ಬ್ರೇಕಿಂಗ್ ನ್ಯೂಸ್
30-11-21 02:28 pm HK Desk news ಕ್ರೈಂ
ಬೆಂಗಳೂರು, ನ.30: ಓಮಿಕ್ರಾನ್ ರೂಪಾಂತರಿ ವೈರಸ್ ಬರದಂತೆ ಲಸಿಕೆ ನೀಡಲು ಬಂದಿರುವುದಾಗಿ ವೈದ್ಯರ ಸೋಗಿನಲ್ಲಿ ಬಂದಿದ್ದ ತಂಡವೊಂದು ಮನೆಯವರಿಗೆ ಪಿಸ್ತೂಲ್ ತೋರಿಸಿ ದರೋಡೆ ನಡೆಸಿರುವ ಘಟನೆ ಯಶವಂತಪುರದ ಎಸ್ ಬಿಎಂ ಕಾಲನಿಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಒಂದು ಕಾರು ಮತ್ತು ಇನ್ನೊಂದು ಬೈಕಿನಲ್ಲಿ ನಾಲ್ವರು ಬಂದಿದ್ದರು. ಉತ್ತರ ಭಾರತ ಮೂಲದ ಸಂಪತ್ ಸಿಂಗ್ ಎಂಬವರ ಮನೆಗೆ ಬಂದಿದ್ದ ತಂಡ, ನಿಮಗೆ ಕೊರೊನಾ ಲಸಿಕೆ ಆಗಿದೆಯೇ ಎಂದು ಕೇಳಿದ್ದಾರೆ. ಲಸಿಕೆ ತಗೊಂಡಿದ್ದೇವೆ ಎಂದಿದ್ದಕ್ಕೆ ಈಗ, ಹೊಸ ವೈರಸ್ ಬಂದಿರುವುದಕ್ಕೆ ಮತ್ತೊಂದು ಲಸಿಕೆ ನೀಡಲು ಬಂದಿದ್ದೇವೆ ಎಂದು ಹೇಳಿ ಮನೆಯ ಒಳಗೆ ಬಂದಿದ್ದಾರೆ.
ಮನೆಯಲ್ಲಿ ಸಂಪತ್ ಸಿಂಗ್ ಪತ್ನಿ ಪಿಸ್ತಾ ದೇವಿ ಮತ್ತು ಸೊಸೆ ರಕ್ಷಾ ಮಾತ್ರ ಇದ್ದರು. ಪಿಸ್ತಾ ದೇವಿ ಗಂಡನಿಗೆ ಕರೆ ಮಾಡಲೆಂದು ಮೊಬೈಲ್ ತೆಗೆಯುವಷ್ಟರಲ್ಲಿ ಅವರಲ್ಲಿ ಒಬ್ಬಾತ ಆಕೆಯ ಹಣೆಗೆ ರಿವಾಲ್ವರ್ ಇಟ್ಟಿದ್ದಾನೆ. ಕೂಡಲೇ ಅವರಿಬ್ಬರನ್ನೂ ಮನೆಯ ಕೋಣೆಯೊಳಗೆ ಕೂಡಿ ಹಾಕಿದ್ದಾರೆ. ಬಳಿಕ ಮನೆಯ ಕಪಾಟಿನಲ್ಲಿದ್ದ 50 ಗ್ರಾಮ್ ಚಿನ್ನವನ್ನು ಲೂಟಿ ಮಾಡಿದ್ದಾರೆ. ಇದೇ ವೇಳೆ, ಪಿಸ್ತಾ ದೇವಿಯವರ ಇನ್ನೊಬ್ಬ ಮಗ ವಿಕ್ರಂ ಸಿಂಗ್ ಎಂಬಾತ ಈ ವಿಚಾರ ತಿಳಿಯದೆ ನೇರವಾಗಿ ಮನೆಗೆ ಬಂದಿದ್ದಾನೆ.
ಮನೆಯಲ್ಲಿ ನೋಡಿದರೆ, ನಾಲ್ಕು ಮಂದಿ ವೈದ್ಯರ ಸೋಗಿನಲ್ಲಿದ್ದರು. ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿದ್ದವರು, ನಿನಗೆ ಲಸಿಕೆ ಆಗಿದೆಯಾ ಎಂದು ಕೇಳಿದ್ದಾರೆ. ನನಗೆ ಲಸಿಕೆ ಆಗಿದೆ ಎನ್ನುತ್ತಲೇ ತಾಯಿಯನ್ನು ಕರೆಯುತ್ತಾ ಮನೆಯ ಕೋಣೆಯೊಳಗೆ ಹೋಗಿದ್ದಾನೆ. ಅಷ್ಟರಲ್ಲಿ ಆಗಂತುಕರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಪರಿಶೀಲಿಸಿ ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.
Burglars come as Doctors stating to give Omicron Virus vaccine, show guns and flee with costly items. A case has been registered at Yeshwantpur Police Station.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm