ಬ್ರೇಕಿಂಗ್ ನ್ಯೂಸ್
20-04-22 06:26 pm Mangalore Correspondent ಕ್ರೈಂ
ಮಂಗಳೂರು, ಎ.20: ಹಿಂದುಗಳ ವಿರುದ್ಧ ಕೋಮು ದ್ವೇಷದ ಪೋಸ್ಟ್ ಹಾಕಿ, ಪ್ರಚೋದನೆ ನೀಡುತ್ತಿದ್ದ ಪ್ರಕರಣದಲ್ಲಿ ಮಂಗಳೂರು ಸೈಬರ್ ಪೊಲೀಸರು ಬೆಳ್ತಂಗಡಿ ಮೂಲದ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಬೆಳ್ತಂಗಡಿಯ ಅಜ್ಮಲ್ ಎಂಬ ಯುವಕ ಬಂಧಿತ. ತಿಂಗಳ ಹಿಂದೆ ಹಿಜಾಬ್ ವಿವಾದ ಉಂಟಾಗಿದ್ದ ವೇಳೆ ಮಂಗಳೂರಿನ ರಥಬೀದಿಯ ದಯಾನಂದ ಪೈ ಸ್ಮಾರಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಜಟಾಪಟಿ ನಡೆದಿತ್ತು. ಈ ಸಂದರ್ಭದಲ್ಲಿ ಎಬಿವಿಪಿ ವಿದ್ಯಾರ್ಥಿಯೊಬ್ಬ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಮಾತನಾಡಿದ್ದಾನೆಂದು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಹಾಕಲಾಗಿತ್ತು. ಈತನನ್ನು ಶಿವಮೊಗ್ಗದ ಹರ್ಷನ ರೀತಿಯಲ್ಲೇ ಕೊಲೆ ಮಾಡುತ್ತೇವೆ, ಚರಂಡಿಯಲ್ಲಿ ಶವ ಬಿಸಾಕುತ್ತೇವೆ ಎಂದು ಪೋಸ್ಟ್ ಮಾಡಿದ್ದು ವೈರಲ್ ಆಗಿತ್ತು.
ಘಟನೆ ಬಗ್ಗೆ ಎಬಿವಿಪಿ ವಿದ್ಯಾರ್ಥಿಗಳು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದರು. ಇದನ್ನು ಯಾರು ಪೋಸ್ಟ್ ಮಾಡಿದ್ದೆಂದು ತನಿಖೆ ನಡೆಸಿದಾಗ, ಮಾರಿಗುಡಿ ಎನ್ನುವ ಹೆಸರಲ್ಲಿ ಇನ್ ಸ್ಟಾ ಗ್ರಾಮ್ ಪೇಜಲ್ಲಿ ಪೋಸ್ಟ್ ಮಾಡಿದ್ದು ಕಂಡುಬಂದಿತ್ತು. ಮಂಗಳೂರು ಸೈಬರ್ ಠಾಣೆಯ ಜಾಲತಾಣದ ಮೇಲೆ ನಿಗಾ ಇಡುವ ಸಿಬಂದಿ ಪರಿಶೀಲನೆ ನಡೆಸಿದಾಗ, ವಿದೇಶಿ ಸಿಮ್ ಬಳಸಿ ಪೋಸ್ಟ್ ಮಾಡಿದ್ದು ಪತ್ತೆಯಾಗಿತ್ತು. ಅಜ್ಮಲ್ ಎಂಬ ಯುವಕನ ಚಿಕ್ಕಪ್ಪ ವಿದೇಶದಲ್ಲಿದ್ದು, ಅವರ ಹೆಸರಲ್ಲಿದ್ದ ವಿದೇಶಿ ಸಿಮ್ ಅನ್ನು ಅಜ್ಮಲ್ ಬಳಸುತ್ತಿದ್ದ. ಅದೇ ಸಿಮ್ ಬಳಸ್ಕೊಂಡು ಫೇಸ್ಬುಕ್, ಇನ್ ಸ್ಟಾ ಗ್ರಾಮ್ ಸೇರಿದಂತೆ ಜಾಲತಾಣಗಳ ನಕಲಿ ಖಾತೆಗಳನ್ನು ಮಾಡಿಕೊಂಡಿದ್ದ ಅಜ್ಮಲ್ ಅದರಲ್ಲಿ ಹಿಂದು ದ್ವೇಷಿ, ಕೋಮು ಪ್ರಚೋದಕ ಪೋಸ್ಟ್ ಗಳನ್ನು ಹಾಕುತ್ತಿದ್ದ.
ಇದಲ್ಲದೆ, ಶಿವಾಜಿ ಸೇರಿದಂತೆ ಹಿಂದುಗಳು ಆರಾಧಿಸುವ ಐತಿಹಾಸಿಕ ಪುರುಷರ ಬಗ್ಗೆಯೂ ಅವಹೇಳನಕಾರಿ ಚಿತ್ರಿಸಿ ಪೋಸ್ಟ್ ಹಾಕಿದ್ದ. ತನಿಖೆಯ ವೇಳೆ ಅಜ್ಮಲ್ ಬೆಳ್ತಂಗಡಿಯಲ್ಲಿದ್ದುಕೊಂಡೇ ವಿದೇಶಿ ಸಿಮ್ ಬಳಸುತ್ತಿರುವುದು ಪತ್ತೆಯಾಗಿದ್ದು, ವಿದೇಶದಲ್ಲಿದ್ದು ಆಪರೇಟ್ ಮಾಡುವ ರೀತಿ ಬಿಂಬಿಸಿ ಪೊಲೀಸರನ್ನು ಯಾಮಾರಿಸಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿ, ಸೈಬರ್ ಠಾಣೆಯಲ್ಲಿ ಕೋಮು ದ್ವೇಷ ಹರಡುವುದರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಈ ಹಿಂದೆ ಕಟೀಲು ದೇವರನ್ನೂ ಇದೇ ರೀತಿ ಅವಹೇಳನಕಾರಿ ಚಿತ್ರಿಸಿ ಪೋಸ್ಟ್ ಹಾಕಲಾಗಿತ್ತು. ಮಂಗಳೂರು ಮುಸ್ಲಿಮ್ಸ್ ಎನ್ನುವ ಪೇಜ್ ನಲ್ಲಿ ಹಿಂದು ದೇವರ ನಿಂದೆ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ವಿದೇಶದಲ್ಲಿ ಕುಳಿತುಕೊಂಡು ಈ ರೀತಿ ಮಾಡುತ್ತಿದ್ದಾರೆ, ಪತ್ತೆ ಮಾಡುವುದು ಕಷ್ಟಕರ ಎಂದು ಹೇಳಿದ್ದರು. ಕೇಸು ದಾಖಲಾಗಿದ್ದರೂ, ಹಿಂದು ದೇವರನ್ನು ನಿಂದಿಸಿ ಪೋಸ್ಟ್ ಮಾಡಿದ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
A youth was arrested for posting objectionable and threatening content disrupting social harmony on social media.The arrested is identified as Mohammed Azmal (20), a resident of Beltangady. The accused reportedly created an Instagram account titled mari_gudi_5. In the month of March, when the Hijab row took place in a college at Car Street.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 07:49 pm
Mangalore Correspondent
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm