ಬ್ರೇಕಿಂಗ್ ನ್ಯೂಸ್
28-02-22 01:06 pm HK Desk news ಕ್ರೈಂ
ಕಾರ್ಕಳ, ಫೆ.28 : ಮೂವರು ಗ್ರಾಮ ಪಂಚಾಯತ್ ಸದಸ್ಯರು ಸೇರಿ ಶಿರ್ಲಾಲು ಪಂಚಾಯತ್ ಕಚೇರಿಯ ಒಳಗಿನಿಂದ ಮಹತ್ವದ ದಾಖಲೆಗಳನ್ನು ಕಳವು ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರ್ಲಾಲು ಮುಂಡ್ಲಿ ನಿವಾಸಿಗಳಾದ ಸುಜಿತ್ ಕುಮಾರ್ ಶೆಟ್ಟಿ (45), ಗಿರೀಶ್ ಶೆಟ್ಟಿ (40), ಕಿಶೋರ್ (32) ಕಳವು ಮಾಡಿದ ಶಿರ್ಲಾಲು ಗ್ರಾಮ ಪಂಚಾಯತ್ ಸದಸ್ಯರು. ಫೆ.24ರಂದು ಪಂಚಾಯತ್ ಪಿಡಿಓ ಶ್ರೀನಿವಾಸ್ ಅವರಿಗೆ ಮಹತ್ವದ ಕಡತಗಳು ಮಿಸ್ ಆಗಿರುವುದು ತಿಳಿದುಬಂದಿತ್ತು. ಕಂಪನಿ ಒಂದಕ್ಕೆ ಸೇರಿದ ಕಡತ ಇದಾಗಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದಾಗ ಗ್ರಾಮ ಪಂಚಾಯತ್ ಸದಸ್ಯರೇ ಕಚೇರಿಯಿಂದ ಕದ್ದೊಯ್ದಿರುವುದು ಕಂಡುಬಂದಿತ್ತು.
ಪಂಚಾಯತ್ ಸಭೆಗಾಗಿ ಕಚೇರಿಗೆ ಆಗಮಿಸಿದ್ದ ಸದಸ್ಯರು, ಕಚೇರಿಯೊಳಗೆ ಕಡತಕ್ಕಾಗಿ ಹುಡುಕಾಟ ನಡೆಸಿದ್ದರು. ಆನಂತರ ಗಿರೀಶ್ ಶೆಟ್ಟಿ ತನ್ನ ಬ್ಯಾಗ್ ಒಳಗೆ ಕಡತವನ್ನು ಹಾಕಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪಿಡಿಓ ಶ್ರೀನಿವಾಸ್, ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾಸಗಿ ಕಂಪನಿ ಒಂದಕ್ಕೆ ಸೇರಿದ ಕಡತ ಆಗಿರುವುದರಿಂದ ಪಂಚಾಯತ್ ಕಚೇರಿಯಿಂದಲೇ ಕಳವಾಗಿರುವುದು ಮಹತ್ವ ಪಡೆದಿದೆ.
A case is registered in Ajekaru police station against three gram panchayat members for allegedly taking away an important file from the gram panchayat office. The accused are identified as Sujit Kumar Shetty (45), Girish Shetty (40), both residents of Shirlalu Mundli and Kishore (32) of Mundli.On February 24, when Srinivas S, PDO of Shiralu gram panchayat, checked for the files kept in the gram panchayat office, it came to light that an important file was missing. It was a file that pertained to a private company that falls under the limits of gram panchayat.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm