ಬ್ರೇಕಿಂಗ್ ನ್ಯೂಸ್
04-03-22 11:38 am Mangalore Correspondent ಕ್ರೈಂ
ಪುತ್ತೂರು, ಮಾ.4: 16 ವರ್ಷಗಳ ಹಿಂದೆ ನಡೆದಿದ್ದ ಮನೆ ಕಳವು ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ವ್ಯಕಿಗೆ ಪುತ್ತೂರು ನ್ಯಾಯಾಲಯ ಐದು ವರ್ಷಗಳ ಶಿಕ್ಷೆ ಪ್ರಕಟಿಸಿದೆ.
2006 ರ ಮಾರ್ಚ್ 14 ಮತ್ತು 16ರ ಮಧ್ಯೆ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ಮಹೇಂದ್ರ ಕುಮಾರ್ ಎಂಬವರ ಮನೆಯಿಂದ ಕಳವು ನಡೆದಿತ್ತು. ಮನೆಯ ಬಾಗಿಲಿನ ಬೀಗವನ್ನು ಒಡೆದು ಸೂಟ್ ಕೇಸ್ ನಲ್ಲಿದ್ದ 50.930 ಗ್ರಾಮ್ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿತ್ತು. ಕೃತ್ಯದ ಬಗ್ಗೆ ತನಿಖೆ ನಡೆಸಿದ್ದ ಜಿಲ್ಲಾ ಅಪರಾಧ ಪತ್ತೆದಳವು ಆರೋಪಿಗಳಾದ ಸಂತೋಷ್ ಮತ್ತು ನಾಗರಾಜ ಬಳೆಗಾರ ಎಂಬವರನ್ನು ಬಂಧಿಸಿದ್ದರು.
ಆಗಿನ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕ ತಿಲಕಚಂದ್ರ, ಆರೋಪಿಗಳನ್ನು ಪುತ್ತೂರು ನಗರ ಠಾಣೆಗೆ ಹಸ್ತಾಂತರ ಮಾಡಿದ್ದರು. ಬಳಿಕ ಪುತ್ತೂರು ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ಐ ಕೃಷ್ಣ ನಾಯ್ಕ್ ನ್ಯಾಯಾಲಯಕ್ಕೆ ದೋಷಾರಾಪ ಪಟ್ಟಿ ಸಲ್ಲಿಸಿದ್ದರು. ಸುರತ್ಕಲ್ ಹೊನ್ನಕಟ್ಟೆ ನಿವಾಸಿ ನಾಗರಾಜ ಬಳೆಗಾರ ವಿರುದ್ಧ ಆನಂತರ ಹಲವು ಕಳವು ಕೇಸುಗಳು ದಾಖಲಾಗಿ ಕಲಬುರ್ಗಿ ಜೈಲಿನಲ್ಲಿ ಇಡಲಾಗಿತ್ತು. ಈಗಲೂ ಅದೇ ಜೈಲಿನಲ್ಲಿ ಇದ್ದಾನೆ. ಸದ್ರಿ ಅಪರಾಧದ ಬಗ್ಗೆ ಪುತ್ತೂರಿನ ನ್ಯಾಯಾಲಯದಲ್ಲಿ 2014 ರಿಂದ ವಿಚಾರಣೆ ನಡೆದಿದ್ದು ಒಂದನೇ ಆರೋಪಿ ನಾಗರಾಜ ಬಳೆಗಾರ ವಿರುದ್ಧ ಅಪರಾಧ ಸಾಬೀತಾಗಿದ್ದರಿಂದ 2022 ರ ಮಾರ್ಚ್ 3 ರಂದು ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಐದು ವರ್ಷಗಳ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ, ತೆರಲು ತಪ್ಪಿದಲ್ಲಿ ಹೆಚ್ಚುವರಿ 6 ತಿಂಗಳ ಶಿಕ್ಷೆ ಅನುಭವಿಸಬೇಕೆಂದು ತೀರ್ಪು ಹೇಳಿದೆ. ಆರೋಪಿಯು ಈಗಾಗಲೇ 5 ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ್ದಲ್ಲಿ ಇತರ ಪ್ರಕರಣಗಳಲ್ಲಿ ಅಪರಾಧ ಸಾಬೀತು ಆಗಿರದೇ ಇದ್ದರೆ ಜೈಲಿನಿಂದ ಬಿಡುಗಡೆಯಾಗಿ ಬರುವ ಸಾಧ್ಯತೆಯಿದೆ. ಆದರೆ ಆರೋಪಿ ನಾಗರಾಜ ಬಳೆಗಾರ ಉಡುಪಿ ಜೈಲಿನಲ್ಲಿದ್ದಾಗ ವಿನೋದ್ ಶೆಟ್ಟಿಗಾರ್ ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಕಲಬುರಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಹೀಗಾಗಿ ಕಳವು ಪ್ರಕರಣದ ಶಿಕ್ಷೆಯನ್ನು ಜೈಲಧಿಕಾರಿಗಳು ಪ್ರತ್ಯೇಕವಾಗಿ ಪರಿಗಣಿಸುತ್ತಾರೆ.
The police here have arrested Chandrashekhar (57) from Bandaje village on the charges of raping a mentally retarded lady. It is said that the lady was raped by him near Kanyoor in the taluk.
03-08-26 03:23 pm
HK News Staffer
ಡಿಕೆಶಿ ಸರ್ಕಾರದ ಮೆಗಾ ಸಂಪುಟ ವಿಸ್ತರಣೆ ; ಸಂಜೆ 4ಕ್...
03-08-26 01:46 pm
ಜಂಕ್ಫುಡ್ ವಿರುದ್ಧ ಖಾದರ್ ಸಮರ ; ಶಾಲಾ–ಕಾಲೇಜುಗಳ...
01-08-26 04:26 pm
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
03-08-26 11:42 am
HK News Staffer
Mangalore Rain: ಭಾರೀ ಮಳೆಯ ನಡುವೆ ಬಂಟ್ವಾಳದಲ್ಲಿ...
02-08-26 09:42 pm
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
03-08-26 01:48 pm
HK News Staffer
ಬೆಳ್ತಂಗಡಿ ; ಕಾಡಾನೆ ದಾಳಿಗೆ ದಿನಗೂಲಿ ಕಾರ್ಮಿಕ ಬಲಿ...
03-08-26 12:51 pm
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವೆನ್ಲಾಕ್ ಆಸ್ಪತ್...
03-08-26 12:26 pm
ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ವಿವಾದ ; ಅಧ...
01-08-26 08:44 pm
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm