ಬ್ರೇಕಿಂಗ್ ನ್ಯೂಸ್
19-10-21 06:50 pm Mangaluru Correspondent ಕ್ರೈಂ
ಉಳ್ಳಾಲ, ಅ.19: ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ಪದೇ ಪದೇ ಪೊಲೀಸ್ ದೂರು ನೀಡುತ್ತಿದ್ದ ಕರಾಟೆ ಮಾಸ್ಟರ್ ಓರ್ವರನ್ನ ಹಾಡು ಹಗಲೇ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಇರಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಉಳಿಯ ನಿವಾಸಿ ಹರೀಶ್ ಗಾಣಿಗ(42) ಇರಿತಕ್ಕೊಳಗಾದ ವ್ಯಕ್ತಿ. ಉಳ್ಳಾಲ ವೀರಭದ್ರ ದೇವಸ್ಥಾನದ ಬಳಿಯಲ್ಲಿರುವ ಹರೀಶ್ ಅವರ ಗ್ಯಾಸ್ ಅಕ್ಸೆಸರೀಸ್ ಅಂಗಡಿಯಲ್ಲಿ ಇರಿತ ನಡೆದಿದೆ.
ಸ್ಥಳೀಯ ನಿವಾಸಿ ಗಾಂಜಾ ವ್ಯಸನಿ ವಿಶಾಲ್ ಯಾನೆ ವಿಕಾಸ್ ಎಂಬಾತ ಇಂದು ಸಂಜೆ ಹರೀಶ್ ಅವರ ಅಂಗಡಿಗೆ ನುಗ್ಗಿ ಸೀಯಾಳ ಕೆತ್ತುವ ಕತ್ತಿ ಮತ್ತು ಹರಿತ ಚಾಕುವಿನಿಂದ ಇರಿದಿದ್ದಾನೆಂದು ಆರೋಪಿಸಲಾಗಿದೆ. ಗಾಯಾಳು ಹರೀಶ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ದೂರು ಕೊಟ್ಟಿದ್ದಕ್ಕೇ ಪ್ರತೀಕಾರ;
ಉಳ್ಳಾಲದ ಉಳಿಯದಲ್ಲಿ ವಿಶಾಲ್ ಸೇರಿದಂತೆ ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗಿ ಕುಕೃತ್ಯಗಳನ್ನ ನಡೆಸುತ್ತಿದ್ದು ಈ ಬಗ್ಗೆ ಉಳಿಯ ನಿವಾಸಿ ಕರಾಟೆ ಮಾಸ್ಟರ್ ಆಗಿರುವ ಹರೀಶ್ ಅವರು ಎರಡು ಬಾರಿ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಜೀವ ಬೆದರಿಕೆ ಇದೆ ಎಂದೂ ಪೊಲೀಸರಿಗೆ ತಿಳಿಸಿದ್ದರು. ಆದರೆ ಪೊಲೀಸರು ಗಾಂಜಾ ಮಾಫಿಯಾದ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ. ಒಂದು ತಿಂಗಳ ಹಿಂದೆ ಗಾಂಜಾ ವ್ಯಸನಿ ವಿಶಾಲ್ ವಿರುದ್ಧ ಹರೀಶ್ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು ಅಸಡ್ಡೆ ತೋರಿದ ಪೊಲೀಸರು ಇಂದು ಬೆಳಗ್ಗೆ ವಿಶಾಲನ್ನ ಠಾಣೆಗೆ ವಿಚಾರಣೆಗೆ ಕರೆಸಿದ್ದರು. ಅಷ್ಟಕ್ಕೇ ವ್ಯಘ್ರನಾದ ವಿಶಾಲ್ ಇಂದು ಸಂಜೆ ಒಬ್ಬನೇ ಎರಡು ಮಾರಕಾಸ್ತ್ರಗಳನ್ನ ಹಿಡಿದು ಹರೀಶ್ ಅವರ ಅಂಗಡಿಗೆ ನುಗ್ಗಿ ಇರಿದಿದ್ದಾನೆ.
ಉಳ್ಳಾಲದಲ್ಲಿ ಗಾಂಜಾ ಮಾಫಿಯಾ ವ್ಯಾಪಕವಾಗಿದ್ದು ಪೊಲೀಸರು ವ್ಯಸನಿಗಳ ವಿರುದ್ಧ ದೂರು ನೀಡಿ ಅಂತ ಒಂದು ಕಡೆ ಹೇಳುತ್ತಿದ್ದರೆ, ದೂರು ಕೊಟ್ಟವರು ಹೀನಾಯವಾಗಿ ಇರಿತಕ್ಕೊಳಗಾಗುತ್ತಿದ್ದು ಪೊಲೀಸರ ಬಗ್ಗೆ ಜನರು ಅನುಮಾನ ಪಡುವಂತಾಗಿದೆ.
Mangalore Karate Master Stabbed by Drug addict youth at his shop in Ullal. Harish Ganiga is the person being stabbed. Recently Harish had lodged a complaint against Drug addicts in the locality to Ullal Police but the cops who failed to take action had to witness a stabbing incident. Drug addict Vishal is the youth who came to the shop of Harish and stabbed him using sharp weapons.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm