ಬ್ರೇಕಿಂಗ್ ನ್ಯೂಸ್
07-03-22 10:19 am Bengaluru Correspondent ಕ್ರೈಂ
ಬೆಂಗಳೂರು, ಮಾ.7: ಮನೆಯ ಮೇಲಿನ ಮಹಡಿಗೆ ಬಾಡಿಗೆ ಬಂದಿದ್ದ ಚಾಲಾಕಿ ಸೋದರಿಯರಿಬ್ಬರು ಮನೆ ಮಾಲೀಕರನ್ನೇ ದೋಚಿ, ಹಣ, ಚಿನ್ನದ ಒಡವೆ ಕದ್ದು ಎಸ್ಕೇಪ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಸಂಗ ನಡೆದಿದೆ.
ಹಣ, ಚಿನ್ನ ಕದ್ದು ಪರಾರಿಯಾಗಿದ್ದ ಅಕ್ಕ - ತಂಗಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಸುಮಯ್ಯ ತಾಜ್( 23) ಮತ್ತು ಆಕೆಯ ಸೋದರಿ ನಾಜೀಮಾ ತಾಜ್(32), ನಾಜೀಮಾಳ ಪತಿ ಅಕ್ಬರ್ (38) ಬಂಧಿತರು.

ಜಯನಗರ 1 ನೇ ಬ್ಲಾಕ್ ನ ದಯಾನಂದ ನಗರದಲ್ಲಿ ಕಳೆದ ಫೆ.19 ರಂದು ಘಟನೆ ನಡೆದಿತ್ತು. ಜಬಿ ಹಾಗೂ ಹಾಜಿರಾ ದಂಪತಿ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬೀರು ಬೀಗ ಒಡೆದು 2.34 ಲಕ್ಷ ಮೌಲ್ಯದ 58 ಗ್ರಾಂ ಚಿನ್ನಾಭರಣ,10 ಲಕ್ಷ ನಗದು ಹಣವನ್ನು ಕದ್ದು ಪರಾರಿಯಾಗಿದ್ದ ಅಕ್ಕ ತಂಗಿಯನ್ನು ಬಂಧಿಸಿದ್ದಾರೆ.

ಜಬಿ ಹಾಗೂ ಹಾಜಿರಾ ದಂಪತಿಗೆ 13 ವರ್ಷದ ಮಗ ಹಾಗೂ ಪಿಯುಸಿ ಕಲಿಯುವ ಮಗಳೊಬ್ಬಳಿದ್ದಾಳೆ. ಮೊದಲ ಮಹಡಿಯಲ್ಲಿ ಮಾಲೀಕರು ವಾಸವಿದ್ದು, ಎರಡನೇ ಮಹಡಿಗೆ ಆರೋಪಿ ಸೋದರಿಯರು ಇತ್ತೀಚೆಗೆ ಬಾಡಿಗೆಗೆ ಬಂದಿದ್ದರು. ದಂಪತಿಯ ಮಗ ಟೆರಸ್ ಗೆ ಬಂದು ಆಟ ಆಡುವಾಗಲೆಲ್ಲ ಮನೆಯಲ್ಲಿ ಹಣ ಇರುವ ವಿಚಾರವನ್ನು ಹೇಳಿಕೊಳ್ತಿದ್ದ. ಮಗಳ ಮದುವೆ ಸಿದ್ಧತೆಯಲ್ಲಿದ್ದ ದಂಪತಿ ಲಾರಿಯನ್ನು ಮಾರಿ ಹಣ, ಒಡವೆ ತಂದಿಟ್ಟಿದ್ದರು.

ಮನೆಯಲ್ಲಿ ಸಾಕಷ್ಟು ಹಣ ಮತ್ತು ಚಿನ್ನ ಇರುವುದನ್ನು ತಿಳಿದು ಖತರ್ನಾಕ್ ಸಿಸ್ಟರ್ಸ್ ಮನೆಯನ್ನು ದೋಚಲು ಪ್ಲಾನ್ ಹಾಕಿದ್ದರು. ಫೆ.19 ರಂದು ಮಗಳು ಕಾಲೇಜಿಗೆ ಹೋಗಿದ್ದರೆ,13 ವರ್ಷದ ಮಗ ಟೆರಸ್ ಮೇಲೆ ಆಟವಾಡಿಕೊಳ್ತಿದ್ದ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯಾಕೆ ಹಾಜಿರಾ ಸಂಬಂಧಿಯೊಬ್ಬರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿದ್ದರು. ಇದೇ ವೇಳೆ ಆರೋಪಿಗಳು ಕೃತ್ಯವೆಸಗಿದ್ದರು. ನಕಲಿ ಕೀ ಬಳಸಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ಸೋದರಿಯರು, ಆರೋಪಿ ನಾಜಿಮಾಳ ಪತಿ ಅಕ್ಬರ್ ಜೊತೆ ಸೇರಿ ಮನೆಯ ಕಪಾಟನ್ನು ಕಬ್ಬಿಣದ ವಸ್ತುವಿನಿಂದ ಮೀಟಿ ಬೀಗ ಒಡೆದು ಹಣ, ಒಡವೆ ಕಳ್ಳತನ ಮಾಡಿದ್ದರು.

ಕಳವುಗೈದ ಬಳಿಕ ಸೋದರಿಯರು ಬಾಡಿಗೆ ಮನೆ ಬಿಟ್ಟು ತಂದೆಯ ಮನೆ ತುಮಕೂರಿಗೆ ಎಸ್ಕೇಪ್ ಆಗಿದ್ದರು. ಇತ್ತ ಮನೆಮಂದಿ ಕಳವು ವಿಷಯ ತಿಳಿದು ಪೊಲೀಸ್ ದೂರು ನೀಡಿದ್ದರೆ, ಸೋದರಿಯರು ಕದ್ದ ದುಡ್ಡಲ್ಲಿ ಶೋಕಿ ಮಾಡಲು ಮುಂದಾಗಿದ್ದರು. ಕದ್ದ ಹಣದಲ್ಲಿ 14 ಚೂಡಿದಾರ ಸೇರಿದಂತೆ ಹಲವಾರು ಬೆಲೆಬಾಳುವ ಬಟ್ಟೆಬರೆಗಳನ್ನು ಖರೀದಿಸಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಸದ್ಯ ಬಂಧಿತರಿಂದ 4 ಲಕ್ಷ ನಗದು, 2.79 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆದಿದ್ದಾರೆ.
Bangalore Two sisters held for theft at the house of their house owner around 10 lakhs cash and 2.34 lakhs gold has been recovered.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm