ಬ್ರೇಕಿಂಗ್ ನ್ಯೂಸ್
21-11-21 09:54 pm HK News Desk ಕ್ರೈಂ
ತಿರುಚ್ಚಿ, ನ.21: ಆಡು ಕಳ್ಳರನ್ನು ಬೆನ್ನಟ್ಟಿ ಹೋಗಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಕಳ್ಳರು ಮಚ್ಚಿನಲ್ಲಿ ಕಡಿದು ಕೊಲೆಗೈದ ಘಟನೆ ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಕಿರಾನೂರು ಎಂಬಲ್ಲಿ ನಡೆದಿದೆ.
ನವಲಪಟ್ಟು ಠಾಣೆಯ ಎಸ್ಐ ಭೂಮಿನಾಥನ್ (55) ಕೊಲೆಯಾದವರು. ಭೂಮಿನಾಥನ್ ಶನಿವಾರ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಭಾನುವಾರ ನಸುಕಿನ ವೇಳೆ ಗಸ್ತಿನಲ್ಲಿದ್ದಾಗ, ಬೈಕಿನಲ್ಲಿ ಸರದಿಯಂತೆ ಯುವಕರು ಆಡುಗಳನ್ನು ಹಿಡಿದು ಒಯ್ಯುತ್ತಿದ್ದುದು ಕಂಡುಬಂದಿದೆ. ಕೂಡಲೇ ಅವರನ್ನು ನಿಲ್ಲಿಸಲು ಸೂಚಿಸಿದ್ದು, ಕಳ್ಳರು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಕರ್ತವ್ಯದಲ್ಲಿದ್ದ ಎಸ್ಐ ಭೂಮಿನಾಥನ್ ತನ್ನ ಬೈಕಿನಲ್ಲಿ ಅವರನ್ನು ಹಿಂಬಾಲಿಸಿದ್ದು, ಕಳ್ಳರು ಕಿರಾನೂರಿನ ಕಳಮಾವೂರು ಗ್ರಾಮದತ್ತ ನುಗ್ಗಿದ್ದಾರೆ. ಅಲ್ಲಿವರೆಗೂ ಹಿಂಬಾಲಿಸಿ ಹೋಗಿದ್ದ ಎಸ್ಐ, ಇಬ್ಬರನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಆದರೆ, ಅವರು ತಮ್ಮ ಕೈಯಲ್ಲಿದ್ದ ಮಚ್ಚಿನಲ್ಲಿ ಎಸ್ಐ ತಲೆಗೆ ಕಡಿದಿದ್ದು, ಎಸ್ಐ ಭೂಮಿನಾಥನ್ ಸ್ಥಳದಲ್ಲೇ ನೆಲಕ್ಕುರುಳಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂತರ ವಿಷಯ ತಿಳಿದು ಕಿರಾನೂರು ಪೊಲೀಸರು ಸ್ಥಳಕ್ಕೆ ಬಂದಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಭೂಮಿನಾಥನ್ ತಿರುಚ್ಚಿ ಜಿಲ್ಲೆಯ ನವಲಪಟ್ಟು ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿದ್ದರು. ಆದರೆ, ಕೊಲೆ ಘಟನೆ ನಡೆದಿರುವುದು ಪಕ್ಕದ ಪುದುಕೋಟೈ ಜಿಲ್ಲೆಯ ಕಿರಾನೂರು ಠಾಣೆ ವ್ಯಾಪ್ತಿಯಲ್ಲಿ. ನವಲಪಟ್ಟು ಠಾಣೆಯ ವ್ಯಾಪ್ತಿಯಿಂದ ಕಳ್ಳರು ಅತ್ತ ಕಡೆಗೆ ಪರಾರಿಯಾಗಿದ್ದು, ಎಸ್ಐ ಒಬ್ಬಂಟಿಯಾಗೇ ಕಳ್ಳರನ್ನು ಹಿಂಬಾಲಿಸಿ ಹೋಗಿದ್ದು ದುರಂತಕ್ಕೆ ಕಾರಣವಾಗಿತ್ತು. ಸ್ಥಳೀಯವಾಗಿ ಆಡು ಕಳ್ಳತನ ಹೆಚ್ಚಿದ್ದರಿಂದ ಪೊಲೀಸರು ನಿಗಾ ವಹಿಸಿದ್ದರು.
A 55-year-old sub-inspector from Navalpattu in Tiruchy district was found brutally murdered near Kalamavur village near Keeranur in Pudukottai district in the wee hours of Sunday. Police sources said that during night patrol he went chasing a goat thief gang who have reportedly killed the cop.
02-02-26 12:18 pm
HK News Desk
FM Sitharaman, Mohandas Pai, PM Modi, C.J. Ro...
31-01-26 11:05 pm
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
02-02-26 11:59 am
HK News Desk
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
01-02-26 10:29 pm
Mangalore Correspondent
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
02-02-26 12:16 pm
HK News Desk
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm