ಬ್ರೇಕಿಂಗ್ ನ್ಯೂಸ್
 
            
                        28-08-21 10:37 pm Mangaluru Correspondent ಕ್ರೈಂ
 
            ಮಂಗಳೂರು, ಆಗಸ್ಟ್ 28: ಪೊಲೀಸರು ಕಳ್ಳರನ್ನು ಹಿಡಿಯೋರು ಅಂತಾರೆ. ಹಾಗಾಗಿ, ಕಳ್ಳ ಏನಿದ್ದರೂ ಪೊಲೀಸರ ಮನೆಗಂತೂ ಕನ್ನ ಹಾಕಲು ಹೋಗಲ್ಲ. ಸಿಕ್ಕಿಬಿದ್ದರೆ ಬೆನ್ನು ಚಪ್ಪಡಿ ಮಾಡಿಕೊಳ್ಳಬೇಕು ಅಂತ ಪೊಲೀಸರ ಉಸಾಬರಿ ಬೇಡವೆಂದು ದೂರ ನಿಲ್ಲುತ್ತಾರೆ. ಆದರೆ, ಇಲ್ಲೊಬ್ಬ ಪೊಲೀಸರಿಗೇ ಮೇಷ್ಟ್ರು ಆಗಿರುವ ಇನ್ ಸ್ಪೆಕ್ಟರ್ ಒಬ್ಬರ ಮನೆಗೆ ಕನ್ನ ಹಾಕಿದ್ದಾನೆ.
ಹೌದು.. ಮಂಗಳೂರಿನಲ್ಲಿ ಈ ಹಿಂದೆ ಉರ್ವಾ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ, ಸದ್ಯಕ್ಕೆ ಸಂಚಾರ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಮಹಮ್ಮದ್ ಶರೀಫ್ ಅವರ ಮನೆಯ ಹೊರಗೆ ನಿಲ್ಲಿಸಿದ್ದ ಸೈಕಲನ್ನು ಕಳ್ಳ ಎಗರಿಸಿದ್ದಾನೆ. ಉರ್ವಾ ಮೈದಾನದ ಬಳಿಯ ಚೈತನ್ಯ ಅಪಾರ್ಟ್ಮೆಂಟ್ ನಲ್ಲಿ ಒಂದನೇ ಮಹಡಿಯಲ್ಲಿ ಇನ್ ಸ್ಪೆಕ್ಟರ್ ಶರೀಫ್ ಮನೆಯಿದೆ.
ಕೆಳಗೆ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಶರೀಫ್ ಪುತ್ರನಿಗೆ ಸೇರಿದ 25 ಸಾವಿರ ಮೌಲ್ಯದ ಸೈಕಲನ್ನು ವ್ಯಕ್ತಿಯೊಬ್ಬ ಎಗರಿಸಿದ್ದಾನೆ. ಸೈಕಲನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಫ್ಲಾಟಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಗಸ್ಟ್ 26ರಂದು ಮಧ್ಯಾಹ್ನ ಘಟನೆ ನಡೆದಿದ್ದು, ಈ ಬಗ್ಗೆ ಇನ್ ಸ್ಪೆಕ್ಟರ್ ಶರೀಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ಕಳವು ಪೊಲೀಸರ ಮನೆಯಿಂದಲೇ ಆಗಿದ್ದರೂ, ಆ ಬಗ್ಗೆ ದೂರು ದಾಖಲು ಮಾಡಬೇಕಾದ್ದು ಪೊಲೀಸ್ ಠಾಣೆಯಲ್ಲೇ ತಾನೆ.
ಆದರೆ, ಇಲ್ಲಿ ಠಾಣೆಯ ಮುಖ್ಯಸ್ಥ ಆಗಿರುವ ಇನ್ ಸ್ಪೆಕ್ಟರ್ ಮನೆಯಿಂದಲೇ ಕಳವಾಗಿದ್ದು, ಚಾಣಾಕ್ಷ ಕಳ್ಳ ಸೈಕಲನ್ನು ಎಗರಿಸಿ ಪೊಲೀಸನಿಗೇ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಸದ್ಯಕ್ಕೆ ಸೈಕಲ್ ಕದ್ಕೊಂಡು ತೆರಳಿರುವ ಕಳ್ಳನ ಸಿಸಿಟಿವಿ ಫೋಟೋವನ್ನು ಪೊಲೀಸರು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದಾರೆ. ಸೈಕಲಿಗೆ ಸೀರಿಯಲ್ ನಂಬರ್ ಅಂತೂ ಇಲ್ಲ. ಕಳ್ಳನ ಮುಖ ನೋಡಿಯೇ ಸೈಕಲ್ ಹುಡುಕಬೇಕಷ್ಟೆ.
 
            
            
            Man steals bicycle worth 25 thousand from Traffic Police inspectors Shariff's house in Urwa, Mangalore
 
    
            
             30-10-25 11:00 pm
                        
            
                  
                Bangalore Correspondent    
            
                    
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             30-10-25 11:16 pm
                        
            
                  
                Mangalore Correspondent    
            
                    
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
 
    
            
             29-10-25 10:43 pm
                        
            
                  
                Mangalore Correspondent    
            
                    
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
 
    ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm