ಬ್ರೇಕಿಂಗ್ ನ್ಯೂಸ್
14-03-22 06:56 pm Bengaluru Correspondent ಕ್ರೈಂ
ಬೆಂಗಳೂರು, ಮಾ.14 : ಇಡೀ ರಾಜ್ಯದಲ್ಲೇ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ಅಂದರೆ ಅತಿ ಹೆಚ್ಚು ಕಮಾಯಿ ಆಗುವ ಠಾಣೆ. ಅಲ್ಲಿಗೆ ಎಸ್ಐ, ಇನ್ಸ್ ಪೆಕ್ಟರ್ ಆಗಿ ಪೋಸ್ಟಿಂಗ್ ಮಾಡಿಕೊಳ್ಳಲು ಲಕ್ಷಾಂತರ ಪೇಮೆಂಟ್ ಮಾಡಿಕೊಂಡೇ ಬರುತ್ತಾರೆ. ಆದರೆ ಆ ಠಾಣೆಯಿಂದ ವರ್ಗಾವಣೆಗೊಂಡಿದ್ದ ಎಎಸ್ಐ ಒಬ್ಬ 11 ತಿಂಗಳಾದರೂ ಕೆಲಸಕ್ಕೆ ಹಾಜರಾಗದೆ, ಅಲ್ಲಿಯೇ ಇದ್ದುಕೊಂಡು ವಸೂಲಿ ಬಾಜಿ ಮಾಡಿಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಉಪ್ಪಾರಪೇಟೆ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಎಎಸ್ಐ ಶ್ರೀನಿವಾಸ್ ಶೆಟ್ಟಿ ಎಂಬವರನ್ನು ಕಳೆದ ವರ್ಷದ ಆರಂಭದಲ್ಲಿ ವಿಧಾನಸೌಧ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. 11 ತಿಂಗಳು ಕಳೆದರೂ ವಿಧಾನಸೌಧ ಠಾಣೆಗೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಅದರ ಬದಲು ಚೆನ್ನಾಗಿ ಕಮಾಯಿ ಬರುತ್ತಿದ್ದ ಉಪ್ಪಾರಪೇಟೆ ಠಾಣೆಯಲ್ಲೇ ಹಿರಿಯ ಅಧಿಕಾರಿಗಳ ಆದೇಶ ಉಲ್ಲಂಘಿಸಿ ಉಳಿದುಕೊಂಡಿದ್ದಲ್ಲದೆ, ಅಪರಾಧಿಗಳಿಂದಲೇ ವಸೂಲಿ ಬಾಜಿ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ.
ವಾರಕ್ಕೆ ಒಂದು ಬಾರಿ ಅಥವಾ ಹದಿನೈದು ದಿನಕ್ಕೊಮ್ಮೆ ಉಪ್ಪಾರಪೇಟೆ ಠಾಣೆಗೆ ಬರುತ್ತಿದ್ದ ಶ್ರೀನಿವಾಸ ಶೆಟ್ಟಿ, ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕರೆತಂದು ಎಫ್ಐಆರ್ ದಾಖಲಿಸದೆ ಹಣ ಪಡೆದು ಅವರನ್ನು ಬಿಡುತ್ತಿದ್ದರು. ತಮ್ಮ ಕಾನೂನುಬಾಹಿರ ವ್ಯವಹಾರವನ್ನು ನಡೆಸಲು ಉಪ್ಪಾರ ಪೇಟೆ ಪೊಲೀಸ್ ಠಾಣೆಯನ್ನು ಬಳಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಶ್ರೀನಿವಾಸ ಶೆಟ್ಟಿ ಮಾಡುತ್ತಿದ್ದ ಕಾನೂನು ವಿರೋಧಿ ಕೆಲಸದ ಬಗ್ಗೆ ಅಲ್ಲಿನ ಹಿರಿಯ ಅಧಿಕಾರಿಗಳಿಗೆ ತಿಳಿದಿದ್ದರೂ ಯಾರೂ ಪ್ರಶ್ನೆ ಮಾಡಿರಲಿಲ್ಲ. ಇತ್ಯರ್ಥವಾಗದ ಕೆಲವು ಪ್ರಕರಣಗಳ ತನಿಖೆಗೆ ಅವರ ಅಗತ್ಯವಿತ್ತು ಎಂದು ನೆಪ ಹೇಳಿ ಉಪ್ಪಾರಪೇಟೆ ಠಾಣೆ ಪ್ರಮುಖರು ಶ್ರೀನಿವಾಸ ಶೆಟ್ಟಿಯನ್ನು ಉಳಿಸಿಕೊಂಡಿದ್ದರು ಎನ್ನುವ ಮಾತನ್ನು ವಿಧಾನಸೌಧ ಠಾಣೆಯ ಮೂಲಗಳು ತಿಳಿಸುತ್ತವೆ.
ಬುಧವಾರ ಗಾಂಧಿನಗರದಲ್ಲಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಬೆಂಗಳೂರು ನಗರ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ಘಟನೆಯ ನಂತರ ಶ್ರೀನಿವಾಸ ಶೆಟ್ಟಿ ಅವರನ್ನು ದಿಢೀರ್ ಆಗಿ ಅಮಾನತು ಮಾಡಲಾಗಿದೆ. ಈ ವ್ಯಕ್ತಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿಯೂ ವಸೂಲಿ ಮಾಡುತ್ತಿದ್ದ ವಿಚಾರ ತಿಳಿದೇ ಈ ಅಮಾನತು ಶಿಕ್ಷೆ ನೀಡಲಾಗಿದೆ ಎನ್ನಲಾಗುತ್ತಿದೆ.
ಆದರೆ ಸ್ಟೇಷನ್ ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ, ಈ ಬಗ್ಗೆ ಹಿರಿಯ ಅಧಿಕಾರಿಗಳು ತಮ್ಮ ಸಿಬಂದಿ ಬಗ್ಗೆ ಎಷ್ಟು ಜಾಗ್ರತೆ ವಹಿಸುತ್ತಾರೆ ಎಂಬ ಬಗ್ಗೆ ಈ ಪ್ರಕರಣ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ 11 ತಿಂಗಳಿಂದ ಎಎಸ್ಐ ಒಬ್ಬರು ಕೆಲಸಕ್ಕೆ ಹಾಜರಾಗದಿದ್ದರೂ ವಿಧಾನಸೌಧ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ.ಆತನ ವಿರುದ್ಧ ಹಲವು ಆರೋಪಗಳಿದ್ದರೂ ಉಪ್ಪಾರಪೇಟೆ ಠಾಣೆ ಅಧಿಕಾರಿಗಳು ಎಎಸ್ಐ ಠಾಣೆಗೆ ಬಂದು ವಸೂಲಿ ಬಾಜಿ ನಡೆಸುತ್ತಿದ್ದರೂ ಕ್ರಮಕ್ಕೆ ಮುಂದಾಗಲಿಲ್ಲ. ಹೀಗಿರುವಾಗ, ಇದರಲ್ಲಿ ಹಿರಿಯ ಅಧಿಕಾರಿಗಳ ಶಾಮೀಲಾತಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
Bangalore Upparpet police inspector for collecting bribes even after 4 months of transfer from station. The inspector has been identified as Srinivas Shetty.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm