೆಕ್ಟರ್ಸ್ಯಾಮ್ಸಂಗ್ ದಿ ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಸಾಧನದಲ್ಲಿ ಸ್ಮಾರ್ಟ್ ಕನೆಕ್ಟಿವಿಟಿಗೆ ಆಂಡ್ರಾಯಿಡ್ ಮತ್ತು ಐಒಎಸ್ ಮೊಬೈಲ್ ಡಿವೈಸ್ಗಳಿಂದ ಮಿರರಿಂಗ್ ಮತ್ತು ಕ್ಯಾಸ್ಟಿಂಗ್ ಸೌಲಭ್ಯಗಳು ಲಭ್ಯವಿವೆ. ಇದರೊಂದಿಗೆ ದಿ ಫ್ರೀಸ್ಟೈಲ್ ಆಂಬಿಯೆಂಟ್ ಮೋಡ್ನಲ್ಲಿ ಆಯಂಬಿಯೆನ್ಸ್ ನಿಗದಿಪಡಿಸುತ್ತದೆ ಮತ್ತು ಲೆನ್ಸ್ ಕ್ಯಾಪ್ ಬಳಸಿ ಪ್ರಿಸಂ ಎಫೆಕ್ಟ್ ನೀಡುತ್ತದೆ. ಇದರ 360-ಡಿಗ್ರಿ ಧ್ವನಿ ಗ್ರಾಹಕರು ಎಲ್ಲೇ ಇದ್ದರೂ ಸಿನಿಮಾ ಗುಣಮಟ್ಟದ ಧ್ವನಿ ಅನುಭವವನ್ನು ಆನಂದಿಸಲು ಅನುಮತಿಸುತ್ತದೆ ಎಂದು ಸ್ಯಾಮ್ಸಂಗ್ ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಕಾರ್ಯಗಳನ್ನು ಆಧುನಿಕ ಜೀವನಶೈಲಿಗೆ ಪ್ರತಿಕ್ರಿಯಿಸುವಂತೆ ವಿನ್ಯಾಸಗೊಳಿಸಿದ್ದು, ಇದನ್ನು 2022ರ ಅತ್ಯಂತ ಗಮನಾರ್ಹ ಗ್ಯಾಡ್ಜೆಟ್ಗಳಲ್ಲಿ ಒಂದಾಗಿಸಿದೆ.! ಇದೇ ಮಾರ್ಚ್ 18 ರಿಂದ 28, 2022ರವರೆಗೆ ಆಸಕ್ತ ಗ್ರಾಹಕರು 2000 ರೂ.ಗಳನ್ನು ಪಾವತಿಸಿ ಸಾಧನವನ್ನು ಕಾಯ್ದಿರಿಸಬಹುದು ಮತ್ತು ಅಂತಿಮ ಖರೀದಿಯಲ್ಲಿ 4,000 ರೂ.ಗಳ ರಿಯಾಯಿತಿ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ. ಫ್ರೀಸ್ಟೈಲ್ ಪ್ರೊಜೆಕ್ಟರ್ ಅನ್ನು ಪ್ರಿ-ರಿಸರ್ವ್ ಮಾಡಲು ಸ್ಯಾಮ್ಸಂಗ್ ಇಂಡಿಯಾದ ಅಧಿಕೃತ ಆನ್ಲೈನ್ ತಾಣಕ್ಕೆ ಭೇಟಿ ನೀಡಿ.
Samsung Opens Pre-Reserve For The Freestyle Portable Projector.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm