ಬ್ರೇಕಿಂಗ್ ನ್ಯೂಸ್
18-11-21 05:15 pm Mangaluru correspondent ಕ್ರೈಂ
ಮಂಗಳೂರು, ನ.18: ನೀರಿನ ಮೀಟರ್ ರೀಡಿಂಗ್ ಮಾಡುವವರು ಎಂದು ಹೇಳಿ ಮನೆಗೆ ಬಂದಿದ್ದ ಇಬ್ಬರು ಮನೆಯಲ್ಲಿದ್ದ ವೃದ್ಧ ಮಹಿಳೆಯನ್ನು ಯಾಮಾರಿಸಿ, ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕದ್ದೊಯ್ದ ಘಟನೆ ಉರ್ವಾದಲ್ಲಿ ನಡೆದಿದೆ.
ಉರ್ವಾ ಸ್ಟೋರ್ ಬಳಿಯ ದಡ್ಡಲ್ ಕಾಡ್ ಎಂಬಲ್ಲಿ ಘಟನೆ ನಡೆದಿದೆ. ಮೀರಾ ಪೈ ಎಂಬವರ ಮನೆಗೆ ನ.16ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರು ಬಂದಿದ್ದು ನಾವು ಮಹಾನಗರ ಪಾಲಿಕೆಯಿಂದ ಬಂದಿದ್ದಾಗಿ ಹೇಳಿದ್ದಾರೆ. ನಿಮ್ಮ ನೀರಿನ ಮೀಟರ್ ರೀಡಿಂಗ್ ಮಾಡಬೇಕು, ನೀರಿನ ಸಂಪ್ ಚೆಕ್ ಮಾಡಬೇಕೆಂದು ಹೇಳಿ ಅಧಿಕಾರಿಗಳ ಸೋಗಿನಲ್ಲಿ ಪರಿಶೀಲನೆ ಮಾಡಿದ್ದಾರೆ.
ಆನಂತರ, ಮಹಿಳೆಯ ಜೊತೆಗೆ ಮನೆಯ ಟೆರೇಸಿಗೆ ತೆರಳಿದ್ದ ಇಬ್ಬರು ಅಲ್ಲಿರುವ ನೀರಿನ ಟಾಂಕಿಯನ್ನು ಪರಿಶೀಲನೆ ನಡೆಸಿದ್ದು, ಮನೆ ಹಿಂಭಾಗದಲ್ಲಿ ಗಲೀಜು ಮಾಡದಂತೆ ಹೇಳಿದ್ದಾರೆ. ಈ ವೇಳೆ, ಪರಿಸರದ ನಿವಾಸಿಗಳು ಕೂಡ ಬಂದಿದ್ದು, ನೀವು ಮಹಾನಗರ ಪಾಲಿಕೆಯವರು ಅನ್ನುವುದಕ್ಕೆ ಯಾವ ದಾಖಲೆಯಿದೆ ಎಂದು ಹೇಳಿ ಕೇಳಿದ್ದಾರೆ. ಅದು ಬೈಕಿನಲ್ಲಿದೆ ಎಂದು ಕೊಡುತ್ತೇವೆಂದು ಹೇಳಿ, ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು.
ಸಂಜೆ ವೇಳೆಗೆ, ಮನೆಯ ಒಳಗಿನ ಕಪಾಟಿನಲ್ಲಿ ಚೆಕ್ ಮಾಡಿದಾಗ, 68 ಗ್ರಾಮ್ ಚಿನ್ನಾಭರಣ ಮತ್ತು 71 ಸಾವಿರ ರೂ. ನಗದು ಹಣ ಕಳವಾಗಿತ್ತು. ಇದರ ಬಗ್ಗೆ 70 ವರ್ಷದ ಮೀರಾ ಪೈ ಉರ್ವಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮೀಟರ್ ರೀಡಿಂಗ್ ಎಂದು ಹೇಳಿ ಇಬ್ಬರು ಅಜ್ಜಿಯ ಜೊತೆಗೆ ಮಾತನಾಡುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ ಮನೆಯ ಒಳಗೆ ಹೋಗಿದ್ದ ಅನ್ನುವುದನ್ನು ಪತ್ತೆ ಮಾಡಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಅದರ ಆಧಾರದಲ್ಲಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
Mangalore Robbery in Urwa store, Burglars enter home loot cash and gold.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 01:01 pm
HK News Staffer
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm