ಬ್ರೇಕಿಂಗ್ ನ್ಯೂಸ್
11-03-22 06:59 pm Bengaluru Correspondent ಕ್ರೈಂ
ಬೆಂಗಳೂರು, ಮಾ.11 :ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿರುವ ಇಬ್ಬರು ಮಹಿಳೆಯರು 16 ವರ್ಷದ ಬಾಲಕಿಗೆ ಅಮಲು ಬರಿಸುವ ಔಷಧಿ ನೀಡಿ, ಆಕೆಯನ್ನು ವಾರ ಕಾಲ ಕೂಡಿಟ್ಟು ಗಿರಾಕಿಗಳಿಗೆ ಒಪ್ಪಿಸಿ ಸರಣಿ ಅತ್ಯಾಚಾರಕ್ಕೆ ಒಳಪಡಿಸಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಆಗರ ನಿವಾಸಿ ಕಲಾವತಿ (52) ಮತ್ತು ಬಂಡೇಪಾಳ್ಯದ ರಾಜೇಶ್ವರಿ(50) ಬಂಧಿತ ಮಹಿಳೆಯರು. ಇವರ ಜೊತೆಗೆ ಹೊಸೂರಿನ ಆಟೊಮೊಬೈಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಕೇಶವಮೂರ್ತಿ (47), ಕೋರಮಂಗಲದ ಸತ್ಯರಾಜು(43), ಯಲಹಂಕದ ಶರತ್ (38), ಬೇಗೂರಿನ ರಫೀಕ್ (38) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೂಲಿ ಕಾರ್ಮಿಕ ದಂಪತಿಯ 16 ವರ್ಷದ ಮಗಳ ಮೇಲೆ ಲೈಂಗಿಕವಾಗಿ ಕಿರುಕುಳ ನೀಡಿದ್ದು ಇವರ ವಿರುದ್ಧ ಪೋಕ್ಸೋ, ರೇಪ್, ಅಪಹರಣ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಸಂತ್ರಸ್ತ ಹುಡುಗಿಯ ಹೆತ್ತವರು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬಂದು ಉಳಿದುಕೊಂಡಿದ್ದರು. ಹರೆಯದ ಹುಡುಗಿ ಶಾಲೆಗೆ ಹೋಗುತ್ತಿದ್ದು ಸಂಜೆ ಶಾಲೆಯಿಂದ ಬಂದು ನೆರೆಮನೆಯ ರಾಜೇಶ್ವರಿ ಮನೆಗೆ ಹೋಗುತ್ತಿದ್ದಳು. ರಾಜೇಶ್ವರಿ ಟೈಲರಿಂಗ್ ಶಾಪ್ ಹೊಂದಿದ್ದು ಟೈಲರಿಂಗ್ ಕಲಿಯಲು ಬರುತ್ತಿದ್ದ ಹುಡುಗಿಗೆ ಅಮಲು ಪದಾರ್ಥ ನೀಡಿದ್ದಾಳೆ. ಬಳಿಕ ಕೇಶವಮೂರ್ತಿಗೆ ಹೇಳಿದ್ದು, ಆತ ಹುಡುಗಿ ಅರೆಪ್ರಜ್ಞಾವಸ್ಥೆಯಲ್ಲಿರುವಾಗಲೇ ಅತ್ಯಾಚಾರ ನಡೆಸಿದ್ದಾನೆ. ಆನಂತರ, ಹುಡುಗಿ ಎಚ್ಚರಗೊಂಡಾದ ರಕ್ತ ಬಂದು ತೀರಾ ನಿತ್ರಾಣಕ್ಕೆ ಒಳಗಾಗಿದ್ದಳು.
ಈ ಬಗ್ಗೆ ಕೇಳಿದ್ದಕ್ಕೆ, ನೀನು ತಲೆ ತಿರುಗಿ ಬಿದ್ದಿದ್ದರಿಂದ ಹೀಗಾಗಿದೆ, ಇಲ್ಲಿ ಸ್ನಾನ ಮಾಡಿಕೊಂಡು ಹೋಗು ಎಂದು ರಾಜೇಶ್ವರಿ ಒತ್ತಾಯಿಸಿದ್ದಳು. ಆನಂತರ, ಮರುದಿನವೂ ತನ್ನ ಮನೆಗೆ ಬರುವಂತೆ ರಾಜೇಶ್ವರಿ ಹುಡುಗಿಯಲ್ಲಿ ಒತ್ತಾಯಿಸಿದ್ದಳು. ನಿರಾಕರಿಸಿದಾಗ, ಅಲ್ಲಿಯೇ ಸಮೀಪದ ಕಲಾವತಿಯ ಮನೆಗೆ ಉಪಾಯದಿಂದ ಕರೆದೊಯ್ದಿದ್ದರು. ಅಲ್ಲಿಯೂ ಅಮಲು ಪದಾರ್ಥ ನೀಡಿ ಇತರ ಆರೋಪಿಗಳನ್ನು ಕರೆಸಿ, ಅವರಿಗೆ ಒಪ್ಪಿಸಿದ್ದಾರೆ. ಅರೆ ಪ್ರಜ್ಞೆಯಲ್ಲಿರುವಾಗಲೇ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಒಂದು ವಾರ ಕಾಲ ಹುಡುಗಿಯನ್ನು ಹಿಡಿದಿಟ್ಟು ಆರೋಪಿಗಳಿಗೆ ಒದಗಿಸಿದ್ದು ಒಂದು ದಿನ ಮೈಯಲ್ಲಿ ರಕ್ತದ ಕಲೆಗಳು ಇದ್ದುದನ್ನು ಹುಡುಗಿಯ ತಾಯಿ ಗಮನಿಸಿ, ಪ್ರಶ್ನೆ ಮಾಡಿದ್ದಾರೆ.
ಈ ವೇಳೆ, ಕಲಾವತಿ ಮತ್ತು ರಾಜೇಶ್ವರಿ ವಿಚಾರವನ್ನು ಹೇಳಿದ್ದಾಳೆ. ತನ್ನ ಮೇಲೆ ಅತ್ಯಾಚಾರ ಆಗಿರುವುದನ್ನು ಹೇಳಿದ್ದು, ತಾಯಿ ಎಚ್ಎಸ್ಆರ್ ಲೇಔಟ್ ಠಾಣೆಗೆ ತೆರಳಿ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ಪತ್ತೆಗಾಗಿ ತಂಡವನ್ನು ರಚಿಸಿದ್ದು, ಇಬ್ಬರು ಮಹಿಳೆಯರು ಸೇರಿ ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ಎರಡೇ ದಿನದಲ್ಲಿ ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ತಮ್ಮ ಮನೆಯಲ್ಲೇ ವೇಶ್ಯಾವೃತ್ತಿ ನಡೆಸುತ್ತಿದ್ದು, ಅದಕ್ಕಾಗಿ ತಮ್ಮದೇ ನೆಟ್ವರ್ಕ್ ಬೆಳೆಸಿಕೊಂಡಿದ್ದರು. ಇದಲ್ಲದೆ, ತಮ್ಮಲ್ಲಿ ಟೈಲರಿಂಗ್ ಕೆಲಸಕ್ಕೆ ಬರುತ್ತಿದ್ದ ಇತರ ಯುವತಿಯರನ್ನು ಕೂಡ ಆಮಿಷವೊಡ್ಡಿ ಸೆಕ್ಸ್ ವೃತ್ತಿಗೆ ಇಳಿಸುತ್ತಿದ್ದರು ಅನ್ನುವುದನ್ನು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ.
The Karnataka Police have arrested six persons, including two woman on charges of raping a 16-year-old girl in Bengaluru, police said on Friday.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm