ಬ್ರೇಕಿಂಗ್ ನ್ಯೂಸ್
 
            
                        19-09-21 01:52 pm Mangaluru Correspondent ಕ್ರೈಂ
 
            Photo credits : Representational
ಪಡುಬಿದ್ರಿ, ಸೆ.19 : ಮಂಗಳೂರು- ಮುಂಬಯಿ ಕೊಂಕಣ ರೈಲ್ವೆಯಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದ್ದು, ಉಡುಪಿ ಜಿಲ್ಲೆಯ ಎಲ್ಲೂರು ನಿವಾಸಿ ಸುಚಿತಾ ಕುಸುಮಾಕರ್ ಶೆಟ್ಟಿಯವರ ಬೆಲೆ ಬಾಳುವ ಮೊಬೈಲ್ ಸಹಿತ ನಗದು ಇದ್ದ ಪರ್ಸ್ ಅನ್ನು ಸೆ.16 ರ ರಾತ್ರಿ ಕಳವು ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.
ಪರ್ಸ್ನಲ್ಲಿ 75 ಸಾವಿರ ರೂ. ಮೌಲ್ಯದ ಮೊಬೈಲ್, 12 ಸಾವಿರ ರೂ. ನಗದು ಇನ್ನಿತರ ವಸ್ತುಗಳಿದ್ದವು. ಸುಚಿತಾ ಅವರು ಬೆಲೆ ಬಾಳುವ ವಜ್ರ ಮತ್ತು ಚಿನ್ನಾಭರಣಗಳನ್ನು ಸೀಟ್ನಡಿ ಇರಿಸಿದ್ದ ಬ್ಯಾಗ್ನಲ್ಲಿಟ್ಟಿದ್ದರು. ಹಾಗಾಗಿ ಅವುಗಳು ಕಳವಾಗಿಲ್ಲ. ಮುಂಬೈ ಬಂಟರ ಸಂಘದ ನಗರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಕುಸುಮಾಕರ್ ಶೆಟ್ಟಿ ಮುಂಬಯಿಗೆ ತೆರಳಲು ಉಡುಪಿಯಲ್ಲಿ ಮತ್ಸ್ಯ ಗಂಧ ರೈಲು ಹತ್ತಿದ್ದರು. ರೈಲಿನ ಎಸಿ ಕೋಚ್ನಲ್ಲಿ ಸಹೋದರಿಯೊಂದಿಗೆ ಪ್ರಯಾಣ ಬೆಳೆಸಿದ್ದರು.

ಉಡುಪಿಯಿಂದ ಹೊರಟ ರೈಲು ತಡರಾತ್ರಿ ಪನ್ವೇಲ್ ಸಮೀಪದ ರೋಹಾ - ನಾಗೋಥಾಣೆಗೆ ತಲುಪಿದ್ದಾಗ ಸುಚಿತಾರಿಗೆ ನಿದ್ದೆ ಆವರಿಸಿದ್ದು ಮುಂಜಾನೆ 3.40ರ ವೇಳೆ ತಲೆದಿಂಬಿನಡಿ ಇಟ್ಟಿದ್ದ ಪರ್ಸ್ನ್ನು ಕಳ್ಳರು ಎಳೆದುಕೊಂಡು ಹೋಗಿದ್ದಾರೆ. ಕಂಪಾರ್ಟ್ಮೆಂಟಿನ ಕೊನೆಯ ಸೀಟ್ ನಲ್ಲಿ ಮಲಗಿದ್ದ ಕಾರಣ ಪರ್ಸ್ ಎಳೆದು ಬಾಗಿಲಿನ ಮೂಲಕ ಓಡಿ ಹೋಗಿದ್ದಾನೆ. ಈ ಸಂದರ್ಭ ಅವರು ಬೊಬ್ಬಿಟ್ಟರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.
ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರ ಪ್ರಕಾರ, ಮುಂಬೈಯಿಂದ ಮಂಗಳೂರಿಗೆ ಬರುವ ಮತ್ಸ್ಯ ಗಂಧ ರೈಲಿನಲ್ಲಿ ಎರಡು ಕುಖ್ಯಾತ ಕಳ್ಳರ ತಂಡಗಳು ನಿರಂತರ ಕಳವು ಕೃತ್ಯದಲ್ಲಿ ತೊಡಗಿವೆ. ಆದರೆ ರೈಲ್ವೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ.
 
            
            
            Udupi Robbery in Matsyagandha train Man robbed of 75 Thousand. The railway police are showing negligence it is said in this case.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 10:47 pm
                        
            
                  
                Mangalore Correspondent    
            
                    
 
    MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    
            
             31-10-25 10:57 pm
                        
            
                  
                Mangalore Correspondent    
            
                    
 
    ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm