ಬ್ರೇಕಿಂಗ್ ನ್ಯೂಸ್
27-09-21 10:36 pm Headline Karnataka News Network ಕ್ರೈಂ
ಚಿಕ್ಕಬಳ್ಳಾಪುರ, ಸೆ.27: ತಮ್ಮ ಅಕ್ರಮ ಸಂಬಂಧ ಪುತ್ರಿಗೂ ತಿಳಿದು ಮರ್ಯಾದೆ ಬಟಾ ಬಯಲಾಯ್ತು ಅಂತ ಮುಜುಗರ ಪಟ್ಟುಕೊಂಡ ತಾಯಿ ತನ್ನ ಕರುಳ ಕುಡಿಯನ್ನೇ ಪ್ರಿಯಕರನ ಜೊತೆ ಸೇರಿ ಕತ್ತು ಹಿಸುಕಿ ಕೊಲೆಗೈದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಎಂಬಲ್ಲಿ ಸೆ.5 ರಂದು ಬಾವಿಯಲ್ಲಿ ಯುವತಿ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಿದ್ದ ಮೃತ ಯುವತಿಯ ತಂದೆ, ತಾಯಿ, ದೊಡ್ಡಪ್ಪನೇ ಕೊಲೆಗಾರರಾಗಿದ್ದು ಪೊಲೀಸರನ್ನು ಕೈಕೋಳ ತೊಡಿಸಿದ್ದಾರೆ.
ಮುಸಲ್ಮಾನಪುರ ಗ್ರಾಮದ ಪರ್ವೀನ್ ಮುಬಾರಕ್ (34) ಎಂಬ ಯುವತಿಯ ಕೊಲೆ ನಡೆದಿದ್ದು ಪಾಳು ಬಾವಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ಬಳಿಕ ಮೃತಳ ದೊಡ್ಡಪ್ಪ ಮೈದಗೋಳಂ ಪ್ಯಾರೇಜಾನ್, ಮೃತಳ ತಾಯಿ ಗುಲ್ಜಾರ್ ಬಾನು, ಮೃತಳ ತಂದೆ ಪ್ಯಾರೇಜಾನ್ ಅವರನ್ನು ಬಂಧಿಸಿದ್ದಾರೆ.
ಮೃತಳ ತಾಯಿ ಗುಲ್ಜಾರ್ ಬಾನುಗೆ ತನ್ನ ಅಕ್ಕನ ಗಂಡನ ಜೊತೆ ಅನೈತಿಕ ಸಂಬಂಧ ಇದ್ದುದು ಮಗಳಿಗೆ ಗೊತ್ತಾಗಿ ಪ್ರಶ್ನೆ ಮಾಡಿದ್ದಳು. ಅದೇ ಕಾರಣಕ್ಕೆ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ.

ಮೃತ ಪರ್ವೀನ್ ಮುಬಾರಕ್ 10 ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಪ್ರಿಯಕರ ಶಿವಪ್ಪನೊಂದಿಗೆ ವಾಸವಿದ್ದಳು. ಆದ್ರೆ ಪ್ರಿಯಕರ ಶಿವಪ್ಪ ಕೆಲ ಸಮಯದಲ್ಲಿ ಬಳಿಕ ಮೃತಪಟ್ಟಿದ್ದ. ನಂತರ ಮತ್ತೊಬ್ಬ ವಿನಯ್ ಕುಮಾರ್ ಜೊತೆ ವಾಸವಾಗಿದ್ದಳು. ಆದರೆ ಆತನೂ ಕೆಲ ವರ್ಷಗಳಲ್ಲಿ ಮೃತಪಟ್ಟಿದ್ದ. ಇಬ್ಬರನ್ನು ಕಳೆದುಕೊಂಡ ಪರ್ವೀನ್, ತವರು ಮನೆ ಸೇರಿದ್ದಳು.
ಆದರೆ, ಮನೆಗೆ ಬಂದರೆ ತಾಯಿಯೇ ತನ್ನ ಅಕ್ಕನ ಗಂಡನ ಜೊತೆ ಸಂಬಂಧ ಇರಿಸಿಕೊಂಡಿದ್ದಳು. ತನ್ನ ಅನೈತಿಕ ಸಂಬಂಧವನ್ನು ತಿಳಿದ ಮಗಳು ಪ್ರಶ್ನೆ ಮಾಡಿದ್ದಳು. ಆದರೆ ಕಟ್ಟಿಕೊಂಡ ಗಂಡನ ಬಿಟ್ಟು ಬೇರೆಯವರ ಜೊತೆ ಹೋಗಿ ಮರಳಿ ಬಂದಿದ್ದ ವಿಚಾರ ಮನೆಯಲ್ಲಿ ಕೋಪ ಇತ್ತು. ಅದರ ಜೊತೆಗೆ, ತನ್ನ ಸುಖಕ್ಕೆ ಅಡ್ಡಬಂದಿದ್ದ ನೆಪದಲ್ಲಿ ತಾಯಿಯೇ ಕೊಲೆಗೆ ಸ್ಕೆಚ್ ಹಾಕಿದ್ದಳು. ಅಕ್ಕನ ಗಂಡ ಹಾಗೂ ತನ್ನ ಪತಿಯೊಂದಿಗೆ ಸೇರಿ ದಾರದಿಂದ ಬಿಗಿದು ಕೊಲೆ ಮಾಡಿದ್ದಾಳೆ. ಆನಂತರ, ಪಾಳು ಬಾವಿಗೆ ಎಸೆದಿದ್ದರು. ಶವದಲ್ಲಿ ಕತ್ತು ಬಿಗಿದಿದ್ದು ಕಂಡಿದ್ದರಿಂದ ಪೊಲೀಸರು ಸಂಶಯಗೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ, ಆಕೆಯೇ ನೇಣು ಬಿಗಿದು ಸಾವನ್ನಪ್ಪಿದ್ದಾಗಿ ಕತೆ ಕಟ್ಟಿದ್ದರು.
ಆದರೆ, ಪೊಲೀಸರ ವಿಚಾರಣೆಯಲ್ಲಿ ಸತ್ಯ ಹೊರಬಂದಿದ್ದು ಅಸಲಿ ಆರೋಪಿಳು ಜೈಲು ಸೇರಿದ್ದಾರೆ.
Chikkaballapur Mother and family Murder own daughter over illicit affiar tell cops as suicide three arrested. Mother along with her brothers had killed thier daughter and then threw her into the well and represented it as suicide to the police. The deceases has been identified as Parvin.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
01-02-26 02:00 pm
HK News Desk
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
01-02-26 10:29 pm
Mangalore Correspondent
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
01-02-26 03:41 pm
HK News Staffer
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm