ಬ್ರೇಕಿಂಗ್ ನ್ಯೂಸ್
31-07-26 07:03 pm HK News Staffer ಕರಾವಳಿ
ಮಂಗಳೂರು, ಜು.31: ಉಳ್ಳಾಲ ತಾಲೂಕಿನ ಕಲ್ಲಾಪು ಪೆರ್ಮನ್ನೂರಿನ ನಿವಾಸಿ ಕುಮಾರಿ ದೀಕ್ಷಾ ಕೊಟ್ಟಾರಿ (3೦) ಎಂಬಾಕೆ ಮೆದುಳು ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಇಪ್ಪತ್ತು ಲಕ್ಷ ರೂಪಾಯಿ ಬೇಕಿದ್ದು ಕುಟುಂಬಸ್ಥರು ಸಮಾಜದ ಸಹೃದಯಿ ದಾನಿಗಳಿಂದ ಸಹಕಾರವನ್ನು ಯಾಚಿಸಿದ್ದಾರೆ.
ಮೆದುಳು ಜ್ವರದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ದೀಕ್ಷಾಳನ್ನು ಕಳೆದ ವಾರ (ಜುಲೈ 24) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದೀಕ್ಷಾಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳಷ್ಟು ವೆಚ್ಚ ತಗುಲಲಿದೆಯೆಂದು ವೈದ್ಯರು ತಿಳಿಸಿದ್ದಾರೆ.
ದೀಕ್ಷಾ ಏಕೈಕ ಪುತ್ರಿಯಾಗಿದ್ದು, ತಂದೆ ಸಾವನ್ನಪ್ಪಿದ್ದು, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಖಾಸಗಿ ಉದ್ಯೋಗದಲ್ಲಿದ್ದ ದೀಕ್ಷಾ ಅವಿವಾಹಿತಳಾಗಿದ್ದು ತನ್ನ ದುಡಿಮೆಯಿಂದಲೇ ತಾಯಿಯನ್ನ ಸಾಕುತ್ತಿದ್ದಳು. ತಾಯಿಗೆ ಆಧಾರವಾಗಿದ್ದ ಮಗಳು ಇದೀಗ ಆಸ್ಪತ್ರೆಯ ಐಸಿಯುನಲ್ಲಿ ಸಾವಿನೊಂದಿಗೆ ಸೆಣಸಾಟ ನಡೆಸುತ್ತಿದ್ದಾಳೆ. ದೀಕ್ಷಾ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಭರಿಸಲು ಆಕೆಯ ಅಶಕ್ತ ತಾಯಿಗಂತೂ ಸಾಧ್ಯವೇ ಇಲ್ಲದಂತಾಗಿದೆ. ಹನಿ ಹನಿ ಸೇರಿ ಹಳ್ಳ ಎಂಬಂತೆ ಸಮಾಜದ ಉದಾರ ಮನಸ್ಸಿನ ದಾನಿಗಳು ಕೊಡುವ ಒಂದೊಂದು ರೂಪಾಯಿಯೂ ದೀಕ್ಷಾಳ ಜೀವ ಉಳಿಸಲು ಸಹಾಯವಾಗಬಹುದು.



ದೀಕ್ಷಾ ಚಿಕಿತ್ಸೆಗೆ ಸಹಾಯ ಮಾಡಲಿಚ್ಚಿಸುವವರು ಕೆಳಕಂಡ ಬ್ಯಾಂಕ್ ಖಾತೆ ಅಥವಾ ಗೂಗಲ್ ಪೇ, ಯುಪಿಐ ಸ್ಕ್ಯಾನರ್ ಮುಖಾಂತರ ತಮ್ಮ ಅಮೂಲ್ಯ ದೇಣಿಗೆ ಕಳುಹಿಸಬಹುದಾಗಿದೆ.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 07:03 pm
HK News Staffer
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಮಂಗಳೂರು, ಉಳ್ಳಾಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ದ...
28-07-26 10:28 pm
31-07-26 06:01 pm
HK News Staffer
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm
ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ; ಚರ್...
31-07-26 12:00 pm
ಸ್ಟಿಂಗ್ ವಿಡಿಯೋದಲ್ಲಿ ಲಂಚ ಸ್ವೀಕಾರ ದೃಶ್ಯ ಸೆರೆ ;...
30-07-26 09:24 pm
ಫೇಸ್ಬುಕ್ ಫ್ರೆಂಡ್ಶಿಪ್ ದುಬಾರಿ ! ಚಿನ್ನದ ಪಾರ್ಸೆ...
30-07-26 08:31 pm