ಬ್ರೇಕಿಂಗ್ ನ್ಯೂಸ್
31-10-21 12:57 pm Mangaluru Correspondent ಕ್ರೈಂ
ಮಂಗಳೂರು, ಅ.31: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಎರಡು ತಂಡಗಳು ಬೀದಿ ಕಾಳಗ ನಡೆಸಿದ್ದು ಅಲ್ಲಿ ನಿಲ್ಲಿಸಿದ್ದ ಐದಾರು ವಾಹನಗಳನ್ನು ಜಖಂಗೊಳಿಸಿದ್ದಲ್ಲದೆ ಕಾನೂನು ಕ್ರಮಕ್ಕೆ ಮುಂದಾದ ಪೊಲೀಸರ ಮೇಲೂ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಬಳ್ಳಾಲ್ ಬಾಗ್ ಫ್ರೆಂಡ್ಸ್ ಮತ್ತು ಬಿರುವೆರ್ ಕುಡ್ಲ ಸಂಘಟನೆಗಳ ಕಾರ್ಯಕರ್ತರು ಹೊಡೆದಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮೊದಲಿಗೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಗಲಾಟೆ ಶುರುವಾಗಿದ್ದು ಗುರಾಯಿಸಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿತ್ತು. ಆನಂತರ, ಅಲ್ಲಿಂದ ಮೂರ್ನಾಲ್ಕು ಯುವಕರು ಸೇರಿ ಬಳ್ಳಾಲ್ ಬಾಗ್ ವರೆಗೆ ಬೆನ್ನಟ್ಟಿ ಬಂದಿದ್ದು ಅಲ್ಲಿ ಬೀದಿ ಕಾಳಗ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಬಳ್ಳಾಲ್ ಬಾಗ್ ಸಾಯಿ ನೆಕ್ಸ್ಟ್ ಸೆಂಟರ್ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪುಡಿಗಟ್ಟಿದ್ದಾರೆ.





ಆರು ದ್ವಿಚಕ್ರ ವಾಹನಗಳು ಮತ್ತು ಒಂದು ಕಾರಿನ ಮೇಲೆ ಹಾನಿ ಮಾಡಿದ್ದು ಬ್ಯಾಟ್, ವಿಕೆಟ್, ದೊಣ್ಣೆಯಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಪುಡಿಗಟ್ಟಿದ್ದಾರೆ. ಎರಡೂ ತಂಡಗಳ ಯುವಕರು ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಈ ವೇಳೆ ಮಾಹಿತಿ ತಿಳಿದ ಬರ್ಕೆ ಪೊಲೀಸರು ಬಂದಿದ್ದು ಪರಿಚಿತ ಯುವಕರೇ ಆಗಿದ್ದರಿಂದ ಸಮಾಧಾನ ಪಡಿಸಿದ್ದಾರೆ. ಆದರೆ, ಪೊಲೀಸರ ಮಾತು ಕೇಳದ ಅವರ ಮೇಲೇ ಕೈಮಾಡಿದ್ದಾರೆ.
ಬರ್ಕೆ ಮಹಿಳಾ ಎಸ್ಐ ಶೋಭಾ ಮೇಲೆ ಕೈಮಾಡಿದ್ದು ಅವರ ಕೈಯಲ್ಲಿದ್ದ ವಾಕಿ ಟಾಕಿಯನ್ನು ನೆಲಕ್ಕೆ ಬಿಸಾಡಿದ್ದಾರೆ. ಇತರ ಪೊಲೀಸರ ಮೇಲೂ ಕೈಮಾಡಿದ್ದಾರೆ. ಎರಡು ತಂಡಗಳ ವೈಯಕ್ತಿಕ ದ್ವೇಷದಲ್ಲಿ ಪೊಲೀಸರ ಮೇಲೆ ಕೈಮಾಡಿದ್ದು ಆನಂತರ ಹೆಚ್ಚಿನ ಪೊಲೀಸರು ಬಂದು ಆರು ಮಂದಿಯನ್ನು ಸ್ಥಳದಿಂದ ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಎಸ್ಐ ಮೇಲೆ ಕೈಮಾಡಿದ ಧೀರಜ್ ಶೆಟ್ಟಿ, ರಕ್ಷಿತ್, ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಎಂಬವರನ್ನು ಬಂಧಿಸಿದ್ದಾರೆ. ಇತರರು ಅಲ್ಲಿಂದ ಓಡಿ ತಪ್ಪಿಸಿದ್ದಾರೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಎಸ್ಐ ಶೋಭಾ ದೂರು ನೀಡಿದ್ದು ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದಾರೆ.
Seven youths have been arrested after two groups clash at ballalbagh late night on Saturday October 30. It is said that late on Saturday night, two groups of youth engaged in fight as a result of which, one Seven vehicles were damaged. Police commissioner N Shashi Kumar informed that police have up take suo moto cognizance of the incident and arrested seven persons.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 01:01 pm
HK News Staffer
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm