ಬ್ರೇಕಿಂಗ್ ನ್ಯೂಸ್
11-11-21 01:19 pm HK News Desk ಕ್ರೈಂ
ಬಳ್ಳಾರಿ, ನ.11: ಇಲ್ಲಿನ ಸಬ್ ರಿಜಿಸ್ಟ್ರಾರ್ ಒಬ್ಬ ತನ್ನ ವೇಷ ಮರೆಸಿಕೊಂಡು ಎರಡು ಮದುವೆಯಾಗಿ ವಂಚಿಸಿದ್ದು ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ.
ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿರುವ ಉಮೇಶ್ ಎರಡು ಮದುವೆಯಾಗಿ ಮೋಸದಾಟ ನಡೆಸಿದ್ದಾನೆ. ಮೊದಲ ಮದುವೆಯನ್ನು ಮುಚ್ಚಿಟ್ಟು ಬೆಂಗಳೂರಿನ ನಜ್ಮೀರ್ ಖಾನ್ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಇದೀಗ ಹಳೆ ವಿಚಾರ ತಿಳಿದ ನಜ್ಮೀರ್ ಪೊಲೀಸ್ ದೂರು ನೀಡಿದ್ದಾಳೆ.
ದೆಹಲಿ ಮೂಲದ ನಜ್ಮೀನ್ ಬೆಂಗಳೂರಲ್ಲಿ ಉಮೇಶನಿಗೆ ಪರಿಚಯವಾಗಿದ್ದಳು. ನಜ್ಮೀನ್ ಗಾಗಿ ಉಮೇಶ್, ತನ್ನ ಹೆಸರನ್ನು ರೆಹಾನ್ ಅಹಮ್ಮದ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಸದ್ಯ ಉಮೇಶ್ ವಿರುದ್ಧ ನಜ್ಮೀನ್ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಬಳ್ಳಾರಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಅವರು ಈಗ ಎಲ್ಲಿದ್ದಾರೆ ಅಂತಾ ಗೊತ್ತಿಲ್ಲ. ನಿನ್ನೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋಗಿ ನೋಡಿದ್ರೂ ಅವರು ಸಿಗಲಿಲ್ಲ. ಸದ್ಯ ನಾನು ಬಳ್ಳಾರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ನಜ್ಮೀನ್ ಹೇಳಿದ್ದಾರೆ.
ಉಮೇಶನ ಮೊಬೈಲಲ್ಲಿದ್ದ ಮೊದಲ ಪತ್ನಿ ಹಾಗೂ ಅವಳ ಮಕ್ಕಳ ಫೋಟೋಗಳನ್ನು ನೋಡಿದಾಗ ನಜ್ಮೀನ್ ಗೆ ಅನುಮಾನ ಬಂದಿದ್ದು, ಬಳ್ಳಾರಿಗೆ ಬಂದು ವಿಚಾರಿಸಿದಾಗ ಉಮೇಶನ ರಂಗಿನಾಟ ಗೊತ್ತಾಗಿದೆ. ಇನ್ನು ಉಮೇಶ್ ಕೂಡ ನಜ್ಮೀನ್ ವಿರುದ್ಧ ತನಗೆ ಬ್ಲ್ಯಾಕ್ಮೇಲ್ ಮಾಡ್ತಿರೋದಾಗಿ ಆರೋಪಿಸಿ ದೂರು ನೀಡಿದ್ದಾರೆ.
ಉಮೇಶ್ ವಿರುದ್ಧ ನಜ್ಮೀನ್ ದೂರು ದಾಖಲಿಸುತ್ತಿದ್ದಂತೆ ಆತ ಬಳ್ಳಾರಿಯಿಂದ ಎಸ್ಕೇಪ್ ಆಗಿದ್ದಾನೆ. ನಜ್ಮೀನ್ ಉಮೇಶನ ವಿರುದ್ಧ ದೂರು ನೀಡಿದ್ರೆ, ಉಮೇಶ, ನಜ್ಮೀನ್ ವಿರುದ್ಧವೇ ಪ್ರತಿ ದೂರು ನೀಡಿದ್ದಾನೆ. ಪ್ರಕರಣ ಸದ್ಯ ಗೊಂದಲದಲ್ಲದ್ದು, ಪೊಲೀಸರ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ.
Bellary Sub Registrar introduces as Muslim and cheats Woman of Marriage, case filed by the Second wife.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 09:42 pm
HK News Desk
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm