ಬ್ರೇಕಿಂಗ್ ನ್ಯೂಸ್
 
            
                        18-09-21 01:33 pm Mangaluru Correspondent ಕ್ರೈಂ
 
            ಕೊಣಾಜೆ, ಸೆ.18: ಮುಡಿಪು ಜವಾಹರಲಾಲ್ ನವೋದಯ ವಿದ್ಯಾಲಯದ ಬಳಿಯ ಪೂಪಾಡಿ ಕ್ರಾಸ್ ನಲ್ಲಿ ಮರಿಕ್ಕಳ ಕಸಾಯಿಖಾನೆಗೆ ಎರಡು ಹಸುಗಳನ್ನ ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನ ತಡೆದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದರೂ, ಓರ್ವನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದು ಬಜರಂಗದಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಣಾಜೆ ಪೊಲೀಸರು ಬಜರಂಗದಳ ನೀಡಿದ್ದ ಮಾಹಿತಿಯಂತೆ ಪೂಪಾಡಿ ಕ್ರಾಸ್ ನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಸುಗಳನ್ನ ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ಸಮೇತ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಠಾಣೆಗೆ ಫೋನ್ ಮಾಡಿ ವಿಚಾರಿಸಿದಾಗ, ಪ್ರತಿಕ್ರಿಯಿಸಿದ ಪೊಲೀಸ್ ಸಿಬ್ಬಂದಿ, ಪಿಕ್ ಅಪ್ ವಾಹನ, ಹಸುಗಳನ್ನ ವಶಕ್ಕೆ ಪಡೆದಿದ್ದೇವೆ FIR ಇನ್ನೂ ಆಗಿಲ್ಲ. ಪಿಕ್ ಅಪ್ ನಲ್ಲಿ ಸಾಗಿಸುತ್ತಿದ್ದ ಹಸುಗಳನ್ನ ಸ್ಥಳೀಯ ಕೃಷಿಕರೋರ್ವರು ಹಾಲು ಉತ್ಪಾದಕ ಸಂಘದಿಂದ ಖರೀದಿಸಿದ್ದೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದಿದ್ದರು. ಆದರೆ ಸಂಜೆ ವೇಳೆ, ಕೊಣಾಜೆ ಠಾಣೆಯಲ್ಲಿ ಕೊಳ್ನಾಡು ನಿವಾಸಿ ಅಬ್ದುಲ್ ರಝಾಕ್ ಎಂಬಾತನ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿತ್ತು.


ಪೊಲೀಸರು ಇಬ್ಬರನ್ನ ವಶಕ್ಕೆ ತೆಗೆದಿದ್ದು, ಮತ್ತೋರ್ವ ಆರೋಪಿಯನ್ನ ಪ್ರಕರಣದಿಂದ ಕೈ ಬಿಟ್ಟದ್ದೇಕೆಂದು ಬಜರಂಗದಳದ ಜಿಲ್ಲಾ ಗೋರಕ್ಷಾ ಪ್ರಮುಖರಾದ ಪವಿತ್ರ ಕೆರೆಬೈಲ್ ಪ್ರಶ್ನಿಸಿದ್ದಾರೆ. ಕಾಣದ ಕೈಗಳ ಪ್ರಭಾವದಿಂದ ಪೊಲೀಸರು ದನಕಳ್ಳತನದ ಆರೋಪಿಯನ್ನ ಕೇಸು ದಾಖಲಿಸದೆ ಬಿಟ್ಟದ್ದು ಅಕ್ಷಮ್ಯವಾಗಿದ್ದು ಇದನ್ನ ವಿಶ್ವಹಿಂದೂ ಪರಿಷತ್, ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲದೆ ಈ ವಿಚಾರವನ್ನ ನಗರ ಪೊಲೀಸ್ ಕಮಿಷನರ್ ಗಮನಕ್ಕೂ ತರುವುದಾಗಿ ಪವಿತ್ರ ಕೆರೆಬೈಲ್ ಹೇಳಿದ್ದಾರೆ.
ಕರ್ನಾಟಕ - ಕೇರಳದ ಗಡಿಭಾಗವಾಗಿರುವ ಮರಿಕ್ಕಳದಲ್ಲಿ ಅಕ್ರಮ ಕಸಾಯಿಖಾನೆಯಿದ್ದು ನಿರಂತರವಾಗಿ ಗೋವುಗಳನ್ನ ಸುಳ್ಳು ದಾಖಲೆ ಸೃಷ್ಟಿಸಿ ಸಾಗಿಸುತ್ತಿರುವುದು ತಿಳಿದು ಬಂದಿದೆ. ಅದರ ಮಾಹಿತಿಯನ್ನೇ ಕೊಣಾಜೆ ಪೊಲೀಸರಿಗೆ ಮೊನ್ನೆ ನಮ್ಮ ಕಾರ್ಯಕರ್ತರು ನೀಡಿದ್ದು , ಪೊಲೀಸರು ವಶಕ್ಕೆ ಪಡೆದ ಆರೋಪಿಯನ್ನ ಬಿಟ್ಟು ಕಳಿಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಪವಿತ್ರ ಕೆರೆಬೈಲ್ ಆರೋಪಿಸಿದ್ದಾರೆ.
 
            
            
            Mangalore Pickup van held for cattle trafficking in Mudipu Case turns into controversy after Konaje Police have left the prime accused. The Bajrang dal members have alleged and condemned the act of Konaje Police.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 10:47 pm
                        
            
                  
                Mangalore Correspondent    
            
                    
 
    MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    
            
             31-10-25 10:57 pm
                        
            
                  
                Mangalore Correspondent    
            
                    
 
    ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm