ಬ್ರೇಕಿಂಗ್ ನ್ಯೂಸ್
29-09-21 05:50 pm Headline Karnataka News Network ಕ್ರೈಂ
ಬೆಂಗಳೂರು, ಸೆ. 29: ಹಣಕ್ಕಾಗಿ ವಕೀಲರೊಬ್ಬರನ್ನು ಅಪಹರಿಸಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಬಿಲ್ಡರ್, ಫೈನಾನ್ಷಿಯರ್, ಐಟಿ ಕಂಪನಿ ಮಾಲೀಕ, ಗ್ಯಾಂಗ್ ಆರ್ಟಿಸ್ಟ್ ಮತ್ತು ಬೌನ್ಸರ್ಗಳು ಸೇರಿದಂತೆ 9 ಮಂದಿಯ ಗ್ಯಾಂಗ್ ಅನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿಗಳರ ಪಾಳ್ಯ ಕರಿಹೋಬನಹಳ್ಳಿ ವಾಸಿ ಸಿದ್ದೇಶ್ (31), ಡಾಲರ್ಸ್ ಕಾಲೋನಿ 2ನೆ ಮೈನ್ ವಾಸಿ ವಿಜಯ್ಕುಮಾರ್.ಜಿ (33), ಬೊಮ್ಮನಹಳ್ಳಿ ನಿವಾಸಿ ಸಂಜಯ್.ಎಸ್ ಅಲಿಯಾಸ್ ಸಂಜು (27), ಶಾಂತಿಪ್ರಿಯ ಲೇಔಟ್ನ ನೆಲ್ಸನ್ಕುಮಾರ್.ಎಫ್ ಅಲಿಯಾಸ್ ನೆಲ್ಸನ್ (23), ಕತ್ರಿಗುಪ್ಪೆಯ ಯುಗಾನಂದ್.ಜಿ (22), ಬೆಟ್ಟಹಳ್ಳಿ ಲೇಔಟ್ ವಾಸಿ ನರೇಶ್ (30), ಜಗಜೀವನರಾಂ ನಗರದ ಅರುಣ್ಕುಮಾರ್.ಎಲ್ ಅಲಿಯಾಸ್ ಅರುಣ (29), ನ್ಯೂ ಗುಡ್ಡದಹಳ್ಳಿಯ ಯುವರಾಜ್.ಆರ್ (31), ಚಿಕ್ಕಮಧುರೆ ಗ್ರಾಮದ ಅಶೋಕ.ಕೆ(31) ಬಂತ ಆರೋಪಿಗಳು.
ನಾಗರಬಾವಿ ಮುಖ್ಯರಸ್ತೆ ಸ್ವಾತಿ ಹೊಟೇಲ್ ಬಳಿ ಸೆಪ್ಟೆಂಬರ್ 20 ರಂದು ಬೆಳಗ್ಗೆ 11.30ರ ಸಮಯದಲ್ಲಿ ವಕೀಲರಾದ ಅಭಯ್ ಆರ್. ಕುಲಕರ್ಣಿ ಎಂಬುವವರನ್ನು ಹಣಕಾಸಿನ ವಿಚಾರಕ್ಕೆ ಈ ಆರೋಪಿಗಳು 2 ಫಾಚ್ರ್ಯೂನರ್ ಕಾರುಗಳಲ್ಲಿ ಬಂದು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟಿದ್ದರು.
ನಂತರ ಮೊಬೈಲ್ ಮೂಲಕ ಅಭಯ್ ಆರ್.ಕುಲಕರ್ಣಿ ಅವರ ತಮ್ಮ ವರುಣ್ ಆರ್.ಕುಲಕರ್ಣಿ ಎಂಬುವವರಿಗೆ ಕರೆ ಮಾಡಿ 30 ಲಕ್ಷ ರೂ. ಹಣ ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೆ ಬಂಧನದಲ್ಲಿಟ್ಟಿದ್ದ ವ್ಯಕ್ತಿಗೆ ಹಾಕಿ ಸ್ಟಿಕ್ ಹಾಗೂ ಕೈಮುಷ್ಠಿಯಿಂದ ಗುದ್ದಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದರು.
ಈ ಸಂಬಂಧ ವರುಣ್ ಆರ್.ಕುಲಕರ್ಣಿ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ 2 ಬಿಳಿ ಬಣ್ಣದ ಫಾಚ್ರ್ಯೂನರ್ ಕಾರು, 1 ಹಾಕಿ ಸ್ಟಿಕ್, 9 ವಿವಿಧ ಕಂಪೆನಿಗಳ ಮೊಬೈಲ್ ಫೆಪೊನ್ಗಳನ್ನು ವಶಪಡಿಸಿಕೊಂಡು ಅಪಹರಣಕ್ಕೊಳಕಾಗಿದ್ದ ವಕೀಲರನ್ನು ಪೊಲೀಸರು ರಕ್ಷಿಸಿದ್ದಾರೆ.
ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ಡಾ.ಸಂಜೀವ್ ಎಂ.ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪ ವಿಭಾಗದ ಸಹಾಯಕಪೊಲೀಸ್ ಕಮೀಷನರ್ ಯು.ಡಿ.ಕೃಷ್ಣಕುಮಾರ್ ನಿರ್ದೇಶನದಲ್ಲಿ ಅನ್ನಪೂರ್ಣೇಶ್ವರಿ ಠಾಣೆ ಇನ್ಸ್ಪೆಕ್ಟರ್ ಲೋಹಿತ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
Bengaluru Kidnap Lawyer Kidnap Bengaluru Police Stunt Actors Sandalwood
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 03:04 pm
Mangalore Correspondent
Mervin Mendonca Accident, Udupi, Mangalore: ರ...
23-08-25 01:29 pm
ಹಿಂದುಗಳ ಹಬ್ಬ, ಆಚರಣೆಗೆ ತೊಂದರೆ ಇಲ್ಲ, ಬಿಜೆಪಿ ಶಾಸ...
22-08-25 05:07 pm
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
23-08-25 11:11 am
Mangaluru Correspondent
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm