ಬ್ರೇಕಿಂಗ್ ನ್ಯೂಸ್
02-01-21 11:33 am Source: GIZBOT ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರ ಆಡಳಿತದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಕೆಲವು ವರ್ಷಗಳ ಹಿಂದೆ, ಬಹುತೇಕ ಎಲ್ಲದಕ್ಕೂ ಒಂದು ವೆಬ್ಸೈಟ್ ಇತ್ತು. ಈಗ, ಬಹುತೇಕ ಎಲ್ಲದಕ್ಕೂ ಒಂದು ಅಪ್ಲಿಕೇಶನ್ ಇದೆ. ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಭಾರತ ಸರ್ಕಾರ ಮತ್ತು ಸಂಬಂಧಿತ ಏಜೆನ್ಸಿಗಳು ಹಲವಾರು ಆಪ್ಗಳನ್ನು ಪರಿಚಯಿಸಿವೆ. ಈ ಆಪ್ಗಳು ಭಾರತ ಸರ್ಕಾರ ಪರಿಚಯಿಸಿ ಹಲವು ದಿನಗಳೇ ಕಳೆದರು ಕೊರೊನಾ ಸಮಯದಲ್ಲಿ ಈ ಆಪ್ಗಳು ಸಾಕಷ್ಟು ಉಪಯೋಗವನ್ನು ಮಾಡಿವೆ. ಅಲ್ಲದೆ ಭಾರತ ಸರ್ಕಾರ ಕೊರೊನಾ ಸಮಯದಲ್ಲಿಯೂ ಹಲವು ಆಪ್ಗಳನ್ನ ಬಿಡುಗಡೆ ಮಾಡಿದೆ.
ಹೌದು, ಪ್ರಸಕ್ತ ವರ್ಷ ಲಾಕ್ಡೌನ್ ಅವಧಿಯಲ್ಲಿ, ಸಾಮಾಜಿಕ ಅಂತರ ಮತ್ತು ಮನೆಯಲ್ಲಿಯೇ ಜನತೆ ಉಳಿಯುವಂತೆ ಆದಾಗ ಸರ್ಕಾರ ಪರಿಚಯಿಸಿದ್ದ ಹಲವು ಆಪ್ಗಳು ಜನರ ಬಳಿಗೆ ಆಡಳಿತದ ಸೌಲಭ್ಯಗಳು ಲಭ್ಯವಾಗುವಂತೆ ಮಾಡಿವೆ. ಭಾರತೀಯ ಸರ್ಕಾರವು ಪ್ರಾರಂಭಿಸಿದ ಹೊಸ ಅಪ್ಲಿಕೇಶನ್ಗಳು ಸೇರಿದಂತೆ ಅನೇಕ ಅಪ್ಲಿಕೇಶನ್ಗಳ ಮೂಲಕ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಬದಲು ನೀವು ಅಪ್ಲಿಕೇಶನ್ ಅನ್ನು ಬಳಸಬಹುದು.

ಆರೋಗ್ಯಾ ಸೇತು ಅಪ್ಲಿಕೇಶನ್
COVID-19 ಶುರುವಾದ ತಕ್ಷಣ ಜನರಿಗೆ ಕೊರೊನಾ ಮಾಹಿತಿ ನೀಡುವ ಹಾಗೂ ಅಗತ್ಯ ಮಾಗದರ್ಶನ ನೀಡುವ ಸಲುವಾಗಿ ಭಾರತ ಸರ್ಕಾರ ತನ್ನ ಆರೋಗ್ಯಾ ಸೇತು ಆಪ್ ಅನ್ನು ಪರಿಚಯಿಸಿತ್ತು. ಇದು ಭಾರತೀಯ ನಾಗರಿಕರಿಗೆ ಕೊರೊನಾ ಸಂಬಂದಿತ ಮಾಹಿತಿ, ಕೊರೊನಾ ಸೊಂಕಿತರು ಇರುವ ಸ್ಥಳ, ಕೊರೊನಾ ಪಾಸಿಟವ್ ಲೊಕೇಶನ್ ಟ್ರಾಕಿಂಗ್ ಸೇರಿದಂತೆ ಹಲವು ಉಪಯುಕ್ತ ಸಲಹೆಗಳನ್ನ ನೀಡುತ್ತಿದೆ. ಇದರಿಮದ ಭಾರತದಲ್ಲಿ ಕೊರನಾ ಕುರಿತು ಅಗತ್ಯ ಎಚ್ಚರಿಕೆ ವಹಿಸಲು ಜನರಿಗೆ ಸಾಕಷ್ಟು ಸಹಾಯ ಮಾಡಿದೆ. ಕೊರೊನಾ ಕುರಿತ ಮಾಹಿತಿ ನೀಡಲು ಆರೋಗ್ಯ ಇಲಾಖೆಗೆ ಸಹಾಯ ಮಾಡಲು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಆಯ್ಕರ್ ಸೇತು ಅಪ್ಲಿಕೇಶನ್
ಭಾರತ ಸರ್ಕಾರ ಪರಿಚಯಿಸಿರುವ ಪ್ರಮುಖ ಆಪ್ಗಳಲ್ಲಿ ಆಯ್ಕರ್ ಸೇತು ಆಪ್ ಕುಡ ಒಂದಾಗಿದೆ. ಈ ಆಪ್ ಮೂಲಕ ಆದಾಯ ತೆರಿಗೆ ಇಲಾಖೆಯು ನಿಮ್ಮ ಬಳಿಗೆ ತಂದಿದೆ. ಇದು ಇಲಾಖೆಯು ನೀಡುವ ವಿವಿಧ ಸೇವೆಗಳಿಗೆ ಪ್ರವೇಶ ಬಿಂದು ನೀಡುತ್ತದೆ. ನೀವು ಆನ್ಲೈನ್ನಲ್ಲಿ ತೆರಿಗೆ ಪಾವತಿಸಲು ಬಯಸುತ್ತಿದ್ದರೆ ಅಥವಾ ನಿಮ್ಮ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ಗೆ ಅರ್ಜಿ ಸಲ್ಲಿಸುವ ಮಾರ್ಗವನ್ನು ಹುಡುಕುತ್ತಿದ್ದರೆ ಈ ಅಪ್ಲಿಕೇಶನ್ ಸಹಕಾರಿಯಾಗಿದೆ.

ಡಿಜಿಲಾಕರ್ ಅಪ್ಲಿಕೇಶನ್
ಹೆಸರೇ ಸೂಚಿಸುವಂತೆ, ಈ ಅಪ್ಲಿಕೇಶನ್ ಡಿಜಿಟಲ್ ಲಾಕರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಡಿಜಿಟಲ್ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಲು ನೀವು ಇದನ್ನು ಬಳಸಬಹುದು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEIT) ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಭೌತಿಕ ದಾಖಲೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಡಿಜಿಲಾಕರ್ ಅನ್ನು ನಿರ್ದೇಶಿಸಲಾಗಿದೆ. ಇದು ಕಾಗದರಹಿತ ಆಡಳಿತದ ಕಲ್ಪನೆಯನ್ನು ಪ್ರಚಾರ ಮಾಡುತ್ತದೆ. ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲು ಮತ್ತು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ಬಳಸಬಹುದು.

ಇಪಾತ್ಶಾಲಾ ಅಪ್ಲಿಕೇಶನ್
ಈ ಅಪ್ಲಿಕೇಶನ್ ಪ್ರಯಾಣದಲ್ಲಿರುವಾಗ ಕಲಿಯಲು ಅನುಕೂಲವಾಗುತ್ತದೆ. ಈ ಅಪ್ಲಿಕೇಶನ್ ಮೂಲಕ ನೀವು ಪಠ್ಯಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ಪ್ರವೇಶಿಸಬಹುದು. ಇದು ಮೊಬೈಲ್ ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು ಲ್ಯಾಪ್ಟಾಪ್ಗಳಂತಹ ವಿಭಿನ್ನ ಡಿವೈಸ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪಠ್ಯವನ್ನು ಹೈಲೈಟ್ ಮಾಡಲು ಮತ್ತು ಟಿಪ್ಪಣಿಗಳನ್ನು ಮಾಡಲು ನೀವು ಇಪಾತ್ಶಾಲಾ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ಈ ಶೈಕ್ಷಣಿಕ ಅಪ್ಲಿಕೇಶನ್ ಅನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪರಿಚಯಿಸಿದೆ.

ಜಿಎಸ್ಟಿ ರೇಟ್ ಫೈಂಡರ್ ಅಪ್ಲಿಕೇಶನ್
ಸರಕು ಮತ್ತು ಸೇವಾ ತೆರಿಗೆ (GST) ಸಂಬಂದಿತ ಮಾಹಿತಿಯನ್ನು ನೀಡುವುದಕ್ಕಾಗಿ ಈ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಈ ಅಪ್ಲಿಕೇಶನ್ನ ಇಂಟರ್ಫೇಸ್ ಸರಳವಾಗಿದೆ ಮತ್ತು ಆದ್ದರಿಂದ ಅರ್ಥಮಾಡಿಕೊಳ್ಳುವುದು ಸುಲಭ. ನಿರ್ದಿಷ್ಟ ಸರಕು ಮತ್ತು ಸೇವೆಗಳಿಗೆ ಅನ್ವಯವಾಗುವ ಜಿಎಸ್ಟಿಯನ್ನು ಕಂಡುಹಿಡಿಯಲು ನೀವು ಅಪ್ಲಿಕೇಶನ್ ಅನ್ನು ಬಳಸಬಹುದು. ಈ ಅಪ್ಲಿಕೇಶನ್ ಅನ್ನು ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ ನೀಡುತ್ತದೆ.
This News Article is a Copy of GIZBOT
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm