ಬ್ರೇಕಿಂಗ್ ನ್ಯೂಸ್
22-03-22 07:53 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಟೆಕ್ ದೈತ್ಯ ಕಂಪೆನಿ ಸ್ಯಾಮ್ಸಂಗ್ ಕಂಪೆನಿಯು ಕೊನೆಯಿರದ ಮನರಂಜನೆಗಾಗಿ ಬಿಡುಗಡೆಮಾಡಿರುವ ನೂತನ ಪೋರ್ಟಬಲ್ ಪ್ರೊಜೆಕ್ಟರ್ 'ದಿ ಫ್ರೀಸ್ಟೈಲ್' ಸಾಧನದ ಪೂರ್ವ ಕಾಯ್ದಿರಿಸುವಿಕೆಯು ಇದೀಗ ಆರಂಭವಾಗಿದೆ. ಈ ವರ್ಷ ಜನವರಿಯಲ್ಲಿ ಸಿಇಎಸ್ 2022ರಲ್ಲಿ ಬಿಡುಗಡೆ ಕಂಡಿರುವ ಫ್ರೀಸ್ಟೈಲ್ ಪ್ರೊಜೆಕ್ಟರ್ ಭಾರತಕ್ಕೆ ಸದ್ಯದಲ್ಲೇ ಬರಲಿದೆ. ಗ್ರಾಹಕರು ಇದೇ ಮಾರ್ಚ್ 18 ರಿಂದ 28, 2022ರವರೆಗೆ ಸ್ಯಾಮ್ಸಂಗ್ ಕಂಪೆನಿಯ ಅಧಿಕೃತ ಆನ್ಲೈನ್ ಮಳಿಗೆಯಲ್ಲಿ ದಿ ಫ್ರೀಸ್ಟೈಲ್ ಪ್ರೊಜೆಕ್ಟರ್ ಸಾಧನವನ್ನು ಕಾಯ್ದಿರಿಸಬಹುದು ಎಂದು ಕಂಪೆನಿ ತಿಳಿಸಿದೆ.
ಸ್ಯಾಮ್ಸಂಗ್ನ ನೂತನ ದಿ ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಸಾಧನವು ತನ್ನ ಆವಿಷ್ಕಾರಕ ವಿಶೇಷತೆಗಳಿಂದ ಗಮನ ಸೆಳೆಯುತ್ತಿದ್ದು, ಈ ಹೊಸ ಸಾಧನವು ಕೇವಲ 0.8 ಕೆಜಿ ತೂಕವಿದೆ. ಅಂದರೆ, ಒಂದೇ ಕೈಯಲ್ಲಿ ಎತ್ತಬಹುದಾದಷ್ಟು ಕಿರಿದಾಗಿರುವ ಈ ಸಾಧನವು 180 ಡಿಗ್ರಿಗಳಷ್ಟು ಪ್ರೊಜೆಕ್ಟ್ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಈ 'ದಿ ಫ್ರೀಸ್ಟೈಲ್' ಸಾಧನವು ಸ್ಯಾಮ್ಸಂಗ್ ಸ್ಮಾರ್ಟ್ ಟಿ.ವಿ.ಗಳಲ್ಲಿ ಲಭ್ಯವಿರುವ ಸ್ಮಾರ್ಟ್ ಫೀಚರ್ಸ್ ಕೂಡಾ ಹೊಂದಿದ್ದು, ಬಿಲ್ಟ್ ಇನ್ ಸರ್ಟಿಫೈಡ್ ಒಟಿಟಿ ಅಪ್ಲಿಕೇಷನ್ಸ್ ಹೊಂದಿದೆ ಎಂದು ಕಂಪೆನಿಯು ತಿಳಿಸಿದೆ.

ಪ್ರೊಜೆಕ್ಟರ್ಸ್ಯಾಮ್ಸಂಗ್ ದಿ ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಸಾಧನದಲ್ಲಿ ಸ್ಮಾರ್ಟ್ ಕನೆಕ್ಟಿವಿಟಿಗೆ ಆಂಡ್ರಾಯಿಡ್ ಮತ್ತು ಐಒಎಸ್ ಮೊಬೈಲ್ ಡಿವೈಸ್ಗಳಿಂದ ಮಿರರಿಂಗ್ ಮತ್ತು ಕ್ಯಾಸ್ಟಿಂಗ್ ಸೌಲಭ್ಯಗಳು ಲಭ್ಯವಿವೆ. ಇದರೊಂದಿಗೆ ದಿ ಫ್ರೀಸ್ಟೈಲ್ ಆಂಬಿಯೆಂಟ್ ಮೋಡ್ನಲ್ಲಿ ಆಯಂಬಿಯೆನ್ಸ್ ನಿಗದಿಪಡಿಸುತ್ತದೆ ಮತ್ತು ಲೆನ್ಸ್ ಕ್ಯಾಪ್ ಬಳಸಿ ಪ್ರಿಸಂ ಎಫೆಕ್ಟ್ ನೀಡುತ್ತದೆ. ಇದರ 360-ಡಿಗ್ರಿ ಧ್ವನಿ ಗ್ರಾಹಕರು ಎಲ್ಲೇ ಇದ್ದರೂ ಸಿನಿಮಾ ಗುಣಮಟ್ಟದ ಧ್ವನಿ ಅನುಭವವನ್ನು ಆನಂದಿಸಲು ಅನುಮತಿಸುತ್ತದೆ ಎಂದು ಸ್ಯಾಮ್ಸಂಗ್ ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಕಾರ್ಯಗಳನ್ನು ಆಧುನಿಕ ಜೀವನಶೈಲಿಗೆ ಪ್ರತಿಕ್ರಿಯಿಸುವಂತೆ ವಿನ್ಯಾಸಗೊಳಿಸಿದ್ದು, ಇದನ್ನು 2022ರ ಅತ್ಯಂತ ಗಮನಾರ್ಹ ಗ್ಯಾಡ್ಜೆಟ್ಗಳಲ್ಲಿ ಒಂದಾಗಿಸಿದೆ.! ಇದೇ ಮಾರ್ಚ್ 18 ರಿಂದ 28, 2022ರವರೆಗೆ ಆಸಕ್ತ ಗ್ರಾಹಕರು 2000 ರೂ.ಗಳನ್ನು ಪಾವತಿಸಿ ಸಾಧನವನ್ನು ಕಾಯ್ದಿರಿಸಬಹುದು ಮತ್ತು ಅಂತಿಮ ಖರೀದಿಯಲ್ಲಿ 4,000 ರೂ.ಗಳ ರಿಯಾಯಿತಿ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ. ಫ್ರೀಸ್ಟೈಲ್ ಪ್ರೊಜೆಕ್ಟರ್ ಅನ್ನು ಪ್ರಿ-ರಿಸರ್ವ್ ಮಾಡಲು ಸ್ಯಾಮ್ಸಂಗ್ ಇಂಡಿಯಾದ ಅಧಿಕೃತ ಆನ್ಲೈನ್ ತಾಣಕ್ಕೆ ಭೇಟಿ ನೀಡಿ.
Samsung Opens Pre-Reserve For The Freestyle Portable Projector.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm