ಬ್ರೇಕಿಂಗ್ ನ್ಯೂಸ್
07-10-21 12:23 pm Mangaluru Correspondent ಕ್ರೈಂ
ಉಳ್ಳಾಲ, ಅ.7: ರಬ್ಬರ್ ತೋಟದ ನಡುವಲ್ಲಿರುವ ಒಂಟಿ ಬಂಗಲೆಗೆ ನುಗ್ಗಿದ ಕಳ್ಳರು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 5 ಹಿತ್ತಾಳೆಯ ದೀಪಗಳನ್ನ ಕದ್ದೊಯ್ದ ಘಟನೆ ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನಲ್ಲಿ ನಡೆದಿದೆ.
ದುಬೈನಲ್ಲಿ ವಾಸವಿರುವ ಸುಜಾತ ಎಂಬವರಿಗೆ ಸೇರಿದ ಯಾರೂ ವಾಸವಿಲ್ಲದ ಒಂಟಿ ಬಂಗಲೆ ಮನೆಯ ಹಿಂಬಾಗಿಲನ್ನ ಪಿಕ್ಕಾಸಲ್ಲಿ ಮುರಿದು ಕಳ್ಳತನ ನಡೆಸಲಾಗಿದೆ. ಮೊನ್ನೆ ರಾತ್ರಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಬಂಗಲೆಯ ಕೋಣೆಯ ದೀಪ ಉರಿಯುವುದನ್ನ ಹತ್ತಿರದ ನಿವಾಸಿಯಾಗಿರುವ ಸುಜಾತ ಅವರ ಅಣ್ಣ ವಕೀಲ ಗಂಗಾಧರ್ ಉಳ್ಳಾಲ್ ಅವರು ಗಮಿನಿಸಿದ್ದು ಬಂಗಲೆಯೊಳಗೆ ಹೋದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.









ಬಂಗಲೆಯ ಹಿಂಬಾಗಿಲಿನ ಬಳಿಯಲ್ಲೇ ಇದ್ದ ಪಿಕ್ಕಾಸಿನಲ್ಲಿ ಕಬ್ಬಿಣದ ಸಲಾಕೆಯ ಗೇಟನ್ನು ಮುರಿದು ಕಳ್ಳರು ಒಳ ಹೊಕ್ಕಿದ್ದಾರೆ. ಮನೆಯ ಹಾಲಲ್ಲಿದ್ದ ಎತ್ತರದ ಮೂರು ಹಿತ್ತಾಳೆಯ ದೀಪ ಮತ್ತು ದೇವರ ಕೋಣೆಯಲ್ಲಿದ್ದ ಎರಡು ಸಣ್ಣ ಹಿತ್ತಾಳೆಯ ದೀಪಗಳನ್ನ ಕದ್ದೊಯ್ದಿದ್ದಾರೆ. ಮನೆಯ ಕಪಾಟುಗಳನ್ನ ಕಳ್ಳರು ತಡಕಾಡಿದ್ದು ಮನೆಯೊಳಗೆ ಯಾವುದೇ ನಗ, ನಗದು ಸಿಗದೆ ದೀಪಗಳನ್ನ ಎಗರಿಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.
ನಿರ್ಜನ ಎಸ್ಟೇಟಲ್ಲಿ ಸಿಸಿ ಕ್ಯಾಮೆರಾ ವರ್ಕಿಂಗ್ ಇಲ್ಲ
ಬಬ್ಬಕಟ್ಟೆಯಿಂದ-ರಾಣಿಪುರ ಸಂಪರ್ಕದ ಒಳ ನಿರ್ಜನ ರಸ್ತೆಯ ನಡುವಲ್ಲಿ ಚಂದಪ್ಪ ಎಸ್ಟೇಟ್ ಇದ್ದು ಇಲ್ಲಿ ಉಳ್ಳಾಲ ನಗರಸಭೆ ಆಡಳಿತ ಹಾಕಿಸಿದ್ದ ಸಿಸಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಇಂತಹ ನಿರ್ಜನ ಪ್ರದೇಶದಲ್ಲಿ ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಕಳ್ಳತನ ನಡೆದ ಮನೆ ಮಾಲಕಿ ಸುಜಾತ ಅವರ ಸಹೋದರ ನಗರ ಸದಸ್ಯರಾದ ದಿನಕರ ಉಳ್ಳಾಲ್ ಆಗ್ರಹಿಸಿದ್ದಾರೆ.
Thokottu Burglars enter bungalow, FIve steal brass lamps worth lakhs have been stolen. Ullal police have visited the spot and are now investigating the case.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 09:42 pm
HK News Desk
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm