ಬ್ರೇಕಿಂಗ್ ನ್ಯೂಸ್
15-12-21 08:14 pm HK Desk news ಕ್ರೈಂ
Photo credits : Headline Karnataka
ಉಳ್ಳಾಲ, ಡಿ.15 : ವೈಯಕ್ತಿಕ ಕಾರಣ ಮುಂದಿಟ್ಟು ಆಟೋ ಚಾಲಕನೊಬ್ಬ ಇನ್ನೊಬ್ಬ ಆಟೋ ಚಾಲಕನ ಮನೆ ಆವರಣಕ್ಕೆ ನುಗ್ಗಿ ಕೊಲೆಗೆ ಯತ್ನಿಸಿದ್ದಲ್ಲದೆ, ತಡೆಯಲು ಬಂದವನನ್ನೂ ಇರಿದು ಗಾಯಗೊಳಿಸಿದ ಘಟನೆ ಕುಂಪಲ ಹನುಮಾನ್ ನಗರದಲ್ಲಿ ನಡೆದಿದೆ.
ಕುಂಪಲ ಹುನುಮಾನ್ ನಗರದ ನಿವಾಸಿ ರಿಕ್ಷಾ ಚಾಲಕ ಸುನಿಲ್ ಇರಿತದಿಂದ ಗಂಭೀರ ಗಾಯಗೊಂಡಿದ್ದು, ತಡೆಯಲು ಬಂದ ಇನ್ನೋರ್ವ ರಿಕ್ಷಾ ಚಾಲಕರಾದ ಜಯಪ್ರಕಾಶ್ ಕೂಡ ಇರಿತಕ್ಕೊಳಗಾಗಿದ್ದಾರೆ. ಕುಂಪಲ ಬಗಂಬಿಲ ನಿವಾಸಿ ರೋಕೇಶ್ ಯಾನೆ ರೋಸ್ ಎಂಬಾತ ತನ್ನ ಗೆಳೆಯ ದುರ್ಗೇಶ್ ಜೊತೆ ಆಟೋ ರಿಕ್ಷಾದಲ್ಲಿ ಹನುಮಾನ್ ನಗರದ ಸುನಿಲ್ ಎಂಬವರ ಮನೆ ಆವರಣಕ್ಕೆ ಮಂಗಳವಾರ ರಾತ್ರಿ ನುಗ್ಗಿದ್ದು ಧಾಂದಲೆ ನಡೆಸಿದ್ದಾನೆ. ಸುನಿಲ್ ನನ್ನು ಮನೆಯಿಂದ ಹೊರ ಕರೆದ ರೋಕೇಶ್ ಚಾಕುವಿನಿಂದ ತೋಳು, ಹೊಟ್ಟೆ, ಕಾಲು, ಬೆನ್ನಿಗೆ ಇರಿದಿದ್ದಾನೆನ್ನಲಾಗಿದೆ. ಗಲಾಟೆಯನ್ನ ತಡೆಯಲು ಬಂದ ಸುನಿಲ್ ಸ್ನೇಹಿತ ಜಯಪ್ರಕಾಶ್ ಎಂಬವರಿಗೂ ರೋಕೇಶ್ ಇರಿದಿದ್ದು ಗಾಯಾಳುಗಳು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.



ರೋಕೇಶ್ ಯಾನೆ ರೋಸ್, ಸುನಿಲ್, ಜಯಪ್ರಕಾಶ್ ಎಂಬ ಮೂವರೂ ಕುಂಪಲ ಬೈಪಾಸ್ ರಿಕ್ಷಾ ಪಾರ್ಕಲ್ಲಿ ಆಟೋ ಚಲಾಯಿಸುವ ವೃತ್ತಿ ನಡೆಸುತ್ತಿದ್ದಾರೆ. ವೈಯಕ್ತಿಕ ವಿಚಾರವನ್ನೇ ಮುಂದಿಟ್ಟು ರೋಕೇಶ್ ಮಂಗಳವಾರ ರಾತ್ರಿ ಸ್ನೇಹಿತ ದುರ್ಗೇಶ್ ಜತೆಗೂಡಿ ಸುನಿಲ್ ಮೇಲೆ ಇರಿದಿದ್ದಾನೆ. ರೋಕೇಶ್ ಯಾನೆ ರೋಸ್ ಹೆಣ್ಣು ಪೀಡಕನಾಗಿದ್ದು ಈ ಹಿಂದೆಯೂ ತನ್ನ ಕಚ್ಚೇ ಹರಕುತನ ತೋರಿಸಲು ಹೋಗಿ ಸ್ಥಳೀಯರಿಂದ ಅನೇಕ ಬಾರಿ ಶಾಸ್ತಿ ಮಾಡಿಸಿಕೊಂಡಿದ್ದ. ಈತನ ಸಹೋದರ ವಕೀಲನಾಗಿದ್ದು ತಮ್ಮನ ಪುಂಡಾಟಿಕೆಗೆ ಬೆಂಗಾವಲಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.
ರೋಸ್ ಯಾನೆ ರೋಕೇಶ್ ಮತ್ತು ದುರ್ಗೇಶ್ ಘಟನೆ ಬಳಿಕ ತಲೆಮರೆಸಿದ್ದು ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Auto driver stabs two persons over personal gredge in Kumpala. Kampala resident Rokesh is accused of doing this crime over personal reasons. Both who are stabbed are also said to be auto drivers.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm