ಬ್ರೇಕಿಂಗ್ ನ್ಯೂಸ್
21-11-21 09:54 pm HK News Desk ಕ್ರೈಂ
ತಿರುಚ್ಚಿ, ನ.21: ಆಡು ಕಳ್ಳರನ್ನು ಬೆನ್ನಟ್ಟಿ ಹೋಗಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಕಳ್ಳರು ಮಚ್ಚಿನಲ್ಲಿ ಕಡಿದು ಕೊಲೆಗೈದ ಘಟನೆ ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಕಿರಾನೂರು ಎಂಬಲ್ಲಿ ನಡೆದಿದೆ.
ನವಲಪಟ್ಟು ಠಾಣೆಯ ಎಸ್ಐ ಭೂಮಿನಾಥನ್ (55) ಕೊಲೆಯಾದವರು. ಭೂಮಿನಾಥನ್ ಶನಿವಾರ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಭಾನುವಾರ ನಸುಕಿನ ವೇಳೆ ಗಸ್ತಿನಲ್ಲಿದ್ದಾಗ, ಬೈಕಿನಲ್ಲಿ ಸರದಿಯಂತೆ ಯುವಕರು ಆಡುಗಳನ್ನು ಹಿಡಿದು ಒಯ್ಯುತ್ತಿದ್ದುದು ಕಂಡುಬಂದಿದೆ. ಕೂಡಲೇ ಅವರನ್ನು ನಿಲ್ಲಿಸಲು ಸೂಚಿಸಿದ್ದು, ಕಳ್ಳರು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಕರ್ತವ್ಯದಲ್ಲಿದ್ದ ಎಸ್ಐ ಭೂಮಿನಾಥನ್ ತನ್ನ ಬೈಕಿನಲ್ಲಿ ಅವರನ್ನು ಹಿಂಬಾಲಿಸಿದ್ದು, ಕಳ್ಳರು ಕಿರಾನೂರಿನ ಕಳಮಾವೂರು ಗ್ರಾಮದತ್ತ ನುಗ್ಗಿದ್ದಾರೆ. ಅಲ್ಲಿವರೆಗೂ ಹಿಂಬಾಲಿಸಿ ಹೋಗಿದ್ದ ಎಸ್ಐ, ಇಬ್ಬರನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಆದರೆ, ಅವರು ತಮ್ಮ ಕೈಯಲ್ಲಿದ್ದ ಮಚ್ಚಿನಲ್ಲಿ ಎಸ್ಐ ತಲೆಗೆ ಕಡಿದಿದ್ದು, ಎಸ್ಐ ಭೂಮಿನಾಥನ್ ಸ್ಥಳದಲ್ಲೇ ನೆಲಕ್ಕುರುಳಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂತರ ವಿಷಯ ತಿಳಿದು ಕಿರಾನೂರು ಪೊಲೀಸರು ಸ್ಥಳಕ್ಕೆ ಬಂದಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಭೂಮಿನಾಥನ್ ತಿರುಚ್ಚಿ ಜಿಲ್ಲೆಯ ನವಲಪಟ್ಟು ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿದ್ದರು. ಆದರೆ, ಕೊಲೆ ಘಟನೆ ನಡೆದಿರುವುದು ಪಕ್ಕದ ಪುದುಕೋಟೈ ಜಿಲ್ಲೆಯ ಕಿರಾನೂರು ಠಾಣೆ ವ್ಯಾಪ್ತಿಯಲ್ಲಿ. ನವಲಪಟ್ಟು ಠಾಣೆಯ ವ್ಯಾಪ್ತಿಯಿಂದ ಕಳ್ಳರು ಅತ್ತ ಕಡೆಗೆ ಪರಾರಿಯಾಗಿದ್ದು, ಎಸ್ಐ ಒಬ್ಬಂಟಿಯಾಗೇ ಕಳ್ಳರನ್ನು ಹಿಂಬಾಲಿಸಿ ಹೋಗಿದ್ದು ದುರಂತಕ್ಕೆ ಕಾರಣವಾಗಿತ್ತು. ಸ್ಥಳೀಯವಾಗಿ ಆಡು ಕಳ್ಳತನ ಹೆಚ್ಚಿದ್ದರಿಂದ ಪೊಲೀಸರು ನಿಗಾ ವಹಿಸಿದ್ದರು.
A 55-year-old sub-inspector from Navalpattu in Tiruchy district was found brutally murdered near Kalamavur village near Keeranur in Pudukottai district in the wee hours of Sunday. Police sources said that during night patrol he went chasing a goat thief gang who have reportedly killed the cop.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 09:42 pm
HK News Desk
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm