ಬ್ರೇಕಿಂಗ್ ನ್ಯೂಸ್
21-11-21 04:02 pm HK News Desk ಕ್ರೈಂ
ಯಾದಗಿರಿ, ನ.21: ದೇವರ ಪ್ರಸಾದ ಎಂದು ಹೇಳಿ ಪತಿಗೆ ನೀರಿನಲ್ಲಿ ನಿದ್ದೆ ಮಾತ್ರೆ ಕೊಟ್ಟು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಲ್ಲಲು ಯತ್ನಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಪತಿ ನಿದ್ದೆಗೆ ಜಾರಿದಾಗ, ಕೂಡಲೇ ಪ್ರಿಯತಮನನ್ನು ಮನೆಗೆ ಕರೆಸಿಕೊಂಡು ಇಬ್ಬರೂ ಸೇರಿ ಪತಿರಾಯನ ಮುಖಕ್ಕೆ ತಲೆದಿಂಬು ಇಟ್ಟು ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಆದರೆ, ಮುಖಕ್ಕೆ ಬಟ್ಟೆ ಮುತ್ತಿಕೊಳ್ಳುತ್ತಲೇ ಎಚ್ಚೆತ್ತ ಪತಿರಾಯ, ಪತ್ನಿಯ ಸಂಚನ್ನು ವಿಫಲಗೊಳಿಸಿದ್ದಾನೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತಿ ವಿಶ್ವನಾಥ ರೆಡ್ಡಿ ಪತ್ನಿಯ ಕೊಲೆ ಸಂಚಿನಿಂದ ಪಾರಾಗಿದ್ದಾನೆ.
ಪತ್ನಿ ಚಂದ್ರಕಲಾಗೆ ತನ್ನ ತಂಗಿಯ ಗಂಡ ಬಸನಗೌಡನ ಜೊತೆ ಅಕ್ರಮ ಸಂಬಂಧ ಇತ್ತು. ಈ ಬಗ್ಗೆ ಪತಿಗೆ ತಿಳಿಯದಂತೆ ನೋಡಿಕೊಂಡಿದ್ದ ಚಂದ್ರಕಲಾ, ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಲು ಸಂಚು ಹೂಡಿದ್ದಾಳೆ. ಇತ್ತೀಚೆಗೆ ವಿಶ್ವನಾಥ ರೆಡ್ಡಿ ಉಕ್ಕಿನಾಳ ಗ್ರಾಮದ ಬಸವೇಶ್ವರ ಜಾತ್ರೆಗೆ ತೆರಳಿದ್ದ ವೇಳೆ ಭೇಟಿಯಾಗಿದ್ದ ಬಸನಗೌಡ, ನಿಮ್ಮ ಪುತ್ರನಿಗೆ ಆರಾಮ ಇಲ್ಲ ಎಂದು ತಿಳಿದೆ. ಇದರಲ್ಲಿ ಔಷಧಿ ಇದೆಯೆಂದು ಹೇಳಿ ಒಂದು ಕಟ್ಟನ್ನು ಕೊಟ್ಟಿದ್ದ. ಆದರೆ, ಅದರಲ್ಲಿ ನಿದ್ದೆ ಮಾತ್ರೆಯನ್ನು ಕೊಟ್ಟು ಕಳುಹಿಸಿದ್ದ ಬಸನಗೌಡ, ವಿಶ್ವನಾಥ ರೆಡ್ಡಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ.
ಪತ್ನಿ ಚಂದ್ರಕಲಾ ನೀರಿನಲ್ಲಿ ನಿದ್ದೆ ಮಾತ್ರೆ ಬೆರಸಿ, ದೇವರ ಪ್ರಸಾದವೆಂದು ಹೇಳಿ ಪತಿಗೆ ಕುಡಿಸಿದ್ದಳು. ಮೊದಲೇ ಸ್ಕೆಚ್ ಹಾಕಿದಂತೆ, ಬಸನಗೌಡನ ಜೊತೆ ಸೇರಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಆದರೆ ನಡುವೆ ಎಚ್ಚೆತ್ತ ಪತಿ ವಿಶ್ವನಾಥ ರೆಡ್ಡಿ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಪತ್ನಿಯ ಕಿರಾತಕ ಬುದ್ಧಿಯನ್ನು ಬಯಲು ಮಾಡಿದ್ದಾನೆ. ಆನಂತರ, ವಿಶ್ವನಾಥ ರೆಡ್ಡಿಯ ಕುಟುಂಬಸ್ಥರು ಸೇರಿ ಬಸನಗೌಡನಿಗೆ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೆ, ಪೊಲೀಸರಿಗೆ ಹೇಳಿ ಇಬ್ಬರನ್ನೂ ಅವರ ವಶಕ್ಕೆ ಒಪ್ಪಿಸಿದ್ದಾರೆ. ಇಬ್ಬರ ಮೊಬೈಲ್ ಚೆಕ್ ಮಾಡಿದಾಗ, ಬಸನಗೌಡ ಮಾತನಾಡಿದ್ದ ಆಡಿಯೋ ಲಭ್ಯವಾಗಿದ್ದು, ಕೊಲೆಗೆ ಸ್ಕೆಚ್ ಹಾಕಿದ್ದು ಬಯಲಾಗಿದೆ. ಕೆಂಭಾವಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.
Yadagiri Wife tries to kill Husband by poisoning him to hide the illicit affair.
24-08-25 05:30 pm
Bangalore Correspondent
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 10:49 pm
Mangalore Correspondent
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
25-08-25 02:29 am
Mangaluru Correspondent
ಮುಸ್ಲಿಂ ಗಂಡನನ್ನು ರಾಡ್ ನಲ್ಲಿ ಹೊಡೆದು ಕೊಲೆಗೈದು ಶ...
24-08-25 10:33 pm
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm